ಕರಾಚಿಗೆ ಅಪ್ಪಳಿಸಲಿದೆ ಬೈಪರ್ಜಾಯ್: 15ರಂದು ಗುಜರಾತ್ನ 6 ಜಿಲ್ಲೆಗಳಲ್ಲಿ ಭಾರೀ ಮಳೆ
Team Udayavani, Jun 12, 2023, 7:17 AM IST
ನವದೆಹಲಿ/ಅಹಮದಾಬಾದ್: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಬೈಪರ್ಜಾಯ್ ಚಂಡಮಾರುತ ಭಾನುವಾರ ಮತ್ತಷ್ಟು ತೀವ್ರಗೊಂಡಿದೆ. ಅದು ಜು.15ರ ವೇಳೆಗೆ ಗುಜರಾತ್ನ ಕಛ… ಜಿಲ್ಲೆ ಮತ್ತು ಪಾಕಿಸ್ತಾನದ ಕರಾಚಿಯ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇದರ ಜತೆಗೆ ಸೌರಾಷ್ಟ್ರ ಮತ್ತು ಕಛ್ ಪ್ರದೇಶ ವ್ಯಾಪ್ತಿಯ ಪ್ರದೇಶಗಳಿಗೆ ಚಂಡಮಾರುತದ ಬಗ್ಗೆ ಮುನ್ನೆಚ್ಚರಿಕೆಯನ್ನೂ ನೀಡಿದೆ. ಈ ಎರಡೂ ಪ್ರದೇಶಗಳ ಕಡಲ ಕಿನಾರೆಗಳಲ್ಲಿ ಜನರ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಜತೆಗೆ ಬೀಚ್ಗಳಿಗೆ ಜನರ ಪ್ರವೇಶವನ್ನೂ ನಿಷೇಧಿಸಲಾಗಿದೆ.
ಜೂ.14ರಂದು ಬೆಳಗ್ಗೆ ಈಶಾನ್ಯದತ್ತ ಚಂಡಮಾರುತ ಮುಂದುವರಿಯಲಿದೆ. ಜು.15ರಂದು ಸೌರಾಷ್ಟ್ರ ಮತ್ತು ಕಛ…ಗಳ ಮೂಲಕ ಚಂಡಮಾರುತ ಹಾದು ಹೋಗಿ ಕರಾಚಿ ಮತ್ತು ಕಛ್ ನಡುವೆ ಅಪ್ಪಳಿಸಲಿದೆ. ಈ ವೇಳೆಗೆ ಪ್ರತಿಗಂಟೆಗೆ 125ರಿಂದ 135 ಕಿಮೀ ವೇಗದಿಂದ ಗಾಳಿ ಬೀಸಲಿದೆ. ಅದರ ವೇಗ ಪ್ರತಿ ಗಂಟೆಗೆ 150 ಕಿಮೀಗೆ ಹೆಚ್ಚುವ ಸಾಧ್ಯತೆಯೂ ಇದೆ ಎಂದು ಐಎಂಡಿ ತಿಳಿಸಿದೆ. ಇದರಿಂದಾಗಿ ದೇಶದ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬ ಭೀತಿ ದೂರವಾಗಿದೆ. ಆದರೆ, ದ್ವಾರಕ, ಪೋರ್ಬಂದರ್, ಜಾಮ್ನಗರ, ರಾಜ್ಕೋಟ್, ಜುನಾಗಢ, ಮೊರ್ಬಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು