ಚಾಮರಾಜನಗರದಲ್ಲಿ ಇಂದು 24 ಹೊಸ ಪ್ರಕರಣಗಳು, 22 ಮಂದಿ ಗುಣಮುಖ
Team Udayavani, Jul 22, 2020, 7:33 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 24 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇಂದು 22 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್ ದೃಢಪಟ್ಟವರ ಸಂಖ್ಯೆ 406ಕ್ಕೇರಿದೆ. 169 ಸಕ್ರಿಯ ಪ್ರಕರಣಗಳಿವೆ.
369 ಮಾದರಿಗಳನ್ನು ಇಂದು ಪರೀಕ್ಷೆಗೊಳಪಡಿಸಲಾಗಿತ್ತು. 344 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.
ಇಂದು ವರದಿಯಾಗಿರುವ ಪ್ರಕರಣಗಳ ಪೈಕಿ ಕೊಳ್ಳೇಗಾಲ ತಾಲೂಕಿನಿಂದ ಅತಿ ಹೆಚ್ಚು ಅಂದರೆ 12 ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆ, ಚಾಮರಾಜನಗರ ತಾಲೂಕು ತಲಾ 5, ಹನೂರು ಹಾಗೂ ತಾಲೂಕಿನಿಂದ 1 ಪ್ರಕರಣ ವರದಿಯಾಗಿದೆ.
ಪ್ರಕರಣಗಳ ವಿವರ ಇಂತಿದೆ:
ಕೊಳ್ಳೇಗಾಲ ತಾಲೂಕು: 50 ವರ್ಷದ ಮಹಿಳೆ ಬಸ್ತಿಪುರ. 60 ವರ್ಷದ ಪುರುಷ, 75 ವರ್ಷದ ವೃದ್ಧೆ, 22 ವರ್ಷದ ಯುವತಿ, ದೇವಾಂಗಪೇಟೆ ಕೊಳ್ಳೇಗಾಲ. 38 ವರ್ಷದ ಪುರುಷ ರಾಜೀವನಗರ, ಕೊಳ್ಳೇಗಾಲ. 45 ವರ್ಷದ ಮಹಿಳೆ ಆಶ್ರಯ ಬಡಾವಣೆ ಕೊಳ್ಳೇಗಾಲ. 40 ವರ್ಷದ ಪುರುಷ ಮೊರಾರ್ಜಿ ವಸತಿ ಶಾಲೆ, ಕೊಳ್ಳೇಗಾಲ. 33 ವರ್ಷದ ಯುವಕ, ಹರಳೆ. 65 ವರ್ಷದ ವೃದ್ಧೆ ನಾಯಕರ ಬೀದಿ, ಕೊಳ್ಳೇಗಾಲ. 30 ವರ್ಷದ ಯುವತಿ, 38 ವರ್ಷದ ಪುರುಷ ಕೊಳ್ಳೇಗಾಲ ಮೋಳೆ. 32 ವರ್ಷದ ಯುವಕ ಕೊಳ್ಳೇಗಾಲ.
ಗುಂಡ್ಲುಪೇಟೆ ತಾಲೂಕು: 40 ವರ್ಷದ ಮಹಿಳೆ, ಪೇಟೆ. 54 ವರ್ಷದ ಮಹಿಳೆ, 50 ವರ್ಷದ ಮಹಿಳೆ, 30 ವರ್ಷದ ಯುವತಿ ತೆರಕಣಾಂಬಿ. 40 ವರ್ಷದ ಪುರುಷ ಹಂಗಳ.
ಚಾಮರಾಜನಗರ ತಾಲೂಕು: 70 ವರ್ಷದ ವೃದ್ಧ, 40 ವರ್ಷದ ಪುರುಷ, 38 ವರ್ಷದ ಮಹಿಳೆ ಕೆ.ಎನ್. ಮೊಹಲ್ಲಾ, 23 ವರ್ಷದ ಯುವಕ ಕೋಡಿಮೋಳೆ, 30 ವರ್ಷದ ಯುವತಿ ರೈಲ್ವೆ ಬಡಾವಣೆ.
ಹನೂರು: 12 ವರ್ಷದ ಬಾಲಕಿ ಇಕ್ಕಡಹಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ