ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಗೊಂದಲ: ಸ್ಪಷ್ಟನೆ ನೀಡಿದ ಎಚ್ ಡಿಕೆ
Team Udayavani, Feb 13, 2022, 1:56 PM IST
ರಾಮನಗರ: ತಮ್ಮ ಹೇಳಿಕೆಯಿಂದ ಚಾಮುಂಡೇಶ್ವರಿ ಕ್ಷೇತ್ರದ ಮತ್ತು ಜೆಡಿಎಸ್ ಕ್ಷೇತ್ರದ ಕಾರ್ಯಕರ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ತೆರೆ ಎಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಯಕರು ಯಾರು ಎಂದು ಪ್ರಶ್ನಿಸಿದ್ದರು, ಅದಕ್ಕೆ ನಾನೇ ಬರ್ತೀನಿ ನಡೆಯಿರಿ ಎಂದಿದ್ದೇನೆ.ನಾನೇ ಬರ್ತೀನಿ ನಡೆಯಿರಿ ಅಂದ್ರೆ ಚುನಾವಣೆ ನಿಲ್ಲಲು ಅಲ್ಲ. ಚುನಾವಣೆ ನಡೆಸಲು ಬರ್ತೀನಿ ಅಂತ ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ಹಳ್ಳಿ ಹಳ್ಳಿಗೆ ಭೇಟಿ ಮಾಡಿದ್ದೇನೆ, ಹಾಗೇ ನಾನು ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ ಅಷ್ಟೇ ಎಂದರು.
ನಾನು ಚುನಾವಣೆ ನಿಲ್ಲೀನಿ ಅಂತಾ ಹೇಳಿದ್ದೀನಾ? ನಾನೇ ಬರ್ತೀನಿ ನಡೆಯಿರಪ್ಪ ಅಂತೇಳಿದ್ದೇನೆ. ಅದನ್ನು ಈ ರೀತಿ ಅರ್ಥೈಸಿಕೊಂಡರೆ ನಾನೇನೂ ಮಾಡಲು ಸಾಧ್ಯ ಎಂದರು.