ಕೊನೆಗೂ ಕದಲಿದ “ಎವರ್ಗಿವನ್’ : ಸುಯೆಜ್ ಕಾಲುವೆಯಲ್ಲಿ ಹಡಗು ಸಿಲುಕಿದ್ದ ಸಮಸ್ಯೆ ನಿವಾರಣೆ
ವಾರದ ಬಳಿಕ ಜಾಗತಿಕ ವಾಣಿಜ್ಯ ಕ್ಷೇತ್ರದ ಆತಂಕ ಮಾಯ
Team Udayavani, Mar 29, 2021, 9:50 PM IST
ಸುಯೇಜ್: ಸುಯೇಜ್ ಕಾಲುವೆಯಲ್ಲಿ ಒಂದು ವಾರದಿಂದ ಕದಲದೆ ನಿಂತಿದ್ದ “ಎವರ್ ಗಿವನ್’ ಬೃಹತ್ ಕಂಟೈನರ್ ಹಡಗನ್ನು ಕೊನೆಗೂ ಚಲಿಸುವಂತೆ ಮಾಡುವಲ್ಲಿ ತಂತ್ರಜ್ಞರು ಯಶಸ್ವಿಯಾಗಿದ್ದಾರೆ. ಇದರಿಂದಾಗಿ, ಸುಯೆಜ್ ಕಾಲುವೆಯಲ್ಲಿ ಸುಮಾರು ಐದಾರು ದಿನಗಳಿಂದ ಸ್ತಬ್ಧವಾಗಿದ್ದ ವಾಣಿಜ್ಯ ಹಡಗುಗಳ ಓಡಾಟ ಮತ್ತೆ ಆರಂಭವಾಗಿದೆ.
ಭಾನುವಾರ ಮಧ್ಯರಾತ್ರಿ 14 ಟಗ್ ಬೋಟ್ಗಳು, ಕಂಟೈನರ್ ಹಡಗನ್ನು ಅತ್ತಿಂದಿತ್ತ ಜಗ್ಗಾಡಿದ್ದವು. ಈ ವೇಳೆ ಹಡಗಿನ ಸುತ್ತ ತುಂಬಿಕೊಂಡಿದ್ದ 27 ಸಾವಿರ ಘನ ಮೀಟರ್ ನಷ್ಟಿದ್ದ ಕೆಸರನ್ನೂ ಹೊರತೆಗೆಯಲಾಗಿತ್ತು.
ನೆರವಾದ ಹುಣ್ಣಿಮೆ: ಸೋಮವಾರ ಹುಣ್ಣಿಮೆ ದಿನವಾಗಿದ್ದರಿಂದ ಸಾಗರದಲ್ಲಿ ಅಲೆಗಳ ಉಬ್ಬರ ಜೋರಾಗಿತ್ತು. ರಭಸದ ಅಲೆಗಳು ಹಡಗಿಗೆ ಬಂದು ಪದೇ ಪದೇ ಅಪ್ಪಳಿಸುತ್ತಿದ್ದರಿಂದ ಹಡಗು ತಾನು ಸಿಲುಕಿದ್ದ ಜಾಗದಿಂದ ಕದಲಲು ಸಾಧ್ಯವಾಯಿತು. ಇದೀಗ, “ಹಡಗಿನ ಎಂಜಿನ್ ಸಕ್ರಿಯವಾಗಿದ್ದು, ಪ್ರಯಾಣ ಮುಂದುವರಿಸಲು ಯಾವುದೇ ತೊಂದರೆ ಇಲ್ಲ’ ಎಂದು ಎಂಜಿನಿಯರ್ಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ :ಮಾ.31ರಂದು ಅಂಬಾಲಾಕ್ಕೆ ಬರಲಿವೆ 3 ರಫೇಲ್ ಯುದ್ಧ ವಿಮಾನ
ತಪ್ಪಿದ ಟ್ರಾಫಿಕ್ ಜ್ಯಾಂ ತಲೆನೋವು: ಯುರೋಪ್- ಏಷ್ಯಾ ನಡುವಿನ “ಹಡಗಿನ ಅಡ್ಡದಾರಿ’ ಸುಯೇಜ್ ಕಾಲುವೆಯಲ್ಲಿ ಕಂಟೈನರ್ ಶಿಪ್ ಸಿಲುಕಿ ಒಂದು ವಾರದಿಂದ 369 ಹಡಗುಗಳು ಟ್ರಾಫಿಕ್ ಜ್ಯಾಂ ತಲೆಬಿಸಿ ಅನುಭವಿಸಿದ್ದವು. 12 ಕಂಟೈನರ್ ಶಿಪ್ಗಳು, ಬೃಹತ್ ವಾಹಕಗಳು, ಆಯಿಲ್ ಟ್ಯಾಂಕರ್ಗಳು, ಎಲ್ಪಿಜಿ ಟ್ಯಾಂಕರ್ಗಳು ಸಾಲುಗಟ್ಟಿ ನಿಂತಿದ್ದವು. “ಎವರ್ ಗಿವನ್’ ಶಿಪ್ ಚಲಿಸಲು ಆರಂಭಿಸಿರುವುದರಿಂದ ಇವಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ