ಬುದ್ಧಿ ಕಲಿಸಬೇಕಿದ್ದ ಗುರುವೇ ಮೋಸ್ಟ್ ವಾಂಟೆಡ್ ಕ್ರಿಮಿನಲ್!
Team Udayavani, Apr 24, 2023, 7:14 AM IST
ಲಕ್ನೋ: ತಪ್ಪುಗಳಿಗೆ ಶಿಕ್ಷೆ ನೀಡಿ, ಬುದ್ಧಿ ತಿದ್ದಿ ಸರಿ ಪಥದಲ್ಲಿ ನಡೆಸಬೇಕಿದ್ದ ಗುರುವೇ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರಾಜ್ಯದಲ್ಲಿ ಪೊಲೀಸರು ಹುಡುಕುತ್ತಿರುವ ಮೋಸ್ಟ್ವಾಂಟೆಡ್ ಕ್ರಿಮಿನಲ್ ಆಗಿ ಪರಿವರ್ತನೆಗೊಂಡಿರುವ ಪ್ರಕರಣವೊಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ.
ಭಾಗಪತ್ನ ಕಾಲೇಜು ಒಂದರಲ್ಲಿ ಪ್ರಾಂಶುಪಾಲರಾಗಿದ್ದ ದೀಪ್ತಿ ಬಹಲ್ ಎಂಬ ಮಹಿಳೆ, ಬೈಕ್ ಟ್ಯಾಕ್ಸಿ ಹೆಸರಿನಲ್ಲಿ ಹಗರಣ ನಡೆಸಿದ್ದು, ದೇಶಾದ್ಯಂತ ಹಲವು ಮಂದಿಗೆ ಒಟ್ಟು 4,500 ಕೋಟಿ ರೂ.ವಂಚಿಸಿದ್ದಾರೆ. ಈಕೆ ವಿರುದ್ಧ ದೇಶಾದ್ಯಂತ 250 ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ, ಆಕೆಯ ಸುಳಿವು ನೀಡಿದವರಿಗೆ 5ಲಕ್ಷ ರೂ,ಗಳ ಬಹುಮಾನವನ್ನೂ ಘೋಷಿಸಿದ್ದಾರೆ. ಒಟ್ಟಾರೆ ಒಂದು ಕಾಲದಲ್ಲಿ ಗುರುವಾಗಿದ್ದವರು, ಈಗ ಕುಖ್ಯಾತ ಕ್ರಿಮಿನಲ್ ಆಗಿರುವುದು ವಿಪರ್ಯಾಸ.