ಮೋಸ ಮಾಡಿದವನನ್ನು ಗಲ್ಲಿಗೇರಿಸಿ: ಡೆತ್ ನೋಟ್ ಬರೆದು ನೇಣಿಗೆ ಶರಣಾದ ವಿದ್ಯಾರ್ಥಿನಿ
Team Udayavani, Oct 16, 2021, 7:29 PM IST
ನಂಜನಗೂಡು: ಪ್ರೀತಿಸಿ ಮೋಸ ಮಾಡಿದ ಯುವಕನನ್ನು ಗಲ್ಲಿಗೇರಿಸಿ ಎಂದು ಡೆತ್ ನೋಟ್ ಬರೆದು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ತಾಲೂಕಿನ ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಬಿಎ ವ್ಯಾಸಂಗ ಮಾಡುತ್ತಿದ್ದ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದು, ಮದುವೆಯಾಗುವುದಾಗಿ ನಂಬಿಸಿ 5 ವರ್ಷಗಳ ಕಾಲ ನನ್ನನ್ನು ಪ್ರೀತಿಸಿ ಎಲ್ಲ ರೀತಿಯಲ್ಲೂ ಬಳಸಿಕೊಂಡು ನಂತರ ಮೋಸ ಮಾಡಿದ ಗ್ರಾಮದ ಲೋಕೇಶನನ್ನು ಗಲ್ಲೆಗೇರಿಸಬೇಕು ಎಂದು ಆಗ್ರಹಿಸಿ ಡೆತ್ ನೋಟ್ ಬರೆದಿಟ್ಟಿದ್ದಳು.
ಶೋಭಾಳ ಶವ ಸಂಸ್ಕಾರ ನಡೆದ ನಂತರ ಮನೆ ಸ್ವಚ್ಛ ಗೊಳಿಸುವಾಗ ಡೆತ್ ನೋಟ್ ದೊರೆತಿದ್ದು, ಯುವತಿಯ ತಾತ ಚೆನ್ನ ಪಟ್ಟಣನ ಕರಿಯ್ಯಯ್ಯ, ಹುಲ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶೋಭಾ ಅದೇ ಗ್ರಾಮದ ಲೋಕೇಶ್ ಎಂಬಾತನನ್ನ ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದು ಈಗ ಆತ ದುರವಾಗಿರುವ ಕಾರಣ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದ ಪತ್ರವನ್ನು ದೂರಿನಲ್ಲಿ ಕರಿಯಯ್ಯ ದಾಖಲಿಸಿದ್ದಾರೆ.
ಹುಲ್ಲಹಳ್ಳಿ ಪೊಲೀಸರು ಈಗ ಶೋಭಾಳ ಸಾವು ,ಆಕೆಯ ಶವವನ್ನು ದಹಿಸಿದ ರೀತಿ ಮತ್ತು ಆಕೆಯ ಡೆತ್ ನೊಟ್ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.