ಆರೋಪಿಗಳ ಬಂಧನದ ವೇಳೆ ಪಿಎಸ್ಐಗೆ ಚೂರಿ ಇರಿತ! ಪೊಲೀಸರಿಂದ ರೌಡಿಶೀಟರ್ ಕಾಲಿಗೆ ಗುಂಡೇಟು
Team Udayavani, Nov 4, 2020, 11:40 AM IST
ಹಾಸನ:ವ್ಯಕ್ತಿಗಳ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲು ಹೋದ ಪಿಎಸ್ಐಗೆ ಚೂರಿ ಇರಿದಿದ್ದು ಪರಿಣಾಮ ಪೊಲೀಸರು ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಘಟನೆ ಮಂಗಳವಾರ ರಾತ್ರಿ ಹಾಸನದಲ್ಲಿ ನಡೆದಿದೆ.
ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ಸುನಿಲ್ ಕಾಲಿಗೆ ಗುಂಡೇಟು ಬಿದ್ದಿದೆ.
ಮೂವರು ಯುವಕರ ಮೇಲೆ ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಪಿಎಸ್ಐಗೆ ಚೂರಿ ಇರಿದ ಸುನಿಲ್ ಮೇಲೆ ಹಾಸನ ಗ್ರಾಮಾಂತರ ಸಿಪಿಐ ಸುರೇಶ್ ಫೈರಿಂಗ್ ನಡೆಸಿದರು. ಈ ಸಂದರ್ಭದಲ್ಲಿ ಸುನಿಲ್ ಕಾಲಿಗೆ ಗುಂಡೇಟು ಬಿದ್ದಿದೆ. ಗಾಯಾಳು ಪಿಎಸ್ಐ ಹಾಗೂ ರೌಡಿ ಶೀಟರ್ ಸುನಿಲ್ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ . ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಸೌಮ್ಯ ಪ್ರಮಾಣದ ಕೋವಿಡ್ ಸೋಂಕಿತರಲ್ಲಿ ಏಳು ರೋಗ ಲಕ್ಷಣ ಪತ್ತೆ: ವಿಜ್ಞಾನಿಗಳ ಮಾಹಿತಿ