ಹಿರಿಯಡ್ಕ: ಹಾಸ್ಟೆಲ್ ಸಿಬ್ಬಂದಿ ನೇಣಿಗೆ ಶರಣು
Team Udayavani, Feb 4, 2022, 2:20 PM IST
ಹೆಬ್ರಿ: ಹಿರಿಯಡ್ಕ ಸರಕಾರಿ ವಸತಿ ನಿಲಯದ ಅಡುಗೆ ಸಿಬ್ಬಂದಿ ರಘುರಾಮ (57) ನೇಣಿಗೆ ಶರಣಾದ ಘಟನೆ ನಡೆದಿದೆ.
ಹಿರಿಯಡ್ಕ ಮಾಣಾಯಿ ನಿವಾಸಿಯಾದ ಅವರು ತನ್ನ ಮನೆಯಲ್ಲಿ ಗುರುವಾರ ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಾಗಿದೆ.