IPL 2023: ಎರಡನ್ನೂ ಸೋತ ಸಂಕಟದಲ್ಲಿ ಡೆಲ್ಲಿ- ಇಂದು ರಾಜಸ್ಥಾನ್‌ ರಾಯಲ್ಸ್‌  ಎದುರಾಳಿ


Team Udayavani, Apr 8, 2023, 8:03 AM IST

DEL RR

ಗುವಾಹಟಿ: ರಿಷಭ್‌ ಪಂತ್‌ ಗೈರಿನಿಂದ ಬಡವಾದಂತೆ ಕಾಣುತ್ತಿ ರುವ ಡೆಲ್ಲಿ ಕ್ಯಾಪಿಟಲ್ಸ್‌ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ವಾರ್ನರ್‌ ಪಡೆ ಶನಿವಾರ ಗುವಾಹಟಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ಸವಾಲು ಸುಲಭ ದ್ದಲ್ಲ ಎಂಬುದು ಮೇಲ್ನೋಟಕ್ಕೆ ಅರಿವಾಗುವ ಸಂಗತಿ.

ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ ಡೆಲ್ಲಿ ತಂಡವನ್ನು ಹೈರಾಣಾಗಿಸಿದೆ. ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌, ಸಫ‌ìರಾಜ್‌ ಖಾನ್‌, ರಿಲೀ ರೋಸ್ಯೂ ಅವರ ರನ್‌ ಬರಗಾಲದಿಂದಾಗಿ ಲಕ್ನೋ ಮತ್ತು ಗುಜರಾತ್‌ ಎದು ರಿನ ಎರಡೂ ಪಂದ್ಯಗಳನ್ನು ಡೆಲ್ಲಿ ಕಳೆದುಕೊಳ್ಳುವಂತಾಯಿತು. ಇವರೆ ಲ್ಲರೂ ಬಿಗ್‌ ಹಿಟ್ಟರ್‌ಗಳಾಗಿದ್ದು, ಇಬ್ಬರು ಕ್ರೀಸ್‌ ಆಕ್ರಮಿಸಿಕೊಂಡರೂ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಸಾಧ್ಯ. ಇಂಥದೊಂದು “ಬ್ಯಾಟಿಂಗ್‌ ಶೋ’ ಸಾಧ್ಯವಾಗದ ಹೊರತು ಡೆಲ್ಲಿಗೆ ಉಳಿಗಾಲವಿಲ್ಲ ಎಂಬುದು ಈಗಿನ ಲೆಕ್ಕಾಚಾರ.

ನಾಯಕ ಡೇವಿಡ್‌ ವಾರ್ನರ್‌ ಎರಡೂ ಪಂದ್ಯಗಳಲ್ಲಿ ಟಾಪ್‌ ಸ್ಕೋರರ್‌ ಎನಿಸಿದರೂ (56 ಮತ್ತು 37) ಸ್ಟ್ರೈಕ್‌ರೇಟ್‌ ಕುಸಿದಿತ್ತು. ಆದರೆ ಇನ್ನೊಂದೆಡೆ ವಿಕೆಟ್‌ಗಳು ಉದುರುತ್ತ ಹೋಗುತ್ತಿರುವಾಗ ಕಪ್ತಾನನೂ ಆಗಿರುವ ವಾರ್ನರ್‌ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಡಬೇಕಾದುದು ಅನಿವಾರ್ಯವಾಗಿತ್ತು ಎನ್ನಬಹುದು.

ಉಳಿದಂತೆ ಯಶ್‌ ಧುಲ್‌, ರಿಪ್ಪಲ್‌ ಪಟೇಲ್‌, ಲಲಿತ್‌ ಯಾದವ್‌ ಅವರೆಲ್ಲ ಬ್ಯಾಟಿಂಗ್‌ ಲೈನ್‌ಅಪ್‌ ನಲ್ಲಿದ್ದಾರೆ. ಇವರಲ್ಲಿ ಯಾರೇ ಬಂದರೂ 150ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಪೇರಿಸುವುದು ಮುಖ್ಯ. ಗುವಾಹಟಿ ಟ್ರ್ಯಾಕ್‌ನಲ್ಲಿ 190ಕ್ಕಿಂತ ಕಡಿಮೆ ಸ್ಕೋರ್‌ ದಾಖಲಾದರೆ ಉಳಿಸಿಕೊಳ್ಳುವುದು ಕಷ್ಟ.
ಆ್ಯನ್ರಿಚ್‌ ನೋರ್ಜೆ ಆಗಮನ ದಿಂದ ಡೆಲ್ಲಿ ಬೌಲಿಂಗ್‌ಗೆ ಬಲ ಬಂದಿದೆ ಎಂದು ಹೇಳಲು ಧೈರ್ಯ ಸಾಲದು. ಗುಜರಾತ್‌ ವಿರುದ್ಧ ಡೆಲ್ಲಿಗೆ ಉರು ಳಿಸಲು ಸಾಧ್ಯವಾದದ್ದು 4 ವಿಕೆಟ್‌ ಮಾತ್ರ! ಹಾಗೆಯೇ ಅಕ್ಷರ್‌ ಪಟೇಲ್‌ಗೆ ಬೌಲಿಂಗ್‌ ನೀಡದ ವಾರ್ನರ್‌ ಕ್ರಮ ಭಾರೀ ಟೀಕೆಗೆ ಗುರಿಯಾಗಿತ್ತು.

ಮಾರ್ಷ್‌ಗೆ ಮದುವೆ
ಡೆಲ್ಲಿಯ ಪ್ರಮುಖ ಆಟ ಗಾರ ಮಿಚೆಲ್‌ ಮಾರ್ಷ್‌ ಮುಂದಿನ ಕೆಲವು ಪಂದ್ಯಗಳಿಂದ ಹೊರಗುಳಿ ಯಲಿದ್ದಾರೆ. ಸದ್ಯದಲ್ಲೇ ವಿವಾಹ ಬಂಧಕ್ಕೆ ಒಳಗಾಗಲಿರುವ ಅವರು ಆಸ್ಟ್ರೇಲಿಯಕ್ಕೆ ವಾಪಸಾಗಲಿದ್ದಾರೆ ಎಂದು ಡೆಲ್ಲಿ ಬೌಲಿಂಗ್‌ ಕೋಚ್‌ ಹೋಪ್ಸ್‌ ಹೇಳಿದ್ದಾರೆ. ಹೀಗಾಗಿ ರಾಜಸ್ಥಾನ್‌ ವಿರುದ್ಧ ರೋವನ್‌ ಪೊವೆಲ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ರಾಜಸ್ಥಾನ್‌ ಬಲಿಷ್ಠ
ರಾಜಸ್ಥಾನ್‌ ರಾಯಲ್ಸ್‌ ಕೂಟದ ಅತ್ಯಂತ ಬಲಾಡ್ಯ ತಂಡ. ಹೈದರಾ ಬಾದ್‌ ವಿರುದ್ಧ 72 ರನ್ನುಗಳಿಂದ ಭರ್ಜರಿಯಾಗಿ ಗೆದ್ದಿತ್ತು. ಆದರೆ ಇದೇ ಗುವಾಹಟಿ ಅಂಗಳದಲ್ಲಿ ಪಂಜಾಬ್‌ ವಿರುದ್ಧ 198 ರನ್‌ ಚೇಸ್‌ ಮಾಡು ವಾಗ ಅಗ್ರ ಕ್ರಮಾಂಕದ ವೈಫ‌ಲ್ಯಕ್ಕೆ ಸಿಲುಕಿತು. ಆರ್‌. ಅಶ್ವಿ‌ನ್‌ ಅವರನ್ನು ಓಪನಿಂಗ್‌ ಕಳುಹಿಸಿ ಎಡವಟ್ಟು ಮಾಡಿಕೊಂಡಿತು. ಆದರೂ ಸೋಲಿನ ಅಂತರ ಐದೇ ರನ್‌ ಎಂಬುದನ್ನು ಗಮನಿಸಬೇಕು.

ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌, ಪಡಿಕ್ಕಲ್‌, ಪರಾಗ್‌, ಹೆಟ್‌ಮೈರ್‌, ಹೋಲ್ಡರ್‌, ಜುರೆಲ್‌… ಹೀಗೆ ಕೊನೆಯ ತನಕವೂ ರಾಜಸ್ಥಾನ್‌ ಬ್ಯಾಟಿಂಗ್‌ ಸರದಿ ಬಲಿಷ್ಠವಾಗಿಯೇ ಇದೆ. ಬೌಲ್ಟ್, ಅಶ್ವಿ‌ನ್‌, ಚಹಲ್‌ ಬೌಲಿಂಗ್‌ ವಿಭಾಗದ ಪ್ರಮುಖರು.

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.