IPL 2023: ಮತ್ತೆ RCBಯನ್ನು ಕೆಡವಿದ KKR


Team Udayavani, Apr 27, 2023, 6:17 AM IST

kkr

ಬೆಂಗಳೂರು: ಆರ್‌ಸಿಬಿಯನ್ನು ಕೆಕೆಆರ್‌ ಮತ್ತೆ ಕೆಡವಿದೆ. ಬುಧವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ನಿತೀಶ್‌ ರಾಣಾ ಪಡೆ 21 ರನ್ನುಗಳಿಂದ ಬೆಂಗಳೂರು ತಂಡವನ್ನು ಪರಾಭವಗೊಳಿಸಿ ಗೆಲುವಿನ ಹಳಿ ಏರಿತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್‌ 5 ವಿಕೆಟಿಗೆ ಭರ್ತಿ 200 ರನ್‌ ಪೇರಿಸಿದರೆ, ಆರ್‌ಸಿಬಿ 8 ವಿಕೆಟಿಗೆ 179 ರನ್‌ ಮಾಡಿತು. ಕೋಲ್ಕತಾದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್‌ 81 ರನ್ನುಗಳ ಜಯ ಸಾಧಿಸಿತ್ತು.

ದೊಡ್ಡ ಮೊತ್ತದ ಚೇಸಿಂಗ್‌ಗೆ ಅಗತ್ಯವಿದ್ದ ಓಪನಿಂಗ್‌ ಪಡೆಯಲು ಆರ್‌ಸಿಬಿ ವಿಫ‌ಲವಾಯಿತು. ವಿರಾಟ್‌ ಕೊಹ್ಲಿ ಒಂದೆಡೆ ನಿಂತರೂ ಫಾ ಡು ಪ್ಲೆಸಿಸ್‌ (17), ಶಾಬಾಜ್‌ ಅಹ್ಮದ್‌ (2), ಗ್ಲೆನ್‌ ಮ್ಯಾಕ್ಸ್‌ವೆಲ್‌ (5) ವಿಕೆಟ್‌ಗಳನ್ನು ಪಟಪಟನೆ ಕಳೆದುಕೊಂಡಿತು. ಮೂವರಲ್ಲಿ ಇಬ್ಬರು ಬಿಗ್‌ ಹಿಟ್ಟರ್‌ಗಳನ್ನು ಬೇಗನೇ ಕೆಡವಿದ ಕೆಕೆಆರ್‌ ಸ್ಪಷ್ಟ ಮೇಲುಗೈ ಸಾಧಿಸಿತು. ಕೊಹ್ಲಿ 54 ರನ್‌ ಹೊಡೆದರು.

ಕೆಕೆಆರ್‌ ಮತ್ತೆ ಆರಂಭಿಕ ಜೋಡಿಯನ್ನು ಬದಲಿಸಿತು. ಜೇಸನ್‌ ರಾಯ್‌ ಜತೆಗೆ ಎನ್‌. ಜಗದೀಶನ್‌ ಕಣಕ್ಕಿಳಿದರು. 9.2 ಓವರ್‌ಗಳಿಂದ 83 ರನ್‌ ಹರಿದು ಬಂತು. ಇದು ಪ್ರಸಕ್ತ ಋತುವಿನಲ್ಲೇ ಕೆಕೆಆರ್‌ ಪರ ಮೊದಲ ವಿಕೆಟಿಗೆ ದಾಖಲಾದ ಅತ್ಯಧಿಕ ರನ್‌. ಅಬ್ಬರಿಸಿದ ರಾಯ್‌ 29 ಎಸೆತಗಳಿಂದ 56 ರನ್‌ ಬಾರಿಸಿದರು. ಸಿಡಿಸಿದ್ದು 4 ಬೌಂಡರಿ ಹಾಗೂ 5 ಸಿಕ್ಸರ್‌.

ಪವರ್‌ ಪ್ಲೇಯಲ್ಲಿ ಬೌಲಿಂಗ್‌ ದಾಳಿಗಿಳಿದ ಶಾಬಾಜ್‌ ಅಹ್ಮದ್‌ ಅವರನ್ನು ಜೇಸನ್‌ ರಾಯ್‌ ಚೆನ್ನಾಗಿ ದಂಡಿಸಿದರು. ಹ್ಯಾಟ್ರಿಕ್‌ ಸಿಕ್ಸರ್‌ ಸೇರಿದಂತೆ ಅವರ ಮೊದಲ ಓವರ್‌ನಲ್ಲೇ 4 ಸಿಕ್ಸರ್‌ ಸಿಡಿಸಿದರು. ಆ ಓವರ್‌ನಲ್ಲಿ 25 ರನ್‌ ಸೋರಿಹೋಯಿತು. ಶಾಬಾಜ್‌ ಒಂದೇ ಓವರ್‌ಗೆ ಸಾಕೆನಿಸಿಕೊಂಡರು.
ಜೇಸನ್‌ ರಾಯ್‌ ಭರ್ತಿ 10 ಓವರ್‌ ತನಕ ಕ್ರೀಸ್‌ನಲ್ಲಿ ಉಳಿದರು. ಅರ್ಧ ಹಾದಿ ಕ್ರಮಿಸುವ ವೇಳೆ ಕೆಕೆಆರ್‌ 2 ವಿಕೆಟಿಗೆ 88 ರನ್‌ ಮಾಡಿತ್ತು. ಜಗದೀಶನ್‌ ಗಳಿಕೆ 29 ಎಸೆತಗಳಿಂದ 27 ರನ್‌ (4 ಬೌಂಡರಿ).

ವನ್‌ಡೌನ್‌ನಲ್ಲಿ ಬಂದ ವೆಂಕಟೇಶ್‌ ಅಯ್ಯರ್‌ ಅಷ್ಟೇನೂ ಅಬ್ಬರ ತೋರಲಿಲ್ಲ. ಅವರು 31 ರನ್ನಿಗೆ 26 ಎಸೆತ ತೆಗೆದುಕೊಂಡರು (3 ಬೌಂಡರಿ).
ರಾಯ್‌ ಅವರಂತೆ ನಾಯಕ ನಿತೀಶ್‌ ರಾಣಾ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಅವರ ಬ್ಯಾಟ್‌ನಿಂದ 48 ರನ್‌ ಹರಿದು ಬಂತು. 21 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು.

ಈ ಆರ್ಭಟದ ವೇಳೆ ಕೆಕೆಆರ್‌ ಪರ 100 ಸಿಕ್ಸರ್‌ ಸಿಡಿಸಿದ ಕೇವಲ 2ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. 180 ಸಿಕ್ಸರ್‌ ಬಾರಿಸಿದ ಆ್ಯಂಡ್ರೆ ರಸೆಲ್‌ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಇಲ್ಲಿ ರಸೆಲ್‌ ಆಟ ಒಂದೇ ರನ್ನಿಗೆ ಮುಗಿಯಿತು.

ಈ ಸೀಸನ್‌ನ ಬ್ಯಾಟಿಂಗ್‌ ಸೆನ್ಸೇಶನ್‌ ರಿಂಕು ಸಿಂಗ್‌ 10 ಎಸೆತಗಳಿಂದ 18 ರನ್‌ ಹೊಡೆದರು. (2 ಬೌಂಡರಿ, 1 ಸಿಕ್ಸರ್‌).

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.