ಪ್ರತೀಕಾರ: ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿ ಕೊಂದು ಹಾಕಿದ ಈ ವ್ಯಕ್ತಿ!
ನಾನು ಸಾಂಪ್ರದಾಯಿಕ ಗಿಡಮೂಲಿಕೆ ಔಷಧವನ್ನು ತೆಗೆದುಕೊಂಡ ನಂತರ ಗುಣಮುಖನಾಗಿದ್ದೇನೆ
Team Udayavani, Aug 13, 2021, 10:38 AM IST
ನವದೆಹಲಿ:ಪ್ರಕೃತಿಯಲ್ಲಿ ಮನುಷ್ಯ ಮತ್ತು ಪ್ರಾಣಿಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿಯೂ ಒಡಿಶಾದ ಜೈಪುರ್ ನಗರದಲ್ಲಿ ವಿಷಕಾರಿ ಹಾವಿನ ವಿರುದ್ಧವೇ ಪ್ರತೀಕಾರ ತೀರಿಸಿಕೊಂಡ ಕುತೂಹಲಕಾರಿ ಘಟನೆಯೊಂದು ವರದಿಯಾಗಿದೆ. ವ್ಯಕ್ತಿಯೊಬ್ಬನಿಗೆ ವಿಷಕಾರಿ ಹಾವೊಂದು ಕಚ್ಚಿದ್ದು, ಕೂಡಲೇ ಆತನೂ ಹಾವನ್ನು ಹಲವಾರು ಬಾರಿ ಕಚ್ಚಿ ಕೊಂದು ಹಾಕಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಒಂದು ಶತಕ- ಹಲವು ದಾಖಲೆಗಳು: ಹಲವು ದಾಖಲೆ ಬರೆದ ಕೆ.ಎಲ್.ರಾಹುಲ್
ಹಾವನ್ನು ಕಚ್ಚಿ ಕೊಂದು ಹಾಕಿರುವ ವ್ಯಕ್ತಿಯನ್ನು ಒಡಿಶಾ ಜೈಪುರ್ ಜಿಲ್ಲೆಯ ಗಂಭಾರಿಪಾಟಿಯಾ ಗ್ರಾಮದ 45 ವರ್ಷದ ಬುಡಕಟ್ಟು ಜನಾಂಗದ ವ್ಯಕ್ತಿ ಕಿಶೋರ್ ಬದ್ರಾ ಎಂದು ಗುರುತಿಸಲಾಗಿದೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.
ಕಿಶೋರ್ ಹೇಳಿಕೆಯ ಪ್ರಕಾರ, ತನ್ನ ಗದ್ದೆಯಲ್ಲಿ ಕೆಲಸ ಪೂರೈಸಿದ ನಂತರ ಬುಧವಾರ (ಆಗಸ್ಟ್ 11) ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿದ್ದು, ಕೂಡಲೇ ನಾನು ಹಾವನ್ನು ಹಿಡಿದು ವಾಪಸ್ ಕಚ್ಚಿ ಪ್ರತೀಕಾರ ತೀರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ರಾತ್ರಿ ನಾನು ಗದ್ದೆಯ ಕೆಲಸ ಪೂರೈಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಏನೋ ಕಚ್ಚಿದಂತಾಯಿತು. ಆಗ ನಾನು ನನ್ನ ಟಾರ್ಜ್ ನಿಂದ ಬೆಳಕು ಹಾಕಿ ನೋಡಿದಾಗ ವಿಷಕಾರಿ ಹಾವು ಕಂಡುಬಂದಿದ್ದು, ಕೂಡಲೇ ಅದನ್ನು ಹಿಡಿದು ಹಲವಾರು ಬಾರಿ ಕಚ್ಚಿಬಿಟ್ಟಿದ್ದೆ. ಇದರ ಪರಿಣಾಮ ಹಾವು ಸತ್ತು ಹೋಗಿರುವುದಾಗಿ ಬದ್ರಾ ತಿಳಿಸಿರುವುದಾಗಿ ಪಿಟಿಐ ಹೇಳಿದೆ.
ಘಟನೆಯ ನಂತರ ಸತ್ತು ಹೋದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಬಂದು ಪತ್ನಿಗೆ ನಡೆದ ವಿಷಯವನ್ನು ತಿಳಿಸಿರುವುದಾಗಿ ವಿವರಿಸಿದ್ದಾನೆ. ಬದ್ರಾ ಸಾಂಪ್ರದಾಯಿಕ ಗಿಡಮೂಲಿಕೆ ಔಷಧವನ್ನು ಮಾಡಿದ್ದು, ಬಳಿಕ ಕೆಲವರ ಸಲಹೆ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಹಾವು ಕಚ್ಚಿದ ನಂತರ ನನಗೆ ಯಾವುದೇ ಅಸ್ವಸ್ಥತೆ ಕಾಣಿಸಿಕೊಂಡಿಲ್ಲ. ನಾನು ಸಾಂಪ್ರದಾಯಿಕ ಗಿಡಮೂಲಿಕೆ ಔಷಧವನ್ನು ತೆಗೆದುಕೊಂಡ ನಂತರ ಗುಣಮುಖನಾಗಿದ್ದೇನೆ ಎಂದು ಪಿಟಿಐಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ