Kajol:ಅಜಯ್ ದೇವಗನ್ ಭೇಟಿಯಾಗುವುದಕ್ಕೂ ಮೊದಲೇ ನಾನು ಬೇರೊಬ್ಬನೊಂದಿಗೆ ಡೇಟ್ ಮಾಡಿದ್ದೆ
ತಮ್ಮ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ ಕಾಜಲ್ ದೇವಗನ್
Team Udayavani, Apr 13, 2023, 4:57 PM IST
ಮುಂಬೈ: ಇತ್ತೀಚೆಗೆ ʻಹೂಮನ್ಸ್ ಆಫ್ ಬಾಂಬೆʼ ಎಂಬ ಪಾಡ್ಕಾಸ್ಟ್ ಒಂದರಲ್ಲಿ ತಮ್ಮ ಜೀವನದ ಬಗ್ಗೆ ಮನಬಿಚ್ಚಿ ಮಾತಾಡಿದ ಬಾಲಿವುಡ್ ಸ್ಟಾರ್ ನಟಿ ಕಾಜಲ್ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ ಕಾಜಲ್, ತಾವು ತಮ್ಮ ಪತಿ ಅಜಯ್ ದೇವಗನ್ ಅವರನ್ನು ಭೇಟಿಯಾಗುವ ಮೊದಲೇ ಬೇರೊಬ್ಬನೊಂದಿಗೆ ಡೇಟ್ ಮಾಡಿದ್ದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.
ಅಜಯ್ ದೇವಗನ್ ಅವರ ಜೊತೆಗಿನ ಮೊದಲ ಭೇಟಿಯ ಬಗೆಗೂ ಅವರು ಮಾತನಾಡಿದ್ದು, ತಮ್ಮ ಪ್ರೀತಿ ಜನಪ್ರಿಯ ಸಿನೆಮಾ ʻದಿಲ್ವಾಲೆ ದುಲ್ಹಾನಿಯಾ ಲೇ ಜಾಯೆಂಗೇʼಯ ಸಿಮ್ರಾನ್ ಪಾತ್ರದಂತೆ ಇರಲೇ ಇಲ್ಲ. ಆದರೆ ಅಜಯ್ ಭೇಟಿಯ ವೇಳೆ ನಾನು ಬೇರೊಬ್ಬನೊಂದಿಗೆ ತಿರುಗಾಡುತ್ತಿದ್ದೆ. ನಾನು ಅಜಯ್ ಜೊತೆ ಸಿನೆಮಾವೊಂದರಲ್ಲಿ ನಟಿಸಿದಾಗ ನಾವಿಬ್ಬರೂ ಸ್ನೇಹಿತರಾದೆವು. ತುಂಬಾ ಮಾತನಾಡುತ್ತಿದ್ದೆವು. ತೂಂಬಾ ಸಮಯ ಸೆಟ್ನಲ್ಲಿ ಜೊತೆಗೇ ಕಳೆಯುತ್ತಿದ್ದೆವು. ಈ ವೇಳೆ ನಾನು ನನ್ನ ಮೊದಲ ಬಾಯ್ಫ್ರೆಂಡ್ ಜೊತೆ ಬ್ರೇಕ್-ಅಪ್ ಮಾಡಿಕೊಂಡೆ. ಆ ಬಳಿಕ ನಾವೂ ಮತ್ತೂ ಒಳ್ಳೆಯ ಸ್ನೇಹಿತರಾದೆವು ಎಂದು ಕಾಜಲ್ ಹೇಳಿಕೊಂಡಿದ್ದಾರೆ. ಆದರೂ ತಾವು ಯಾರೊಂದಿಗೆ ಡೇಟ್ ಮಾಡಿದ್ದು ಎಂಬ ವಿಚಾರವನ್ನು ಕಾಜಲ್ ಗುಪ್ತವಾಗಿಯೇ ಇಟ್ಟಿದ್ದಾರೆ.!
ತಾನು ಮತ್ತು ಅಜಯ್ ದೇವಗನ್ ʻಹಲ್ಚಲ್ʼ ಸಿನೆಮಾ ಶೂಟಿಂಗ್ ವೇಳೆ ಪರಿಚಯಗೊಂಡು 1999ರಲ್ಲಿ ಮದುವೆಯಾದೆವು. 2010ರಲ್ಲಿ ನಾನು ನಮ್ಮ ಮಗ ಯುಗ್ಗೆ ಜನ್ಮವಿತ್ತೆ. 2003ರಲ್ಲೇ ನಮ್ಮ ಮಗಳು ನೈಸಾ ಹುಟ್ಟಿದ್ದಳು ಎಂದು ಹೇಳಿದ್ದಾರೆ.
ಬಾಲಿವುಡ್ನ ಸ್ಟಾರ್ ಜೋಡಿಗಳ ʼಪೈಕಿ ಒಂದಾಗಿರುವ ಕಾಜಲ್-ಅಜಯ್ ದೇವಗನ್ ಈ ವರೆಗೆ ʻಗುಂಡಾರಾಜ್ʼ, ʻಇಷ್ಕ್ʼ, ʻದಿಲ್ ಕ್ಯಾ ಕರೇʼ, ರಾಜು ಚಾಚಾʼ, ʻಪ್ಯಾರ್ ತೋ ಹೋನಾʼ ಚಿತ್ರಗಳಲ್ಲಿ ಜೊತೆಯಾಗಿ ನ;ಟಿಸಿದ್ದಾರೆ. 2020ರಲ್ಲಿ ತೆರೆಕಂಡ ʻತಾನಾಜಿ: ದ ಅನ್ಸಂಗ್ ವಾರಿಯರ್ʼ ಚಿತ್ರವೇ ಈ ಜೋಡಿ ಜೊತೆಯಾಗಿ ನಟಿಸಿದ ಕೊನೆಯ ಚಿತ್ರ.
ಇದನ್ನೂ ಓದಿ: ನಟಿ Aneri Vajani ಬ್ಯೂಟಿಫುಲ್ ಫೋಟೋ ಗ್ಯಾಲರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ