KKR V/s RCB: ಇಂದು ಕೋಲ್ಕತದಲ್ಲಿ ಬೆಂಗಳೂರು ಆಟ

ಮತ್ತೂಂದು ರೋಚಕ ಪಂದ್ಯದ ನಿರೀಕ್ಷೆಯಲ್ಲಿ ಅಭಿಮಾನಿಗಳು

Team Udayavani, Apr 6, 2023, 7:52 AM IST

rcb kkr

ಕೋಲ್ಕತ: ಪ್ರಮುಖ ಆಟಗಾರರ ಗೈರು, ಒಂದಿಷ್ಟು ಮಂದಿ ಗಾಯಾಳುಗಳು, ಅಸ್ತವ್ಯಸ್ತಗೊಂಡ ತಂಡದ ಸಮತೋಲನ… ಇಂಥ ಸಮಾನ ಸಮಸ್ಯೆಗಳನ್ನು ಹೊತ್ತಿರುವ ಆತಿಥೇಯ ಕೋಲ್ಕತ ನೈಟ್‌ರೈಡರ್ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಗುರುವಾರ ರಾತ್ರಿ ಐತಿಹಾಸಿಕ ಈಡನ್‌ ಗಾರ್ಡನ್ಸ್‌ನಲ್ಲಿ ಮುಖಾಮುಖೀಯಾಗಲಿವೆ. ಬೆಂಗಳೂರು ಮೊದಲ ಪಂದ್ಯವನ್ನು ಗೆದ್ದ ಹುರುಪಿನಲ್ಲಿದ್ದರೆ, ಪಂಜಾಬ್‌ ವಿರುದ್ಧದ ಮಳೆ ಮುಖಾಮುಖೀಯನ್ನು ಕಳೆದುಕೊಂಡ ಕೋಲ್ಕತ ತವರಿನಂಗಳದಲ್ಲಿ ಗೆಲುವಿನ ಖಾತೆ ತೆರೆಯುವ ಯೋಜನೆಯಲ್ಲಿದೆ. ಹೀಗಾಗಿ ಇದೊಂದು ಸೂಪರ್‌ ಗೇಮ್‌ ಎನಿಸಿಕೊಳ್ಳುವ ಎಲ್ಲ ಸಾಧ್ಯತೆ ಇದೆ.

1,438 ದಿನಗಳ ಬಳಿಕ…: ಈಡನ್‌ ಗಾರ್ಡನ್ಸ್‌’ ಬರೋಬ್ಬರಿ 1,438 ದಿನಗಳ ಬಳಿಕ ಐಪಿಎಲ್‌ ಪಂದ್ಯವನ್ನು ಆಯೋಜಿಸುತ್ತಿದೆ. ಕೊರೊನಾಕ್ಕೂ ಮುನ್ನ, 2019ರ ಏ.28ರಂದು ಇಲ್ಲಿ ಕೊನೆಯ ಐಪಿಎಲ್‌ ಪಂದ್ಯ ಏರ್ಪಟ್ಟಿತ್ತು. ಅಂದಿನ ಮುಂಬೈ ಇಂಡಿಯನ್ಸ್‌ ಎದುರಿನ ಮುಖಾಮುಖೀಯನ್ನು ಕೆಕೆಆರ್‌ 34 ರನ್ನುಗಳಿಂದ ಜಯಿಸಿತ್ತು. ಐಪಿಎಲ್‌ ಪುನರಾಗಮನವನ್ನು ಗೆಲುವಿನೊಂದಿಗೆ ಆರಂಭಿಸಿ, ಈ ಋತುವಿನ ಖಾತೆ ತೆರೆಯುವುದು ಕೋಲ್ಕತ ತಂಡದ ಪ್ರಮುಖ ಗುರಿ.

ಬೆಂಗಳೂರು ಅಬ್ಬರದ ಆರಂಭ: ಬೆಂಗಳೂರು 2023ರ ಕ್ರಿಕೆಟ್‌ ಋತುವನ್ನು ಅಬ್ಬರದಿಂದಲೇ ಆರಂಭಿಸಿತ್ತು. ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ನಾಯಕ ಫಾ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಇಬ್ಬರೇ ಸೇರಿಕೊಂಡು 148 ರನ್‌ ಪೇರಿಸಿದ್ದನ್ನು ಮರೆಯುವಂತಿಲ್ಲ.

ಆದರೆ ಪ್ರತೀ ಸಲವೂ ಇಂಥ ಓಪನಿಂಗ್‌, ಇಂಥ ದೊಡ್ಡ ಜತೆಯಾಟ ಸಾಧ್ಯವಾಗದು. ಉಳಿದ ಬ್ಯಾಟರ್‌ಗಳೂ ಇಂಥದೇ ಆಟಕ್ಕೆ ಸಜ್ಜಾಗಿರಬೇಕಾಗುತ್ತದೆ. ಆದರೆ ಹೊಡಿಬಡಿ ಆಟಗಾರ ರಜತ್‌ ಪಾಟೀದಾರ್‌ ಕೂಟದಿಂದಲೇ ಹೊರಗುಳಿದದ್ದು ಆರ್‌ಸಿಬಿಗೆ ಎದುರಾಗಿರುವ ದೊಡ್ಡ ಗಂಡಾಂತರ. ಆರಂಭಿಕ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಪಾಟೀದಾರ್‌ ರಕ್ಷಣೆಗೆ ನಿಂತ ಸಾಕಷ್ಟು ನಿದರ್ಶನಗಳಿದ್ದವು. ಮುಂಬೈ ವಿರುದ್ಧ ಇವರ ಬದಲು ಒನ್‌ಡೌನ್‌ನಲ್ಲಿ ಬಂದಿದ್ದ ದಿನೇಶ್‌ ಕಾರ್ತಿಕ್‌ ಸೊನ್ನೆ ಸುತ್ತಿ ಹೋಗಿದ್ದನ್ನು ಗಮನಿಸಬಹುದು.

ಕಾರ್ತಿಕ್‌ ಅವರನ್ನು ಫಿನಿಶರ್‌ ಆಗಿ ಕೆಳಕ್ರಮಾಂಕದಲ್ಲಿ ಆಡಿಸುವುದು ಹೆಚ್ಚು ಸೂಕ್ತ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಪೂರ್ತಿ ಫಿಟ್‌ನೆಸ್‌ನೊಂದಿಗೆ ಮೊದಲ ಪಂದ್ಯಕ್ಕೇ ಲಭ್ಯರಾದದ್ದು ತಂಡದ ಅದೃಷ್ಟ. ಇನ್ನು ನ್ಯೂಜಿಲೆಂಡ್‌ನ‌ ಮೈಕೆಲ್‌ ಬ್ರೇಸ್‌ವೆಲ್‌ ಆಟವನ್ನು ಗಮನಿಸಬೇಕಿದೆ. ಇವರಿಗೆ ಮುಂಬೈ ವಿರುದ್ಧ ಬ್ಯಾಟ್‌ ಹಿಡಿಯುವ ಅವಕಾಶ ಸಿಕ್ಕಿರಲಿಲ್ಲ. ಇವರನ್ನು ಹೊರತುಪಡಿಸಿದರೆ ಆರ್‌ಸಿಬಿ ಬಳಿ ತಜ್ಞ ಬ್ಯಾಟರ್‌ಗಳಿಲ್ಲ ಎಂಬುದನ್ನು ಗಮನಿಸಬೇಕು. ಶಹಬಾಜ್‌ ಅಹ್ಮದ್‌ ಸೇರಿದಂತೆ 6 ಮಂದಿ ಬೌಲರ್‌ಗಳನ್ನೇ ಆಡಿಸಲಾಗಿತ್ತು. ಇವರ ಬ್ಯಾಟಿಂಗ್‌ ತಾಕತ್ತು ಎಲ್ಲರಿಗೂ ತಿಳಿದಿರುವಂಥದ್ದೇ. ಇವರಲ್ಲೊಬ್ಬರನ್ನು ಕೈಬಿಟ್ಟು ಸುಯಶ್‌ ಪ್ರಭುದೇಸಾಯಿ ಅಥವಾ ಮಹಿಪಾಲ್‌ ಲೊಮ್ರಾರ್‌ ಅವರನ್ನು ಆಡಿಸುವುದು ಒಳ್ಳೆಯದು. ಹಾಗೆಯೇ ರೀಸ್‌ ಟಾಪ್ಲೆ ಗಾಯಾಳಾಗಿದ್ದು, ಈ ಸ್ಥಾನ ಡೇವಿಡ್‌ ವಿಲ್ಲಿ ಪಾಲಾಗಬಹುದು.

ಆರ್‌ಸಿಬಿ ಬೌಲಿಂಗ್‌ ವಿಭಾಗ ಭಾರೀ ಘಾತಕವೇನಲ್ಲ. ಮುಂಬೈಯನ್ನು ಒಂದು ಹಂತದ ತನಕ ಹಿಡಿದಿರಿಸಿದರೂ ಬಳಿಕ ಬೆಂಗಳೂರು ತಂಡದ ಬೌಲಿಂಗ್‌ ಹಳಿ ತಪ್ಪಿತ್ತು. ಈಡನ್‌ ಪಿಚ್‌ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಸಿರಾಜ್‌, ಹರ್ಷಲ್‌, ಆಕಾಶ್‌ದೀಪ್‌ ಅವರೆಲ್ಲ ಹೆಚ್ಚು ಪರಿಣಾಮಕಾರಿಯಾಗಬೇಕಿದೆ.

ಕೆಕೆಆರ್‌ಗೆ ಸೂಕ್ತ ಸಾರಥಿ ಇಲ್ಲ: ಕೆಕೆಆರ್‌ಗೆ ಎದುರಾಗಿರುವ ದೊಡ್ಡ ಸಮಸ್ಯೆ ಸಾರಥಿಯದ್ದು. ಕಳೆದೆರಡು ವರ್ಷಗಳಿಂದ ನಾಯಕತ್ವದ ತೊಳಲಾಟದಲ್ಲಿರುವ ತಂಡ ಈ ಬಾರಿ ಇನ್ನಷ್ಟು ಒತ್ತಡಕ್ಕೆ ಸಿಲುಕಿದೆ. ಮೊದಲೇ ಬ್ಯಾಟಿಂಗ್‌ ಬರಗಾಲದಲ್ಲಿರುವ ನಿತೀಶ್‌ ರಾಣಾ ಈ ಜವಾಬ್ದಾರಿ ಹೊರಲು ಎಷ್ಟು ಶಕ್ತರು ಎಂಬ ಪ್ರಶ್ನೆ ತಂಡದೊಳಗೇ ಉದ್ಭವಿಸಿದೆ. ತಂಡದ ಬ್ಯಾಟಿಂಗ್‌ ಸರದಿ ಸಾಮಾನ್ಯ. ಯಾವುದೇ ಸ್ಟಾರ್‌ ಆಟಗಾರರನ್ನು ಹೊಂದಿಲ್ಲ. ಮನ್‌ದೀಪ್‌ ಸಿಂಗ್‌, ಅನುಕೂಲ್‌ ರಾಯ್‌, ರಿಂಕು ಸಿಂಗ್‌ ಮಾಮೂಲು ದರ್ಜೆಯ ಬ್ಯಾಟರ್. ರಸೆಲ್‌, ಸುನೀಲ್‌ ನಾರಾಯಣ್‌, ವೆಂಕಟೇಶ್‌ ಐಯ್ಯರ್‌ ಹಿಟ್ಟರ್‌ಗಳಾದರೂ ನಂಬುವುದು ಕಷ್ಟ. ಜೇಸನ್‌ ರಾಯ್‌ ಸೇರ್ಪಡೆಯಿಂದ ಓಪನಿಂಗ್‌ಗೆ ಬಲ ಬರುವುದು ಖಚಿತ. ಆದರೆ ಇವರು ಆರ್‌ಸಿಬಿ ಪಂದ್ಯಕ್ಕೆ ಲಭ್ಯರಾಗುವುದು ಇನ್ನೂ ಖಾತ್ರಿಯಾಗಿಲ್ಲ.

ಬೌಲಿಂಗ್‌ನಲ್ಲಿ ಸೌಥಿ, ಉಮೇಶ್‌ ಯಾದವ್‌, ಚಕ್ರವರ್ತಿ, ನಾರಾಯಣ್‌ ಅವರನ್ನು ಅವಲಂಬಿಸಿದೆ. ಆದರೆ ಮೊಹಾಲಿಯಲ್ಲಿ ಇವರಿಗೆ ಪಂಜಾಬ್‌ ತಂಡವನ್ನು ನಿಯಂತ್ರಿಸಲಾಗಿರಲಿಲ್ಲ. ತವರಿನಂಗಳದಲ್ಲಿ ಹಿಡಿತ ಸಾಧಿಸಬಹುದೇ ಎಂಬುದೊಂದು ಪ್ರಶ್ನೆ.
ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಫ್ಲಡ್‌ಲೈಟ್‌ ಕೈಕೊಟ್ಟದ್ದು ಕೆಕೆಆರ್‌ಗೆ ಮುಳುವಾಯಿತು. ಇಲ್ಲಿ ಅರ್ಧ ಗಂಟೆಯಷ್ಟು ಆಟ ನಷ್ಟವಾಯಿತು, ಕೊನೆಯಲ್ಲಿ ಮಳೆ ಸುರಿಯಿತು. ತವರಲ್ಲಿ ಅದೃಷ್ಟ ಒಲಿದೀತೇ?

48ಕ್ಕೆ 4 ವಿಕೆಟ್‌, 14ನೇ ಓವರ್‌ನಲ್ಲಿ 98ಕ್ಕೆ 5 ವಿಕೆಟ್‌ ಕಳೆದುಕೊಂಡ ಸ್ಥಿತಿಯಲ್ಲಿದ್ದ ಮುಂಬೈ 7ಕ್ಕೆ 171ರ ತನಕ ಬೆಳೆದಿತ್ತು. ಸಿರಾಜ್‌ ಎಸೆದ ಸಾಲು ಸಾಲು ವೈಡ್‌ ಎಸೆತಗಳು ಯೋಚಿಸುವಂತೆ ಮಾಡಿವೆ. 10 ವೈಡ್‌ ಎಸೆತಗಳಿಂದ ಆರ್‌ಸಿಬಿ ಬೌಲಿಂಗ್‌ಗೆ ಕಳಂಕ ಮೆತ್ತಿತ್ತು. ಇದಕ್ಕೆ ಪರಿಹಾರ ಅತ್ಯಗತ್ಯ.

ಟಾಪ್ ನ್ಯೂಸ್

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI

T20 World Cup: ಇಂದು ಭಾರತ ತಂಡ ಪ್ರಕಟ?

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.