Mandya: ಟೊಮೆಟೋ ರಕ್ಷಣೆಗಿಳಿದ ರೈತರು!
ದರ ಏರಿಕೆ, ಭಾರೀ ಬೇಡಿಕೆಯಿಂದ ನಿದ್ದೆ ಬಿಟ್ಟು ಹೊಲ ಕಾಯುವ ಅನಿವಾರ್ಯತೆ
Team Udayavani, Jul 2, 2023, 7:42 AM IST
ಬೆಂಗಳೂರು: ಬಾಂಗ್ಲಾದೇಶ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಿಗೆ ಟೊಮೆಟೋ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈಗ ಟೊಮೆಟೋ ಬೆಳೆಗಾರರು ರಾತ್ರಿ ವೇಳೆ ತಮ್ಮ ಬೆಳೆಯನ್ನು ಕಾಯುವಂತಾಗಿದೆ!
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆಲವೆಡೆ ರೈತರು ನಿದ್ದೆ ಬಿಟ್ಟು ಟೊಮೆಟೋ ಬೆಳೆಯನ್ನು ಕಾಯುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಹೊಲಗಳಲ್ಲಿ ಕಳ್ಳಕಾಕರು ಟೊಮೆಟೋ ಕದಿಯುವ ಸಾಧ್ಯತೆಯಿರುವ ಕಾರಣ ಗುಡಿಸಲು ಹಾಕಿಕೊಂಡು ಬೆಳೆ ರಕ್ಷಣೆಯಲ್ಲಿ ತೊಡಗಿದ್ದಾರೆ. ಕೆಲವರಂತೂ ಕೂಲಿ ಕೊಟ್ಟು ಬೆಳೆ ರಕ್ಷಣೆ ಮಾಡುತ್ತಿದ್ದಾರೆ.
ಈ ಮಧ್ಯೆ ಟೊಮೆಟೋ ಬೆಲೆ ಏರಿಕೆಯಿಂದ ಗ್ರಾಹಕರ ಮಾತ್ರವಲ್ಲದೆ, ಮಾರಾಟಗಾರರಿಗೂ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ.
ಬೆಲೆ ದಿನೇದಿನೆ ಏರುತ್ತಿರುವುದರಿಂದ ಅದನ್ನು ಖರೀದಿಸಿ ಸಂಗ್ರಹಿಸಿಡುವುದು ಸವಾಲಿನ ಕೆಲಸ ವಾಗಿದೆ. ಗುಣಮಟ್ಟದಲ್ಲಿ ಕಡಿಮೆ ಇರುವ ಟೊಮೆಟೋ ಒಂದೆರಡು ದಿನಗಳಲ್ಲಿ ಹಣ್ಣಾಗಿ ಕೊಳೆತು ಹೋಗುತ್ತವೆ. ಮಾರಾಟವಾಗದೆ ಹೋದರೆ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಕಲಾಸಿಪಾಳ್ಯದ ರಖಂ ವ್ಯಾಪಾರಿ ರವಿರಾಜ್ ಹೇಳುತ್ತಾರೆ. ಈರುಳ್ಳಿ ರೀತಿಯಲ್ಲಿ ಟೊಮೆಟೋವನ್ನು ಬಹಳ ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಹಾಗಾಗಿ ಅದನ್ನು ಖರೀದಿಸಲೂ ಭಯವಾಗುತ್ತಿದೆ ಎನ್ನುತ್ತಾರೆ.
ಶನಿವಾರ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ 24 ಕೆ.ಜಿ. ಬಾಕ್ಸ್ನ ಟೊಮೆಟೋ 2,600 ರೂ.ಗೆ, ಕೋಲಾರ ಎಪಿಎಂಸಿಯಲ್ಲಿ 14 ಕೆ.ಜಿ. ಬಾಕ್ಸ್ ಟೊಮೆಟೋ 1,100- 1,200 ರೂ.ವರೆಗೂ ಖರೀದಿ ಆಯಿತು ಎಂದು ತಿಳಿದು ಬಂದಿದೆ.
ಕಲಾಸಿಪಾಳ್ಯಲ್ಲಿ ಈ ಹಿಂದೆ ರಖಂ ಆಗಿ ನಿತ್ಯ 14 ಕೆ.ಜಿ.ಯ 30 ಬಾಕ್ಸ್ ಖರೀದಿಸುತ್ತಿದ್ದೆ. ಈಗ ಕೇವಲ 6 ಬಾಕ್ಸ್ ಖರೀದಿಸುತ್ತಿದ್ದೇನೆ ಎಂದು ಪೀಣ್ಯದ ತರಕಾರಿ ವ್ಯಾಪಾರಿ ಜಗದೀಶ್ ಹೇಳುತ್ತಾರೆ.
ಈ ಹಿಂದೆ 2 ಸಾವಿರ ರೂ. ನೀಡಿ 10 ಬಾಕ್ಸ್ ಟೊಮೆಟೋ ಖರೀದಿಸುತ್ತಿದ್ದೆ. ಈಗ 16 ಸಾವಿರ ರೂ. ನೀಡಿ 6 ಬಾಕ್ಸ್ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಟೊಮ್ಯಾಟೊ ಬೇಗ ಕೊಳೆತು ಹೋಗುವುದರಿಂದ ಲಾಭವನ್ನೆಲ್ಲ ನಷ್ಟಕ್ಕೆ ಸರಿಪಡಿಸಬೇಕಾದ ಸನ್ನಿವೇಶ ಇದೆ ಎನ್ನುತ್ತಾರೆ.
ನಿಯಂತ್ರಣಕ್ಕೆ ಬರಬಹುದು
ಆಷಾಢ ಮಾಸ ಆರಂಭವಾಗಿದ್ದು, ಶುಭ ಕಾರ್ಯಕ್ರಮಗಳು ಕಡಿಮೆ ಆಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಕಾರಿ ಮತ್ತಿತರ ಆಹಾರ ಪದಾರ್ಥಗಳ ಬೆಲೆ ಇಳಿಕೆ ಆಗಬಹುದು ಎಂದು ಕೆ.ಆರ್.ಮಾರುಕಟ್ಟೆಯ ಮುರುಗನ್ ಹೇಳುತ್ತಾರೆ.
ಬೆಳೆ ಹಾನಿಯಿಂದ ಈಗ ಬೇಡಿಕೆಯಿರುವಷ್ಟು ಟೊಮೆಟೋ ಮಾರು ಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಉತ್ತಮ ಗುಣಮಟ್ಟದ ಟೊಮೆಟೋ ಬಾಂಗ್ಲಾ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ರಫ್ತಾಗುತ್ತಿದೆ. ಹೊಸ ಬೆಳೆ ಬರುವವರೆಗೂ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ.
– ಪುಟ್ಟರಾಜು, ವರ್ತಕರು, ಕೋಲಾರ
ತಳ್ಳುಗಾಡಿ ವ್ಯಾಪಾರಕ್ಕೆೆ ಹೆದರಿಕೆ
ತಳ್ಳುಗಾಡಿಯಲ್ಲಿ ಟೊಮೆಟೋ ಮಾರಾಟ ಮಾಡುವುದಕ್ಕೆ ಹೆದರಿಕೆ ಆಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಪ್ರತಿ ಕೆ.ಜಿಗೆ 110-120 ರೂ.ಗೆ ಮಾರಬೇಕಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಳ್ಳುಗಾಡಿಯಲ್ಲೇ ಟೊಮೆಟೋ ಖರೀದಿಸುತ್ತಾರೆ. ಆದರೆ ಈಗ ಬೆಲೆ ನೂರರ ಗಡಿ ದಾಟಿರುವ ಹಿನ್ನೆಲೆಯಲ್ಲಿ ಅವರೂ ಖರೀದಿಗೆ ಅಂಜುತ್ತಾರೆ. ಹೀಗಾಗಿ ಕಳೆದ ಒಂದು ವಾರದಿಂದ ವ್ಯಾಪಾರದಲ್ಲಿ 7-8 ಸಾ.ರೂ. ನಷ್ಟ ಮಾಡಿಕೊಂಡಿದ್ದೇನೆ ಎಂದು ಮಾಗಡಿ ರಸ್ತೆಯ ತಳ್ಳುಗಾಡಿ ವ್ಯಾಪಾರಿ ಸೆಂಥಿಲ್ ಹೇಳುತ್ತಾರೆ.
ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ