30 ವರ್ಷದ ಏಕಾಂಗಿ ಪರಿಶ್ರಮ: ಬೆಟ್ಟದ ನೀರು ಹಳ್ಳಿಗೆ ತಂದ ಭಗೀರಥ
ಬಿಹಾರದ ಹಳ್ಳಿಗ ಭುಇಯಾ ಎಂಬಾ ತನ 30 ವರ್ಷದ ಪರಿಶ್ರಮಕ್ಕೆ ಸಂದ ಫಲ
Team Udayavani, Sep 14, 2020, 12:20 PM IST
ಪಟ್ನಾ: ಬಿಹಾರದ ಗಯಾ ಜಿಲ್ಲೆಯ ಗೆಹ್ಲಾರ್ ಎಂಬ ಹಳ್ಳಿ ಯಲ್ಲಿ ಬೆಟ್ಟವೊಂದನ್ನು ಸುತ್ತಿಗೆ, ಹಾರೆಗಳಿಂದ ಏಕಾಂಗಿಯಾಗಿ ಕಡಿದು ನಡುವೆ ರಸ್ತೆ ಮಾಡಿದ ದಶರಥ್ ಮಾಂಝಿ ಎಂಬ ವ್ಯಕ್ತಿಯನ್ನು ಬಹುಶಃ ಯಾರೂ ಮರೆತಿರಲಾರರು. ಅವರಂತೆಯೇ, ಅದೇ ಗಯಾ ಜಿಲ್ಲೆಯ ಲಾಹುವಾ ಪ್ರಾಂತ್ಯದ ಕೋಥಿ ಲಾವಾ ಎಂಬ ಹಳ್ಳಿಯಲ್ಲಿ ಲೌಂಗಿ ಭುಇಯಾ ಎಂಬ ವ್ಯಕ್ತಿ ತಮ್ಮ ಹಳ್ಳಿಯ ಹತ್ತಿರದ ಬೆಟ್ಟಗಳ ಮೇಲೆ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ತನ್ನ ಹಳ್ಳಿಯ ಹೊಲಗಳಿಗೆ ಹಾಯಿಸಲು ಸುಮಾರು 3 ಕಿ.ಮೀ. ದೂರದವರೆಗೆ ಏಕಾಂಗಿಯಾಗಿ ಕಾಲುವೆ ತೋಡಿದ ಸಾಧನೆ ಮಾಡಿದ್ದಾರೆ.
ದಟ್ಟ ಕಾಡುಗಳಾಚೆ ಗಿನ ಬೆಟ್ಟದಿಂದ ತನ್ನ ಹಳ್ಳಿಯ ಕೆರೆಗೆ ಬೆಟ್ಟದ ನೀರು ತರಲು ಆತ ತೆಗೆದುಕೊಂಡದ್ದು ಬರೋಬ್ಬರಿ 30 ವರ್ಷ. ಪ್ರತಿ ದಿನವೂ ಗೋವುಗಳನ್ನು ಮೇಯಲು ಅರಣ್ಯದ ಕಡೆಗೆ ಕರೆದುಕೊಂಡು ಹೋಗುತ್ತಿದ್ದ ಅವರಿಗೆ ಮಳೆಗಾಲದಲ್ಲಿ ಬೆಟ್ಟಗಳ ಮೇಲಿನ ನೀರು ಒಂದೆಡೆ ಸಂಗ್ರಹವಾಗಿ, ಆನಂತರ ತೊರೆಯಾಗಿ ಹರಿದು ಹೋಗುತ್ತಿದ್ದುದು ಗಮನಕ್ಕೆ ಬಂದಿತ್ತು. ಅದನ್ನು ಹೇಗಾದರೂ ಮಾಡಿ ತನ್ನ ಹಳ್ಳಿಯ ಕಡೆಗೆ ಹರಿಸಬೇಕು ಎಂದು ಅವರು ಮನಸ್ಸು ಮಾಡಿದ್ದರು.
ಇದನ್ನು ಹಳ್ಳಿಯವರ ಬಳಿ ಹೇಳಿಕೊಂಡಾಗ ಯಾರೂ ಅವರ ಆಲೋಚನೆಗೆ ಓಗೊಡಲಿಲ್ಲ. ಆದರೂ, ವಿಮುಖರಾಗದ ಅವರು ಪ್ರತಿದಿನ ಗೋವುಗಳು ಮೇಯುವಷ್ಟರಲ್ಲಿ ತನ್ನ ಕೈಲಾದಷ್ಟು ನೆಲವನ್ನು ತೋಡಿ, ಹಂತ ಹಂತವಾಗಿ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ