ಮುಷ್ತಾಕ್ ಅಲಿ: ಫ್ರಾಂಚೈಸಿಗಳನ್ನು ಸೆಳೆಯುವ ಸೆಮಿಫೈನಲ್
Team Udayavani, Jan 29, 2021, 1:30 AM IST
ಅಹ್ಮದಾಬಾದ್: ಪ್ರಸಕ್ತ ಋತುವಿನ ಮೊದಲ ದೇಶಿ ಕ್ರಿಕೆಟ್ ಪಂದ್ಯಾವಳಿ “ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ’ ಸೆಮಿಫೈನಲ್ನತ್ತ ಮುಖ ಮಾಡಿದೆ. ಶುಕ್ರವಾರ ಎರಡೂ ಉಪಾಂತ್ಯ ಪಂದ್ಯಗಳು ಇಲ್ಲಿನ “ಸರ್ದಾರ್ ಪಟೇಲ್ ಸ್ಟೇಡಿಯಂ’ನಲ್ಲಿ ನಡೆಯಲಿದ್ದು, ಫೆ. 18ರ ಐಪಿಎಲ್ ಹರಾಜಿಗೆ ಫ್ರಾಂಚೈಸಿಗಳನ್ನು ಆಕರ್ಷಿಸಲು ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಫ್ರಾಂಚೈಸಿಗಳ ಕೆಲವು ಮಾಲಕರು ಈ ಪಂದ್ಯಗಳ ವೇಳೆ ಉಪಸ್ಥಿತರಿರುವರು ಎನ್ನಲಾಗಿದೆ. ಜತೆಗೆ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಕೂಡ ಪಂದ್ಯಗಳನ್ನು ವೀಕ್ಷಿಸುವ ಕಾರ್ಯಕ್ರಮವಿತ್ತು. ಆದರೆ ಅಚ್ಚರಿಯೆಂಬಂತೆ ಅವರು ಚೆನ್ನೈಗೆ ಆಗಮಿಸಿ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಿದ್ದಾರೆ.
ಇದನ್ನೂ ಓದಿ:ಗಂಗೂಲಿಗೆ ಆ್ಯಂಜಿಯೊಪ್ಲಾಸ್ಟಿ, ಮತ್ತೆರಡು ಸ್ಟೆಂಟ್ ಅಳವಡಿಕೆ
ಟಿ20 ಸ್ಪೆಷಲಿಸ್ಟ್ ಆಟಗಾರರು
ಅಪರಾಹ್ನದ ಪಂದ್ಯದಲ್ಲಿ ತಮಿಳು ನಾಡು-ರಾಜಸ್ಥಾನ ಎದುರಾದರೆ, ರಾತ್ರಿ ಪಂಜಾಬ್-ಬರೋಡ ಮುಖಾಮುಖೀ ಯಾಗಲಿವೆ. ವಿಜೇತ ತಂಡಗಳು ರವಿವಾರದ ಪ್ರಶಸ್ತಿ ಸಮರದಲ್ಲಿ ಸೆಣಸಾಡಲಿವೆ.
ನಾಲ್ಕೂ ತಂಡಗಳು ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದ್ದು, ಕುತೂಹ ಲಕಾರಿ ಹೋರಾಟ ಕಂಡುಬರು
ವುದರಲ್ಲಿ ಅನುಮಾನವಿಲ್ಲ. ಇವುಗಳಲ್ಲಿ, ಅಜೇಯ ಪಂಜಾಬ್ ಮತ್ತು ಆತಿಥೇಯ ಬರೋಡ ತಂಡಗಳ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಡಬಹುದೆಂಬುದು ಎಲ್ಲರ ನಿರೀಕ್ಷೆ.
ಹರ್ಯಾಣ ಎದುರಿನ ಕ್ವಾರ್ಟರ್ ಫೈನಲ್ನಲ್ಲಿ ಮಿಂಚಿದ ವಿಷ್ಣು ಸೋಲಂಕಿ ಬರೋಡದ ಆಕರ್ಷಣೆಯಾಗಿದ್ದಾರೆ. ಕೊನೆಯ ಎಸೆತವನ್ನು ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ಗೆ ಬಡಿದಟ್ಟುವ ಮೂಲಕ ಅವರು ಗೆಲುವಿನನ ರೂವಾರಿಯಾಗಿ ಹೊರಹೊಮ್ಮಿದ್ದರು. ಪಂಜಾಬ್ ಪೇಸ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮ, ಆರ್ಷದೀಪ್ ಅವರನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ ಎಂಬುದೊಂದು ಲೆಕ್ಕಾಚಾರ. ಲೆಗ್ಸ್ಪಿನ್ನರ್ ಮಾಯಾಂಕ್ ಮಾರ್ಕಂಡೆ ಕೂಡ ಉತ್ತಮ ಲಯದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ