ಶುಕ್ರ ಗ್ರಹದ ಅಧ್ಯಯನಕ್ಕೆ ನಾಸಾದಿಂದ ಎರಡು ಯೋಜನೆ : 2030ರೊಳಗೆ ಯೋಜನೆ ಅನುಷ್ಠಾನ
ಶುಕ್ರನ ಪ್ರತಿಕೂಲ ಹವಾಮಾನ ಅಧ್ಯಯನವೇ ಯೋಜನೆಯ ಮುಖ್ಯ ಉದ್ದೇಶ
Team Udayavani, Jun 6, 2021, 7:10 PM IST
ವಾಷಿಂಗ್ಟನ್: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ), 2028ರಿಂದ 2030ರೊಳಗಾಗಿ, ಶುಕ್ರಗ್ರಹದ ಅಧ್ಯಯನಕ್ಕಾಗಿ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದೆ.
ಇದರಲ್ಲಿ ಮೊದಲು ಶುಕ್ರಗ್ರಹದತ್ತ ತೆರಳಲಿರುವ ಡಾವಿನ್ಸಿ (ಡೀಪ್ ಅಟ್ಮಾಸ್ಪಿಯರ್ ಆಫ್ ವೀನಸ್ ಇನ್ವೆಸ್ಟಿಗೇಷನ್ ಆಫ್ ನೋಬಲ್ ಗ್ಯಾಸಸ್) ಎಂಬ ಆಕಾಶಕಾಯವು ಬುಧನಲ್ಲಿರುವ ರಾಸಾಯನಿಕಗಳ ಮಾಹಿತಿಯನ್ನು ಸಂಗ್ರಹಿಸಿ, ಭೂಮಿಗೆ ರವಾನಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆಗಳು ಅತ್ಯಂತ ಮಹತ್ವ ಹಾಗೂ ವಿಶೇಷವಾಗಿವೆ ಎಂದಿರುವ ಯು.ಕೆ.ಯ ನಾಟಿಂಗ್ಹ್ಯಾಮ್ ಟ್ರೆಂಟ್ ವಿವಿಯ ಭೌತಶಾಸ್ತ್ರ ಉಪನ್ಯಾಸಕ ಇಯಾನ್ ವ್ಹಿಟೇಕರ್, ಈ ಕುರಿತಂತೆ ವಿವರಣೆ ನೀಡಿದ್ದಾರೆ. 1990ರ ನಂತರ ಶುಕ್ರಗ್ರಹದ ಅಧ್ಯಯನ ಮಾಡಲಾಗಿಲ್ಲ. ಇಂಥ ದೈತ್ಯ ಪ್ರಯತ್ನವೊಂದಕ್ಕೆ ನಾಸಾ ಮುಂದಡಿಯಿಟ್ಟಿರುವುದು ಮಹತ್ವದ ವಿಚಾರ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆ ವೈದ್ಯನ ಚಿಕಿತ್ಸೆಗೆ 1.5 ಕೋಟಿ ಕೊಟ್ಟ ಆಂಧ್ರ ಸಿಎಂ
ಅಧ್ಯಯನ ಏಕೆ?
ಇನ್ನು, ಶುಕ್ರಗ್ರಹದ ವಾತಾವರಣ ಭಾರೀ ಭಯಂಕರ. ಅದೊಂದು ಪ್ರತಿಕೂಲ ಜಗತ್ತು. ಅಲ್ಲಿನ ವಾತಾವರಣವು ಗಂಧಕಾಮ್ಲದಿಂದ ಕೂಡಿದೆ. ಅಲ್ಲಿನ ಉಷ್ಣಾಂಶ ಸೀಸವನ್ನೂ ಕರಗಿಸುವಂಥದ್ದು! ಅಂದರೆ, 325 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು. ಇನ್ನು ಅಲ್ಲಿನ ಗಾಳಿಯಲ್ಲಿ ಶೇ. 96ರಷ್ಟು ಭಾಗ ಇಂಗಾಲದಿಂದ ಕೂಡಿದೆ. ಇದರಿಂದ ಅಲ್ಲಿ ಗರಿಷ್ಠ ತಾಪಮಾನ ಒಮ್ಮೊಮ್ಮೆ 470 ಡಿಗ್ರಿ ಸೆಲ್ಸಿಯಸ್ನಿಂದ 900 ಡಿಗ್ರಿ ಸೆಲ್ಸಿಯಸ್ವರೆಗೆ ಏರುತ್ತದೆ. ಹಾಗಾಗಿಯೇ, ಈ ಗ್ರಹದ ಅಧ್ಯಯನ ಕುತೂಹಲಕಾರಿಯಾಗಿದೆ ಎನ್ನುತ್ತಾರೆ ಇಯಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ