‘ಅಸಾಧಾರಣ ಮನುಷ್ಯನ ಆಶ್ರಮ’: ಗಾಂಧೀಜಿ ಸಬರಮತಿಯಲ್ಲಿ ಬೋರಿಸ್ ಜಾನ್ಸನ್
ಎರಡು ದಿನಗಳ ಭಾರತ ಪ್ರವಾಸದಲ್ಲಿ ಯುಕೆ ಪ್ರಧಾನಿ
Team Udayavani, Apr 21, 2022, 2:40 PM IST
ಅಹಮದಾಬಾದ್ : ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಗುರುವಾರ ಗುಜರಾತ್ ಗೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರಸಿದ್ಧ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಗುಜರಾತ್ ಸಿಎಂ ಭೂಪೇಶ್ ಪಟೇಲ್ ಅವರ ಜತೆಗಿದ್ದರು.
ಆಶ್ರಮ ಸಂದರ್ಶಕರ ಪುಸ್ತಕದಲ್ಲಿನ ತಮ್ಮ ಸಂದೇಶದಲ್ಲಿ, ಯುಕೆ ಪ್ರಧಾನಿ ಅವರು ಭಾರತವನ್ನು ಸ್ವಾತಂತ್ರ್ಯದ ಕಡೆಗೆ ತಂಡ ಮಹಾತ್ಮ ಗಾಂಧಿಯವರ ಮೌಲ್ಯಗಳನ್ನು ಶ್ಲಾಘಿಸುವ ಸಂದೇಶವನ್ನು ಬರೆದಿದ್ದಾರೆ.
“ಈ ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬರಲು ಹೆಮ್ಮೆಯೆನಿಸುತ್ತದೆ. ಜಗತ್ತನ್ನು ಉತ್ತಮವಾಗಿ ಬದಲಾಯಿಸಲು ಅವರು ಸತ್ಯ ಮತ್ತು ಅಹಿಂಸೆಯ ಇಂತಹ ಸರಳ ತತ್ವಗಳನ್ನು ಹೇಗೆ ಸಜ್ಜುಗೊಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಬಹುದು” ಎಂದು ಬೋರಿಸ್ ಜಾನ್ಸನ್ ಬರೆದಿದ್ದಾರೆ.
ಮೊಟ್ಟಮೊದಲ ಬಾರಿಗೆ ಗುಜರಾತ್ ಗೆ ಆಗಮಿಸಿರುವ ಜಾನ್ಸನ್ ಅವರು ಆಶ್ರಮದಲ್ಲಿ ಚರಕದ ಎದುರು ಕುಳಿತು ನೇಯ್ಗೆಯನ್ನು ಮಾಡಿದರು.
#WATCH | Prime Minister of the United Kingdom Boris Johnson visits Sabarmati Ashram, tries his hands on ‘charkha’ pic.twitter.com/6RTCpyce3k
— ANI (@ANI) April 21, 2022
ಬೋರಿಸ್ ಜಾನ್ಸನ್ ಅವರು ಅಹಮದಾಬಾದ್ನಲ್ಲಿ ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿಯನ್ನು ಭೇಟಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್