ಕೈಗಾರಿಕೆ ಬೆಳವಣಿಗೆಗೆ ಪ್ರಧಾನಿ ಐದು ಸೂತ್ರ
"ಸಿಐಐ' 125ನೇ ವಾರ್ಷಿಕೋತ್ಸವದಲ್ಲಿ ಭಾಷಣ
Team Udayavani, Jun 3, 2020, 6:20 AM IST
ಹೊಸದಿಲ್ಲಿ: ಕೋವಿಡ್-19 ಬಿಕ್ಕಟ್ಟಿನಿಂದಾಗಿ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಕೈಗಾರಿಕಾ ರಂಗಕ್ಕೆ ಪ್ರಧಾನಿ ಮೋದಿ 5 “ಐ’ಗಳ ಸೂತ್ರ ನೀಡಿದ್ದಾರೆ.
ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಸಂಸ್ಥೆಯ 125ನೇ ವಾರ್ಷಿಕೋತ್ಸವ ಸಮ್ಮೇಳನವನ್ನು ಮಂಗಳವಾರ ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,inclusion (ಉದ್ದೇಶ), inclusion (ಒಳಗೊಳ್ಳುವಿಕೆ), investment (ಹೂಡಿಕೆ), infrastructure (ಮೂಲ ಸೌಕರ್ಯ), innovation (ಆವಿಷ್ಕಾರ) ಎಂಬ ಐದು ಅಂಶಗಳ ಸೂತ್ರ ಅಳವಡಿಸಿಕೊಂಡಲ್ಲಿ ಆರ್ಥಿಕ ಬೆಳವಣಿಗೆಯ ವೇಗವನ್ನು ಮತ್ತೆ ಹೆಚ್ಚಿಸಬಹುದು ಎಂದು ತಿಳಿಸಿದರು.
ದೇಶದ ಆರ್ಥಿಕ ಬೆಳವಣಿಗೆ ಖಂಡಿತ ಚೇತರಿಕೆ ಕಾಣುತ್ತದೆ. ಕಠಿನ ಪರಿಶ್ರಮಪಡಲು ಈ ದೇಶದ ಉದ್ಯಮ ರಂಗ ಸಿದ್ಧವಿದೆ. ಛಲಬಿಡದೆ ದುಡಿಯುವಂಥ ಜನರು ನಮ್ಮಲ್ಲಿದ್ದಾರೆ. ಹೀಗಿರುವಾಗ ನಾವು ಏಕೆ ಹೆದರಬೇಕು ಎಂದು ಪ್ರಶ್ನಿಸಿದ್ದಾರೆ.
“ವಿಶ್ವಮಟ್ಟಕ್ಕೆ ಬೆಳೆಯಲಿ’
ಮೊದಲಿಗೆ ಕೋವಿಡ್-19 ನಮ್ಮ ಆರ್ಥಿಕ ವೇಗವನ್ನು ತಡೆಯಿತು. ಆದರೆ ಈಗ ನಾವು ಅದರ ಹರಡುವಿಕೆ ವೇಗವನ್ನು ತಡೆದಿದ್ದೇವೆ ಎಂದ ಪ್ರಧಾನಿ, ಸ್ಥಳೀಯ ಮಟ್ಟದ ಸ್ಫೂರ್ತಿಯ ಚಿಲುಮೆಯಾಗಿ ಎಂದು ಕೈಗಾರಿಕೆಗಳಿಗೆ ಕರೆ ನೀಡಿದರು. ವಿಶ್ವದ ಕೈಗಾರಿಕಾ ರಂಗ ತನಗೊಂದು ಅತ್ಯುತ್ತಮ ಜತೆಗಾರ ಸಿಗಬೇಕೆಂದು ಹಂಬಲಿಸುತ್ತಿದೆ. ಆ ಸ್ಥಾನವನ್ನು ತುಂಬುವ ಶಕ್ತಿ, ಸಂಪನ್ಮೂಲ ಮತ್ತು ಅರ್ಹತೆ ಭಾರತಕ್ಕಿದೆ. ಇದನ್ನು ಸರಿಯಾಗಿ ಬಳಸಿ ವಿಶ್ವಮಟ್ಟಕ್ಕೆ ಭಾರತೀಯ ಉದ್ಯಮಗಳು ಬೆಳೆಯಲಿ ಎಂದು ಹಾರೈಸಿದರು.
ಚೀನ ಆಧಿಪತ್ಯ ಕಸಿಯಲು ಪರೋಕ್ಷ ಕರೆ
ಗ್ಲೋಬಲ್ ಸಪ್ಲೈ ಚೈನ್ನಲ್ಲಿ ಚೀನ ಹೊಂದಿರುವ ಆಧಿಪತ್ಯವನ್ನು ಕೊನೆಗಾಣಿಸುವಂತೆ ಪ್ರಧಾನಿ ಮೋದಿಯವರು ಭಾರತೀಯ ಕೈಗಾರಿಕೋದ್ಯಮಿಗಳಿಗೆ ಪರೋಕ್ಷವಾಗಿ ಕರೆ ನೀಡಿದ್ದಾರೆ. ಅದಕ್ಕಾಗಿ “ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದ ವರ್ಲ್ಡ್’ ಎಂಬ ಮೂಲಮಂತ್ರವನ್ನು ಎಲ್ಲ ಕೈಗಾರಿಕೆಗಳೂ ಮೈಗೂಡಿಸಿಕೊಳ್ಳಬೇಕು. ಜಾಗತಿಕ ರಂಗದಲ್ಲಿ ಗುರುತಿಸಿಕೊಳ್ಳುವ ಮುನ್ನ ನಾವು ದೇಶೀಯ ಸಪ್ಲೆ„ ಚೈನ್ ಅನ್ನು ಸಂಪೂರ್ಣ ಸ್ವಾವಲಂಬಿಯಾಗಿಸಬೇಕಿದೆ. ದೇಶದೊಳಗೆ ನಾವು ಇದನ್ನು ಸಾಧಿಸಿದರೆ ವಿಶ್ವಮಟ್ಟದಲ್ಲೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ