ರೈಲಿನಲ್ಲಿ ಚಿನ್ನಾಭರಣದ ಬ್ಯಾಗ್ ಕಳ್ಳತನ! 14 ತಾಸಿನಲ್ಲಿ ಕಳ್ಳನನ್ನ ಬಂಧಿಸಿದ ರೇಲ್ವೆ ಪೊಲೀಸ್
ಉಡುಪಿ ಮೂಲದ ಮಹಿಳೆ ಬ್ಯಾಗ್ ಕದ್ದಿದ್ದ ಕದೀಮ
Team Udayavani, Nov 15, 2020, 9:25 PM IST
ಕಾರವಾರ: ಉಡುಪಿಯಿಂದ ಮುಂಬೈಗೆ ಮಂಗಳಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳತನವಾಗಿದ್ದ ಮಹಿಳಾ ಪ್ರಯಾಣಿಕರ ಬ್ಯಾಗ್ ಆಭರಣ ಸಮೇತ ಮರಳಿ ಹುಡುಕುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವನಿತಾ ದಿವಾಕರ ಶೆಟ್ಟಿ ಕಳೆದುಕೊಂಡಿದ್ದ 2.20 ಲಕ್ಷ ರೂ. ಬೆಲೆಯ ಬಂಗಾರದ ಆಭರಣಗಳು ಸಹ ಮರಳಿ ಸಿಕ್ಕಿವೆ. ರೈಲ್ವೆ ಪೊಲೀಸರು ಬ್ಯಾಗ್ ಕಳ್ಳನನ್ನು ಸಿಸಿಟಿವಿ ಕ್ಯಾಮರಾ ನೆರವಿನಿಂದ ಸೆರೆ ಹಿಡಿದಿದ್ದಾರೆ.
ಮಂಗಳಾ ಎಕ್ಸ್ಪ್ರೆಸ್ ಎಸಿ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ವನಿತಾ ಶೆಟ್ಟಿ ಬ್ಯಾಗ್ನಲ್ಲಿ ಬಂಗಾರದ ಬಳೆ, ಮಾಂಗಲ್ಯ, ಎಟಿಎಂ, ಆಧಾರ್ ಕಾರ್ಡ್, 6000 ನಗದುಳ್ಳ ಬ್ಯಾಗ್ನೊಂದಿಗೆ ಮುಂಬೈಗೆ ಪ್ರಯಾಣಿಸುತ್ತಿದ್ದರು. ಉಡುಪಿಯಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಅವರ ಬ್ಯಾಗ್ ಕಾಣೆಯಾಗಿತ್ತು. ತಕ್ಷಣವೇ ಟಿಟಿಇ ಅವರ ಗಮನಕ್ಕೆ ತಂದಿದ್ದಾರೆ. ಈ ವಿಷಯ ಕ್ಷಣಾರ್ಧದಲ್ಲಿ ಮಡಗಾಂವ್ ಆರ್ಪಿಎಫ್ ವಿನೋದಕುಮಾರ್ಗೆ ತಲುಪಿದೆ. ಅವರು ಸಿಸಿಟಿವಿ ಪರೀಕ್ಷಿಸಿದಾಗ ಕ್ಯಾಪ್ ಧರಿಸಿದ್ದ ವ್ಯಕ್ತಿಯ ಅನುಮಾನಾಸ್ಪದ ಚಲನವಲನ ಎಸಿ ಕೋಚ್ನಲ್ಲಿ ಕಂಡು ಬಂದದ್ದನ್ನು ಎಲ್ಲಾ ರೈಲ್ವೆ ನಿಲ್ದಾಣಗಳ ಪೊಲೀಸರ ವ್ಯಾಟ್ಸ್ಆ್ಯಪ್ ಗ್ರೂಪ್ಗೆ ಹಂಚಿದ್ದಾರೆ.
ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆ ಊರಿಗೆ ಬರುತ್ತಿದ್ದ ಕಾರು ಅಪಘಾತ : ಒಂದೇ ಕುಟುಂಬದ ನಾಲ್ವರು ದುರ್ಮರಣ
ಮಂಗಳಾ ಎಕ್ಸ್ಪ್ರೆಸ್ನಲ್ಲಿ ಕದ್ದ ಕಳ್ಳ ಶನಿವಾರ ನೇತ್ರಾವತಿ ಎಕ್ಸ್ಪ್ರೆಸ್ನಲ್ಲಿ ಊರಿಗೆ ಮರಳುತ್ತಿದ್ದ. ಆತನನ್ನು ಕಾರವಾರದ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಕರ್ತವ್ಯದಲ್ಲಿದ್ದ ಪೊಲೀಸ್ ವಿನಾಯಕ ಆರ್.ಡಿ. ಗುರುತಿಸಿದ್ದಾರೆ. ಕೊಂಕಣ ರೈಲ್ವೆ ಪೊಲೀಸರ ಸಹಾಯದಿಂದ ಕಳ್ಳತನ ಮಾಡಿದ್ದ ನಿಖೀಲ್ ಕುಮಾರ್ನನ್ನು ಬಂಧಿಸಲಾಗಿದೆ. ಬಂಧಿತನಿಂದ 2.20 ಲಕ್ಷದ ಬಂಗಾರದ ಆಭರಣ ವಶಪಡಿಸಿಕೊಂಡು ಸೆಕ್ಷನ್ 379 ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.
ರೈಲ್ವೆ ಎಸಿ ಬೋಗಿಯಲ್ಲಿ ಕದಿಯುತ್ತಿದ್ದ ನಿಖೀಲಕುಮಾರ್ ಕೇರಳದ ಕಣ್ಣೂರು ಮೂಲದವನು ಎಂದು ತಿಳಿದು ಬಂದಿದೆ. ವನಿತಾ ಶೆಟ್ಟಿ ಅವರಿಗೆ ಶೀಘ್ರವಾಗಿ ಅವರ ಒಡವೆ ಮರಳಿಸಲಾಗುವುದು ಎಂದು ಕೊಂಕಣ ರೈಲ್ವೆ ಪಿಆರ್ಒ ಸುಧಾ ಕೃಷ್ಣ ಮೂರ್ತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…