ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!


Team Udayavani, Mar 9, 2021, 5:20 AM IST

ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!

ಕಾರ್ಕಳ: ನಗರದ ಜನತೆಗೆ ಇಲ್ಲಿನ ಕೆರೆಯ ನೀರು ಜೀವ ಜಲ. ಇಡೀ ನಗರಕ್ಕೆ ವರದಾನವಾಗಿರುವ ರಾಮಸಮುದ್ರ ಕೆರೆಯ ಒಡಲಿಗೆ ಕಸದ ವಿಷವಸ್ತುಗಳನ್ನುಎಳೆದು ಮಲಿನಗೊಳಿಸುವ ಕೃತ್ಯ ಹೆಚ್ಚುತ್ತಿದ್ದು. ಇದಕ್ಕೆ ತಡೆ ಹಾಕುವ ಅಗತ್ಯವಿದೆ.

ಸಮೃದ್ಧ ನೀರು
ನಗರ ಪ್ರದೇಶದ ಬಹು ಬೇಡಿಕೆಯ ನೀರಿನ ಬೇಡಿಕೆಯನ್ನು ಪುರಸಭೆ ಆಡಳಿತದ ಮೂಲಕ ಈಡೇರಿಸುತ್ತಿರುವುದೆ ಇದೆ ಐತಿಹಾಸಿಕ ಕೆರೆ. ಇನ್ನೊಂದು ಮೂಲ ಮುಂಡ್ಲಿ ಜಲಾಶಯ. ಬೇಸಗೆಯಲ್ಲಿ ನಗರಕ್ಕೆ ಈ ಕೆರೆಯ ನೀರೇ ಮೂಲವಾಗಿದ್ದು, ಈ ಬಾರಿ ಕೆರೆಯಲ್ಲಿ ನೀರು ಕೂಡ ಸಮೃದ್ಧವಾಗಿದೆ. ಕೆರೆಗೆ ತ್ಯಾಜ್ಯ ಎಸೆಯುವ ಕೃತ್ಯ ಹೆಚ್ಚುತ್ತಿರುವುದರಿಂದ ನೀರು ಮಲಿನವಾಗುತ್ತಿದೆ. ಕೆರೆಯ ಸುತ್ತ ತಡೆಬೇಲಿ, ಸಿಸಿ ಕೆಮರ ಅಳವಡಿಕೆ ಅಗತ್ಯವಿದೆ.

ಕಾನೂನು ಬಾಹಿರ ಚಟುವಟಿಕೆಗಳು
ಕೆರೆಯ ಸುತ್ತಮುತ್ತ ಪಾದೆಕಲ್ಲು ಸಹಿತ ಜನ ಸಂಚಾರವಿಲ್ಲದ ಸ್ಥಳಗಳಿದ್ದು, ರಾತ್ರಿ ಹೊತ್ತು ಹಲವು ಕಾನೂನು ಬಾಹಿರ ಚಟುವಟಿಕೆಗಳು ಇಲ್ಲಿ ನಡೆಯುತ್ತಿದೆ. ಪಾದೆಕಲ್ಲು ಮೇಲೆ ಕುಳಿತು ಸಿಗರೇಟು, ಮದ್ಯ ಸೇವನೆ, ಪಾರ್ಟಿ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿವೆ. ಮದ್ಯದ ಬಾಟಲಿಗಳನ್ನು, ಪ್ಲಾಸ್ಟಿಕ್‌ ಬಾಟಲಿ ಇನ್ನಿತರ ಅನುಪಯುಕ್ತ ತ್ಯಾಜ್ಯಗಳನ್ನು ಕೆರೆಗೆ ಎಸೆಯುವುದು ನಡೆಸುತ್ತಿರುತ್ತಾರೆ. ನಿತ್ಯ ನಡೆಯುವುದರ ಜತೆಗೆ ವೀಕೆಂಡ್‌ ದಿನಗಳಲ್ಲಿ ಹೆಚ್ಚಿರುತ್ತವೆ.

ವಿದ್ಯಾರ್ಥಿಗಳ ಗುಂಪು ಇಲ್ಲಿ ಹೆಚ್ಚು ಕಂಡು ಬರುತ್ತಿರುತ್ತದೆ. ಜತೆಗೆ ಕೆಲವು ಯುವಕರು ಮೋಜು ಮಸ್ತಿಗಾಗಿ ಕೆರೆಯತ್ತ ಬರುತ್ತಿದ್ದು, ಒಂದಷ್ಟು ಹೊತ್ತು ಇಲ್ಲಿ ವಿವಿಧ ಚಟುವಟಿಕೆಗಳಲ್ಲಿ ಕಾಲ ಕಳೆದು ಕೊನೆಯಲ್ಲಿ ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ. ಅಶುಚಿತ್ವದ ವಾತಾವರಣ ನಿರ್ಮಾಣವಾಗುವುದರ ಜತೆಗೆ ತ್ಯಾಜ್ಯಗಳು ನೇರ ನದಿಯನ್ನು ಸೇರುತ್ತಿದೆ.

ಮಾಲಿನ್ಯಯುಕ್ತ ನೀರು ಕುಡಿಯಬೇಕಾದೀತು
ರಾಮ ಸಮುದ್ರ ಕೆರೆ ಹಿಂದಿನ ಕೆಲವು ವರ್ಷಗಳಲ್ಲಿ ಸಮರ್ಪಕವಾಗಿ ಮಳೆ ಸುರಿಯದ ಕಾರಣ ಬತ್ತಿ ಹೋದ ಘಟನೆಗಳು ನಡೆದಿತ್ತು. ಆದರೆ ಈ ಬಾರಿ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣಿಸುತ್ತಿದೆಯಾದರೂ ಕೆರೆಯನ್ನು ಮಲಿನಗೊಳಿಸುತ್ತಿರುವುದು ಆತಂಕವನ್ನುಂಟು ಮಾಡಿದೆ. ಬೇಸಗೆಯ ಈ ದಿನಗಳಲ್ಲಿ ಇದೇ ಮಾಲಿನ್ಯಯುಕ್ತ ನೀರನ್ನು ಬಳಸುವ ಅನಿವಾರ್ಯದಲ್ಲಿ ನಗರದ ಜನತೆ ಸಿಲುಕಿದೆ.

ಕಿಡಿಗೇಡಿಗಳು ಪ್ಲಾಸ್ಟಿಕ್‌ ವಸ್ತುಗಳು, ನೀರಿನ ಬಾಟಲಿಗಳನ್ನು ನದಿಗೆ ಎಸೆದು ಹೋಗುವುದಷ್ಟೆ ಅಲ್ಲ. ಪರಿಸರದಲ್ಲೂ ಸ್ವತ್ಛತೆಗೆ ಧಕ್ಕೆ ತರುತ್ತಿದ್ದಾರೆ. ವಿವಿಧ ಸಂಘಟನೆಗಳು, ನಾಗರಿಕರು ಹತ್ತಾರು ಬಾರಿ ಕೆರೆಯ ಸುತ್ತಮುತ್ತ ಸ್ವತ್ಛಗೊಳಿಸುವ ಕೆಲಸ ಮಾಡುತ್ತಲೇ ಇರುತ್ತಾರಾದರೂ ಅದಕ್ಕೆ ಅಂತ್ಯ ಎನ್ನುವುದೆ ಇಲ್ಲ ಎನ್ನುವಂತಾಗಿದೆ.

ತ್ಯಾಜ್ಯವನ್ನು ಕೆರೆಗೆ ಎಸೆಯುವುದನ್ನು ಪತ್ತೆ ಹಚ್ಚಲು ಸಿಸಿ ಕೆಮರಗಳೂ ಇಲ್ಲಿಲ್ಲ. ಹೀಗಾಗಿ ಇಂತಹ ಕೃತ್ಯಗಳನ್ನು ತಡೆಗಟ್ಟಲು ಯಾರಿಗೂ ಸಾಧ್ಯವಾಗುತಿಲ್ಲ. ಪ್ರಜ್ಞಾವಂತ ಯುವ ಸಮೂಹವೇ ಈ ರೀತಿ ಕೆರೆಯನ್ನು ಅಶುದ್ಧಗೊಳಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಮಲೀನಗೊಳಿಸದಂತೆ ಮನವಿ
ರಾಮಸಮುದ್ರಕ್ಕೆ ಬೇರೆ ಬೇರೆ ಕಡೆಯಿಂದ ಹೋಗಲು ದಾರಿ ಇದೆ. ಪುರಸಭೆ ಪಂಪ್‌ಹೌಸ್‌ ಇರುವ ಆಸುಪಾಸಿನಲ್ಲಿ ಎಲ್ಲಾದರೂ ಈ ರೀತಿ ಆಗದಂತೆ ಕ್ರಮ ವಹಿಸಬಹುದು. ಒಂದು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇವೆ.
ಏನು ಕ್ರಮ ತೆಗೆದುಕೊಳ್ಳಲು ಸಾಧ್ಯವೋ ಅದನ್ನು ಮಾಡುತ್ತೇವೆ. ಯಾರೂ ಕೂಡ ನದಿಯನ್ನು ಮಲೀನಗೊಳಿಸಬಾರದು ಎಂದು ಮನವಿ ಮಾಡುತ್ತೇನೆ.
-ಸುಮಾಕೇಶವ್‌, ಅಧ್ಯಕ್ಷೆ ಪುರಸಭೆ ಕಾರ್ಕಳ

ಹೂಳೆತ್ತಿದರೆ ವರ್ಷ ಪೂರ್ತಿ ನೀರು
ಅತೀ ವಿಸ್ತಾರವಾಗಿರುವ ಕೆರೆಯಲ್ಲಿ ಹೂಳು ತುಂಬಿದ್ದರೂ ಸದ್ಯದ ಮಟ್ಟಿಗೆ ನೀರಿಗೆ ಕೊರತೆಯಿಲ್ಲ. ಒಂದೊಮ್ಮೆ ಈ ಕೆರೆಯ ಹೂಳೆತ್ತಿದಲ್ಲಿ ಎಂದಿಗೂ ನೀರಿನ ಕೊರತೆ ಆಗದು. ಈ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ನಗರಕ್ಕೆ ಶಾಶ್ವತವಾಗಿ ನೀರಿನ ಸಮಸ್ಯೆ ನಿವಾರಣೆಯಾಗುವುದು. ಪರ್ಯಾಯ ವ್ಯವಸ್ಥೆಗಳಾಗುತ್ತಿದ್ದರೂ ಈ ನದಿ ಮೂಲವನ್ನು ಬಳಸುವುದು ಅಗತ್ಯವಾಗಿದೆ. ಬಾವಿ, ಬೋರ್‌ವೆಲ್‌ ಕೊರೆಯುವ ಆವಶ್ಯಕತೆಯೂ ಜಿಲ್ಲಾಡಳಿತಕ್ಕೆ, ಸ್ಥಳಿಯಾಡಳಿತಕ್ಕೆ ಬರುವುದಿಲ್ಲ.

ಅಪವಿತ್ರ; ಭಕ್ತರಲ್ಲಿ ಆತಂಕ
ಪ್ರತಿ ವರ್ಷ ವಾರ್ಷಿಕ ಧಾರ್ಮಿಕ ವಿಧಿವಿಧಾನಗಳು ಇದೇ ರಾಮಸಮುದ್ರ ಕೆರೆಯಲ್ಲಿ ನಡೆಯುತ್ತಿವೆ. ಪವಿತ್ರವಾದ ನದಿಯನ್ನು ಅಪವಿತ್ರಗೊಳಿಸಿದಲ್ಲಿ ಧಾರ್ಮಿಕ ವಿಧಿವಿಧಾನಕ್ಕೂ ಅಡಚಣೆಯಾಗಿ ಹಿನ್ನಡೆಯಾಗುತ್ತದೆ ಎನ್ನುವ ಆತಂಕ ಭಕ್ತರಲ್ಲಿದೆ.

ಆರೋಗ್ಯದ ಮೇಲೆ ಪರಿಣಾಮ
ತ್ಯಾಜ್ಯಗಳಿಂದ ಕೆರೆ ಮಲಿನಗೊಳ್ಳುವು ದ ರೊಂದಿಗೆ ನೀರನ್ನು ಬಳಸಲಾಗದಂತಾ ಗುತ್ತದೆ. ರೋಗರುಜಿನಗಳು ಹಬ್ಬಲು ಅದು ಕಾರಣವಾಗುತ್ತದೆ. ಜತೆಗೆ ಪ್ಲಾಸ್ಟಿಕ್‌ ತ್ಯಾಜ್ಯ ಗಳನ್ನು ಸುಡುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಮಾಲಿನ್ಯವಾಗುತ್ತದೆ. ಇದು ಒಂದು ಎರಡು ದಿನಗಳ‌ ಸಮಸ್ಯೆಯಲ್ಲ. ಪ್ರತಿದಿನವೂ ಇಂತಹದ್ದೇ ತೊಂದರೆಗಳು ಇಲ್ಲಿ ಇರುವುದಾಗಿ ನಾಗರಿಕರೊಬ್ಬರು ಹೇಳುತ್ತಾರೆ.

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.