ವದಂತಿಗಳಿಗೆ ಸಿಂಧಿಯಾ ತೆರೆ
Team Udayavani, Jun 7, 2020, 6:14 AM IST
ಭೋಪಾಲ್: ಪರಿಷ್ಕೃತಗೊಂಡಿರುವ ತಮ್ಮ ಟ್ವಿಟರ್ ಖಾತೆಯಿಂದ ಎದ್ದಿದ್ದ ವದಂತಿಗಳಿಗೆ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ತೆರೆ ಎಳೆದಿದ್ದಾರೆ.
ಟ್ವಿಟರ್ನಲ್ಲಿ ಅವರು ಹಾಕಿದ್ದ ಹೊಸ ಪ್ರೊಫೈಲ್ ಮಾಹಿತಿಯಲ್ಲಿ ಬಿಜೆಪಿ ನಾಯಕ ಎಂದೆನ್ನುವ ಬದಲು “ಸಾರ್ವಜನಿಕ ಸೇವಕ, ಕ್ರಿಕೆಟ್ ಉತ್ಸಾಹಿ’ ಎಂದು ಬಣ್ಣಿಸಲಾಗಿದೆ. ಇದರಿಂದ ಸಿಂದಿಯಾ ಶೀಘ್ರವೇ ಕಾಂಗ್ರೆಸ್ಗೆ ಮರಳಲಿದ್ದಾರೆ’ ಎಂಬ ಮಾತುಗಳು ಕೇಳಿಬಂದಿದ್ದವು.
ಈ ಬಗ್ಗೆ ಸ್ಪಷ್ಟಪಡಿಸಿರುವ ಸಿಂಧಿಯಾ, “ಬಿಜೆಪಿಯಿಂದ ಯಾವುದೇ ತೊಂದರೆ ಆಗಿಲ್ಲ. ಟ್ವಿಟರ್ ಪ್ರೊಫೈಲ್ ಮಾಹಿತಿ ಪರಿಷ್ಕರಣೆ ಕುರಿತಂತೆ ಹರಡಿರುವ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ” ಎಂದಿದ್ದಾರೆ.