ಸ್ಫೋಟ ಆರೋಪಿಗೆ ರಾಜಾತಿಥ್ಯ : ವರದಿಗೆ ಗೃಹ ಇಲಾಖೆ ಸೂಚನೆ
Team Udayavani, Jan 28, 2022, 11:35 AM IST
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬೆಂಗಳೂರು ಸ್ಫೋಟದ ಆರೋಪಿ ನಾಸೀರ್ ಗೆ ರಾಜಾತಿಥ್ಯ ನೀಡಿದ ಪ್ರಕರಣ ಸಂಬಂಧ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ.ಗೃಹ ಸಚಿವ ಅರಗಜ್ಞಾನೇಂದ್ರ ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮದ ಜತೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ರಾಜ ಆತಿಥ್ಯ ವಿಚಾರದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಳೆಯ ಫೋಟೋ ವಿಡಿಯೋ ಹರಿದಾಡುತ್ತಿದೆ. ಅದ್ರೂ ಸುದ್ದಿ ಬಂದಿರುವುದರಿಂದ ಸ್ಪಷ್ಟ ವರದಿ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಬೆಂಗಳೂರು ಸ್ಫೋಟದ ರೂವಾರಿ ನಾಸಿರ್ ಗೆ ರಾಜಾತಿಥ್ಯ ವಿಚಾರದ ಬಗ್ಗೆ ಅಧಿಕಾರಿಗಳಿಗೆ ಕರೆದು ಹೇಳಿದ್ದೇನೆ. ನಾಸಿರ್ ಗೆ ರಾಜಾತಿಥ್ಯ ನೀಡಿದ ವಿಚಾರ ಪೊಲೀಸರು ನಿರಾಕರಿಸಿದ್ದಾರೆ. ಇತ್ತೀಚೆಗೆ ಆಥರ ಏನೂ ನಡೆದಿಲ್ಲ ಅಂದಿದ್ದಾರೆ ಎಂದು ವಿವರಿಸಿದರು.
ಹಳೆಯ ಫೋಟೋಗಳು ಹರಿದಾಡ್ತಿವೆ ಅಂತ ಹೇಳಿದ್ದಾರೆ. ಆದರೂ ಸಮಗ್ರ ವಿಚಾರಣೆ ಮಾಡಿ ವರದಿ ಕೊಡಲು ಹೇಳಿದ್ದೇನೆ ಎಂದರು.