ಸಾರಿಗೆ ಸಿಬಂದಿಗೆ ವೇತನರಹಿತ ಕಡ್ಡಾಯ ರಜೆ?

ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ ಈ ಕ್ರಮ ಜಾರಿಗೆ ಚಿಂತನೆ

Team Udayavani, Jun 1, 2020, 6:30 AM IST

ಸಾರಿಗೆ ಸಿಬಂದಿಗೆ ವೇತನರಹಿತ ಕಡ್ಡಾಯ ರಜೆ?

ಬೆಂಗಳೂರು: ಪ್ರತಿ ತಿಂಗಳ ವೇತನ ಪಾವತಿಗೂ ಪರ ದಾಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರ್ಥಿಕ ಹೊರೆ ತಗ್ಗಿಸಲು ಶೇ.50 ಸಿಬಂದಿಯನ್ನು ಮುಂದಿನ 4 ತಿಂಗಳ ಕಾಲ ವೇತನ ರಹಿತ ಕಡ್ಡಾಯ ರಜೆಯ ಮೇಲೆ ಕಳುಹಿಸಲು ಚಿಂತನೆ ನಡೆಸಿವೆ.

ಕೋವಿಡ್ -19 ದಿಂದಾಗಿ ನಷ್ಟದ ಬಾಬ್ತು ಹೆಚ್ಚಿದೆ. ಈಗ ವೇತನ ಪಾವತಿ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶೇ. 50 ಸಿಬಂದಿಯನ್ನು ವೇತನ ರಹಿತ ಕಡ್ಡಾಯ ರಜೆ ಮೇಲೆ ಕಳುಹಿಸುವ ಚಿಂತನೆ ನಡೆದಿದೆ.

ನಾಲ್ಕೂ ನಿಗಮಗಳಲ್ಲಿ ಒಟ್ಟಾರೆ ಸುಮಾರು 1.20 ಲಕ್ಷ ನೌಕರರಿದ್ದು, ಒಂದು ವೇಳೆ ಇದು ಜಾರಿಗೆ ಬಂದರೆ, ಅರ್ಧಕ್ಕರ್ಧ ಸಿಬಂದಿಗೆ ಆಘಾತ ತರಲಿದೆ. ಆದರೆ ಇದು ಯಾವ ರೂಪದಲ್ಲಿ ಅನುಷ್ಠಾನಗೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೊಟೇಶನ್‌ ಮಾದರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಬಹುದು. ಇದರಿಂದ ಎಲ್ಲರಿಗೂ “ಡ್ಯೂಟಿ ‘ ಸಿಕ್ಕಂತಾಗಲಿದೆ ಮತ್ತು ವೇತನ ದೊರೆಯಲಿದೆ. ಮತ್ತೂಂದೆಡೆ ನಿಗಮಗಳಿಗೂ ಹೊರೆ ಆಗುವುದಿಲ್ಲ ಎಂಬ ಲೆಕ್ಕಾಚಾರ ಇದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇನ್ನೂ ಮೂರ್ತರೂಪದಲ್ಲಿಲ್ಲ : ಎಂಡಿ
ನಿಗಮದ ವೆಚ್ಚಗಳು ಸದ್ಯ ನಿಗಮಕ್ಕೆ ಹೊರೆ ಆಗುತ್ತಿವೆ. ಇದನ್ನು ತಗ್ಗಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬಂದಿಗೆ ವೇತನ ರಹಿತ ಕಡ್ಡಾಯ ರಜೆ ನೀಡಲು ಸಾಧ್ಯವೇ ಎಂಬ ಚಿಂತನೆಯೂ ನಡೆದಿದೆ. ಕಂತುಗಳಲ್ಲಿ ವೇತನ ಪಾವತಿ ಮಾಡಿ ರೊಟೇಶನ್‌ನಲ್ಲಿ ರಜೆ ನೀಡುವ ಯೋಚನೆಯೂ ಇದೆ. ಆದರೆ ಇನ್ನೂ ಇದು ಮೂರ್ತರೂಪ ಪಡೆದಿಲ್ಲ ಎಂದು ಕೆಎಸ್ಸಾರ್ಟಿಸಿ ಎಂಡಿ ಶಿವಯೋಗಿ ಕಳಸದ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ನಿಗಮಗಳ ಆರ್ಥಿಕ ಸಶಕ್ತೀಕರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಸುಧಾರಣ ಕ್ರಮಗಳ ಬಗ್ಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌ ಈಚೆಗೆ ನೀಡಿದ ಸಲಹೆಗಳಲ್ಲಿಯೂ ನಾಲ್ಕು ತಿಂಗಳ ವೇತನ ರಹಿತ ಕಡ್ಡಾಯ ರಜೆ ಪ್ರಸ್ತಾವ ಇದೆ. ಶೇ. 50ರಷ್ಟು ವೇತನ ತಡೆಹಿಡಿಯುವ ಸಂಬಂಧ ಎಂಪ್ಲಾಯೀಸ್‌ ಯೂನಿಯನ್‌ಗಳೊಂದಿಗೆ ಮಾತುಕತೆ ನಡೆಸುವ ಅಗತ್ಯವಿದೆ ಎಂದೂ ತಿಳಿಸಿದ್ದಾರೆ.

ನಿಗಮಗಳ ಮುಂದಿರುವ ಆಯ್ಕೆಗಳು
– ಮುಂದಿನ ಎರಡು-ಮೂರು ತಿಂಗಳ ಮಟ್ಟಿಗೆ ಶೇ. 50ರಷ್ಟು ಸಿಬಂದಿಗೆ ವೇತನರಹಿತ ರಜೆ.
– ಎಲ್ಲ ಸಿಬಂದಿಗೆ ಶೇ. 50ರಷ್ಟು ವೇತನ ಪಾವತಿಸಿ, ಉಳಿದ ವೇತನ ತಾತ್ಕಾಲಿಕ ತಡೆ. ಬಳಿಕ ಕಂತಿನಲ್ಲಿ ಪಾವತಿಸುವುದು.
– ಸಿಬಂದಿ ನೇಮಕಾತಿ ತಡೆಹಿಡಿದು ಉಳಿತಾಯ.
– ಭದ್ರತೆ ಮತ್ತಿತರ ವಿಭಾಗಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿರುವ ಅನಗತ್ಯ ಸಿಬಂದಿ ಕಡಿತ (ಶೇ. 10ಕ್ಕಿಂತಲೂ ಅಧಿಕ ಕಡಿತದ ಚಿಂತನೆ).
– ಹವಾನಿಯಂತ್ರಿತ ಬಸ್‌ಗಳ ಪ್ರಯಾಣ ದರವನ್ನು ಶೇ. 30-50ರಷ್ಟು ಹೆಚ್ಚಳ ಮಾಡುವುದು.
– ಹೆಚ್ಚುವರಿ ಭತ್ತೆ ನೀಡದಿರುವುದು.
– ನಿಗಮಗಳ ವ್ಯಾಪ್ತಿಯಲ್ಲಿರುವ ಜಾಗಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಅಭಿವೃದ್ಧಿಪಡಿಸುವುದು.

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.