ಧಾರವಾಡ ದಲಿತರ ಮನೆಗಳಲ್ಲಿ ದೀಪ ಬೆಳಗಿದ ವಿದ್ಯಾರಣ್ಯ ಸ್ವಾಮೀಜಿ
ದಲಿತರು, ಮೇಲ್ವರ್ಗದವರು ಎಂಬ ಬೇಧ ಇರಬಾರದು
Team Udayavani, Mar 3, 2022, 3:09 PM IST
ಧಾರವಾಡ: ಹಂಪಿಯ ವಿರುಪಾಕ್ಷ ವಿದ್ಯಾರಣ್ಯ ಮಹಾ ಸಂಸ್ಥಾನದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ನಗರದ ದಲಿತ ಕೇರಿಗೆ ಬಂದು ಮನೆ, ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿಯ ಜಾಂಬವಂತ ನಗರದಲ್ಲಿನ ಮನೆಗಳಿಗೆ ಭೇಟಿ ನೀಡಲು ಬಂದ ಸ್ವಾಮೀಜಿಗೆ ಅದ್ಧೂರಿ ಸ್ವಾಗತ ದೊರೆಯಿತು. ಸುಮಂಗಲೆಯರು ಸ್ವಾಮೀಜಿಗೆ ಆರತಿ ಬೆಳಗಿ ಅವರನ್ನು ಸ್ವಾಗತಿಸಿದರು. ಇದಲ್ಲದೇ ಭಜನೆ ಮೇಳದೊಂದಿಗೆ ಸ್ವಾಮೀಜಿವರನ್ನು ಮನೆ, ಮನೆಗೆ ಕರೆದುಕೊಂಡು ಬರಲಾಯಿತು.
ಸಮಾಜದ ಹಿಂದುಳಿದ ಜನಾಂಗ ಕೂಡ ಮುಂದೆ ಬರಬೇಕು. ಹಿಂದುಳಿದವರು ಎಂದು ಅವರನ್ನು ಹಿಂದೆಯೇ ಬಿಡಬಾರದು. ಇಲ್ಲಿ ದಲಿತರು, ಮೇಲ್ವರ್ಗದವರು ಎಂಬ ಬೇಧ ಇರಬಾರದು ಎಂಬ ಉದ್ದೇಶದಿಂದ ಹಕ್ಕ ಬುಕ್ಕರಿಗೆ ಧೀಕ್ಷೆ ಕೊಟ್ಟು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಭೂತರಾದ ವಿದ್ಯಾರಣ್ಯ ಪೀಠದ ಗುರುಗಳೇ ಧಾರವಾಡಕ್ಕೆ ಬಂದು ಇಂತದೊಂದು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಜಾಂಬವಂತನಗರದಲ್ಲಿ ಹೆಚ್ಚಾಗಿ ದಲಿತರೇ ವಾಸಿಸುತ್ತಿದ್ದು, ಸನಾತನ ಧರ್ಮದ ವಿವಿಧ ಜನಾಂಗದವರು ಒಂದಾಗಬೇಕು. ಅಸ್ಪೃಶ್ಯತೆ ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರ ಮನೆಯಲ್ಲಿರುವ ದೇವರ ಕೋಣೆಗಳಿಗೆ ಹೋಗಿ ಪೂಜೆ ಮಾಡುವ ಮೂಲಕ ದೀಪ ಬೆಳಗಿಸುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ