ಟಿಕೆಟ್ ಸಿಗದಿದ್ದರೆ ಪಯಾ೯ಯ ಮಾಗ೯: ಜೆಡಿಎಸ್ ಹಿರಿಯ ಶಾಸಕ
Team Udayavani, Oct 2, 2021, 2:19 PM IST
ಗುಬ್ಬಿ: ಜೆಡಿಎಸ್ ನಿಂದ ಟಿಕೆಟ್ ಸಿಗದಿದ್ದರೆ ಪಯಾ೯ಯ ಮಾಗ೯ ಮಾಡಿಕೊಳ್ಳ ಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್(ವಾಸು) ಶನಿವಾರ ಹೇಳಿಕೆ ನೀಡಿದ್ದಾರೆ .
ಚೇಳೂರು ಹೋಬಳಿಯ ದೊಡ್ಡಎಡಗೇಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಶ್ರೀನಿವಾಸ್, ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಟಿಕೆಟ್ ಕೊಡುವುದಿಲ್ಲ ಎಂದು ಕ್ಷೇತ್ರದಲ್ಲಿ ಮತ್ತೊಬ್ಬರನ್ನು ಪರಿಚಯಿಸುತ್ತಿದ್ದಾರೆ.ನಾನು ಈಗ ಜೆಡಿಎಸ್ ನಲ್ಲಿ ಇದ್ದೇನೆ. ಮುಂದೆ ನನಗೆ ಗೋತ್ತಿಲ್ಲ ಎಂದು ಪಕ್ಷ ತೊರೆಯುವ ಸುಳಿವು ನೀಡಿದರು.
ಮುಂದೆ ಆಗುವುದಕ್ಕೆ, ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನರ ಸಹಕಾರ ಮುಖ್ಯ.ಪ್ರಜಾಪ್ರಭುತ್ವದಲ್ಲಿ ಜನ ಬೆಂಬಲ ಮುಖ್ಯ,ಜನರ ಮೇಲೆ ನಾನು ನಂಬಿಕೆ ಇಟ್ಟಿದ್ದು ಅವರು ನನಗೆ ಸಹಕಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಟಿಕೆಟ್ ಕೊಡದಿದ್ದರೆ ಅಂತಿಮವಾಗಿ ಜನರ ತೀರ್ಮಾನದಂತೆ ಮುಂದುವರಿಯುತ್ತೇನೆ ಎಂದರು.
ಗುಬ್ಬಿ ಕ್ಷೇತ್ರದಲ್ಲಿ ಶ್ರೀನಿವಾಸ್ ಅವರು 2004 ರಿಂದ ಸತತ ನಾಲ್ಕು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು .
ಈಗಾಗಲೇ ಜೆಡಿಎಸ್ ನಿಂದ ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ,ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ , ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪಕ್ಷ ತೊರೆಯುವುದಾಗಿ ಹೇಳಿದ್ದಾರೆ.