ವನಿತಾ ಏಕದಿನ ಪಂದ್ಯ ಟೈ: ಪ್ರಶಸ್ತಿ ಹಂಚಿಕೊಂಡ ಭಾರತ-ಬಾಂಗ್ಲಾ

ಫ‌ರ್ಗಾನಾ ಐತಿಹಾಸಿಕ ಶತಕ- ಗೆಲ್ಲುವ ಅವಕಾಶ ವ್ಯರ್ಥಗೊಳಿಸಿದ ಭಾರತ

Team Udayavani, Jul 23, 2023, 6:38 AM IST

INDIA BANGLA WOMEN

ಮಿರ್ಪುರ್‌: ಗೆಲ್ಲುವ ಅವಕಾಶವನ್ನು ವ್ಯರ್ಥಗೊಳಿಸಿದ ಭಾರತದ ವನಿತೆಯರು ಆತಿಥೇಯ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ಟೈ ಮಾಡಿಕೊಂಡು ಪ್ರಶಸ್ತಿಯನ್ನು ಹಂಚಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಓಪನರ್‌ ಫ‌ರ್ಗಾನಾ ಹಕ್‌ ಅವರ ಶತಕ ಸಾಹಸದಿಂದ 4 ವಿಕೆಟಿಗೆ 225 ರನ್‌ ಗಳಿಸಿತು. ಜವಾಬಿತ್ತ ಭಾರತ 49.3 ಓವರ್‌ಗಳಲ್ಲಿ 225ಕ್ಕೆ ಆಲೌಟ್‌ ಆಯಿತು. ಸರಣಿ 1-1 ಸಮಬಲದೊಂದಿಗೆ ಅಂತ್ಯ ಕಂಡಿತು. ಮಳೆಯಿಂದಾಗಿ ಪಂದ್ಯದ ಮುಕ್ತಾಯ ವಿಳಂಬಗೊಂಡಿದ್ದರಿಂದ ಸೂಪರ್‌ ಓವರ್‌ ಹಾಕಲಿಲ್ಲ. ಮೊದಲ ಪಂದ್ಯವನ್ನು ಬಾಂಗ್ಲಾ 40 ರನ್ನುಗಳಿಂದ, 2ನೇ ಪಂದ್ಯವನ್ನು ಭಾರತ 108 ರನ್‌ ಅಂತರದಿಂದ ಜಯಿಸಿತ್ತು.

ಬಲಗೈ ಆಟಗಾರ್ತಿ ಫ‌ರ್ಗಾನಾ ಹಕ್‌ 160 ಎಸೆತ ಎದುರಿಸಿ 107 ರನ್‌ ಬಾರಿಸಿದರು (7 ಬೌಂಡರಿ). ಇದು ಫ‌ರ್ಗಾನಾ ಅವರ ಮೊದಲ ಶತಕವಷ್ಟೇ ಅಲ್ಲ, ಬಾಂಗ್ಲಾ ವನಿತಾ ಏಕದಿನ ಇತಿಹಾಸದಲ್ಲಿ ದಾಖಲಾದ ಪ್ರಪ್ರಥಮ ಶತಕವೂ ಆಗಿದೆ. ಮತ್ತೋರ್ವ ಓಪನರ್‌ ಶಮಿಮಾ ಸುಲ್ತಾನಾ 52 ರನ್‌ ಮಾಡಿದರು.

ಭಾರತದ ಚೇಸಿಂಗ್‌ ಆಘಾತಕಾರಿಯಾಗಿತ್ತು. ಶಫಾಲಿ ವರ್ಮ (4) ಮತ್ತು ಯಾಸ್ತಿಕಾ ಭಾಟಿಯ (5) ಬೇಗನೇ ಔಟಾದಾಗ ಕುಸಿತದ ಮುನ್ಸೂಚನೆ ಲಭಿಸಿತು. ಆದರೆ ಸ್ಮತಿ ಮಂಧನಾ-ಹರ್ಲೀನ್‌ ದೇವಲ್‌ 3ನೇ ವಿಕೆಟಿಗೆ 107 ರನ್‌ ಒಟ್ಟುಗೂಡಿಸಿ ತಂಡವನ್ನು ಹಳಿ ಏರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ನಾಯಕಿ ಕೌರ್‌ (14) ಕೂಡ ಬೇಗನೇ ಪೆವಿಲಿಯನ್‌ ಹಾದಿ ಹಿಡಿದರು.

ಮಳೆ ನಿಂತ ಬಳಿಕ…
38 ಓವರ್‌ ಮುಗಿದೊಡನೆ ಮಳೆ ಸುರಿಯಿತು. ಆಗ 4 ವಿಕೆಟಿಗೆ 173 ರನ್‌ ಮಾಡಿದ ಭಾರತ ಸುಸ್ಥಿತಿಯಲ್ಲಿತ್ತು. ಪಂದ್ಯ ಇಲ್ಲಿಗೇ ಕೊನೆಗೊಂಡರೂ ಗೆಲುವು ಭಾರತದ್ದಾಗುತ್ತಿತ್ತು. ಪಾರ್‌ ಸ್ಕೋರ್‌’ 151 ರನ್‌ ಆಗಿತ್ತು.

ಆದರೆ ಮಳೆ ನಿಂತ ಬಳಿಕ ಭಾರತದ ಇನ್ನಿಂಗ್ಸ್‌ ನಾಟಕೀಯ ತಿರುವು ಪಡೆಯಿತು. ಪಟಪಟನೆ ವಿಕೆಟ್‌ ಉರುಳುತ್ತ ಹೋಯಿತು. ಹಲೀìನ್‌ ದೇವಲ್‌ ಮತ್ತು ದೀಪ್ತಿ ಶರ್ಮ ಒಂದೇ ಓವರ್‌ನಲ್ಲಿ ರನೌಟ್‌ ಆದದ್ದು ಭಾರತಕ್ಕೆ ಭಾರೀ ಹೊಡೆತವಿಕ್ಕಿತು. ಸ್ನೇಹ್‌ ರಾಣಾ, ದೇವಿಕಾ ವೈದ್ಯ ಖಾತೆಯನ್ನೇ ತೆರೆಯಲಿಲ್ಲ. ಪಂದ್ಯ ಅಂತಿಮ ಓವರ್‌ನತ್ತ ಹೊರಳುವಾಗ ಒಂದು ವಿಕೆಟ್‌ನಿಂದ 3 ರನ್‌ ಮಾಡಬೇಕಾದ ಗುರಿ ಭಾರತದ ಮುಂದಿತ್ತು. ಮರೂಫಾ ಅಖ್ತರ್‌ ಅವರ 3ನೇ ಎಸೆತದಲ್ಲಿ ಮೇಘನಾ ಸಿಂಗ್‌ ಕಾಟ್‌ ಬಿಹೈಂಡ್‌ ಆದಾಗ ಸ್ಕೋರ್‌ ಸಮಬಲದಲ್ಲಿ ನೆಲೆಸಿತ್ತು. ಆಗ 33 ರನ್‌ ಮಾಡಿದ್ದ ಜೆಮಿಮಾ ಇನ್ನೊಂದು ತುದಿಯಲ್ಲಿದ್ದರು. 9ನೇ ವಿಕೆಟ್‌ 217ಕ್ಕೆ ಉರುಳಿದಾಗ ಬಾಂಗ್ಲಾಕ್ಕೂ ಗೆಲ್ಲುವ ಅವಕಾಶವಿತ್ತು.
ಭಾರತದ ಸರದಿಯಲ್ಲಿ ಹರ್ಲೀನ್‌ ಸರ್ವಾಧಿಕ 77 ರನ್‌ (108 ಎಸೆತ, 9 ಬೌಂಡರಿ), ಮಂಧನಾ 59 ರನ್‌ (85 ಎಸೆತ, 5 ಬೌಂಡರಿ) ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-4 ವಿಕೆಟಿಗೆ 225 ರನ್‌ (ಫ‌ರ್ಗಾನಾ ಹಕ್‌ 107, ಶಮಿಮಾ ಸುಲ್ತಾನಾ 52, ಸ್ನೇಹ್‌ ರಾಣಾ 45ಕ್ಕೆ 2). ಭಾರತ-49.3 ಓವರ್‌ಗಳಲ್ಲಿ 225 (ಹಲೀìನ್‌ 77, ಮಂಧನಾ 59, ಜೆಮಿಮಾ ಔಟಾಗದೆ 33, ನಹಿದಾ ಅಖ್ತರ್‌ 37ಕ್ಕೆ 3, ಮರೂಫಾ ಅಖ್ತರ್‌ 55ಕ್ಕೆ 2). ಪಂದ್ಯಶ್ರೇಷ್ಠ: ಹಲೀìನ್‌ ದೇವಲ್‌. ಸರಣಿಶ್ರೇಷ್ಠ: ಫ‌ರ್ಗಾನಾ ಹಕ್‌.

ಟಾಪ್ ನ್ಯೂಸ್

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.