ಇನ್ನು ನಡೆಯಲಿದೆ ಮಹಿಳಾ ವಾರ್ಡ್ ಸಭೆ! ಇನ್ನಷ್ಟು ಸ್ತ್ರೀಸ್ನೇಹಿಯಾಗುವತ್ತ ಗ್ರಾ.ಪಂ.
Team Udayavani, Apr 17, 2021, 7:05 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಗ್ರಾಮ ಸಭೆಯ ಪೂರ್ವದಲ್ಲಿ ನಡೆಯುವ ವಾರ್ಡ್ಸಭೆ ಮಾದರಿಯಲ್ಲೇ ಇನ್ನು ಮಹಿಳಾ ವಾರ್ಡ್ ಸಭೆಯೂ ನಡೆಯಲಿದೆ.
ಸ್ತ್ರೀ ಸಶಕ್ತೀಕರಣ ಮತ್ತು ಸ್ಥಳೀಯ ಆಡಳಿತದಲ್ಲಿ ಅವರು ಸಕ್ರಿಯರಾಗುವಂತೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಿಳಾ ಗ್ರಾಮಸಭೆಗೆ ಹುರುಪು ತುಂಬುವ ಉದ್ದೇಶವೂ ಇದೆ.
ಅಂಗನವಾಡಿ ಕಾರ್ಯಕರ್ತೆಯರು ಈ ಸಭೆ ನಿರ್ವಹಿಸಲಿದ್ದಾರೆ. ಆಯಾ ವಾರ್ಡ್ಗೆ ಸಂಬಂಧ ಪಡುವ ಗ್ರಾ.ಪಂ.ಚುನಾಯಿತ ಸದಸ್ಯರ ಉಸ್ತುವಾರಿ ಇರಲಿದೆ.
ಸಭೆಯನ್ನು ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳ, ದುಡಿಯುವ ಮಹಿಳೆಯರಿಗೆ ಅನುಕೂಲಕರ ದಿನ, ಸಮಯದಲ್ಲಿ ನಡೆಸಬಹುದು. ಅನುಸೂಚಿತ ಜಾತಿ/ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾಕರು, ಅಂಗವಿಕಲ ಸ್ತ್ರೀಯರಿಗೆ ಭಾಗವಹಿಸಲು ಮತ್ತು ಚರ್ಚಿಸಲು ಸಮಾನ ಅವಕಾಶ ನೀಡಲಾಗುತ್ತದೆ.
ಸಭೆಯಲ್ಲಿ ಏನಿರುತ್ತದೆ?
– ಸ್ತ್ರೀಯರ ಹಕ್ಕುಗಳು, ಸರಕಾರದ ವಿವಿಧ ಯೋಜನೆ, ಸೌಲಭ್ಯಗಳ ಮಾಹಿತಿ.
– ಅವರ ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ಇದೆ.
– ಮಕ್ಕಳ ಶಿಕ್ಷಣ, ಶಾಲೆ, ಆರೋಗ್ಯ ಸೇವೆ, ರಕ್ಷಣೆ, ಆಹಾರ – ಪೌಷ್ಟಿಕತೆ, ನೀರು, ನೈರ್ಮಲ್ಯ, ಶುಚಿತ್ವ, ರಸ್ತೆ, ಅಂಗನವಾಡಿ, ವಸತಿ ಸೌಲಭ್ಯ, ಮಾನವ ಸಂಪದ ಇತ್ಯಾದಿ ಬೇಡಿಕೆ, ಸಮಸ್ಯೆ ಗಳ ಚರ್ಚೆಗೆ ಅವಕಾಶ.
– ಲಾಕ್ಡೌನ್ ಸಮಯದಲ್ಲಿ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ಅಪೌಷ್ಟಿಕತೆ, ಬಾಲ್ಯ ವಿವಾಹ ಚರ್ಚೆ.
– ಮಹಿಳಾ ಗ್ರಾಮ ಸಭೆಯಲ್ಲಿ ಆಯಾ ವಾರ್ಡ್ ಪ್ರತಿನಿಧಿಸುವವರು ಯಾರೆಂಬುದು ವಾರ್ಡ್ ಸಭೆಯಲ್ಲಿ ನಿರ್ಧಾರ.
– ವಾರ್ಡ್ ಸಭೆಯ ಅಂಶಗಳು ಮಹಿಳಾ ಗ್ರಾಮಸಭೆಯಲ್ಲಿ ಮಂಡನೆ.
ಸಲಹಾ ಪೆಟ್ಟಿಗೆ
ಅಂಗನವಾಡಿ ಮತ್ತಿತರ ಸುರಕ್ಷಿತ ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತದೆ. ಇಲ್ಲಿ ಬಂದ ಸಲಹೆಗಳನ್ನು ಕ್ರೋಡೀಕರಿಸಿ ಮಹಿಳಾ ಗ್ರಾಮಸಭೆಯಲ್ಲಿ ಮಂಡಿಸಲಾಗುತ್ತದೆ.
ಗ್ರಾ.ಪಂ. ಡೆಸ್ಕ್
ಮಹಿಳಾ ವಾರ್ಡ್ ಸಭೆ-ಗ್ರಾಮ ಸಭೆ ವೇಳೆ ವಿವಿಧ ಯೋಜನೆಗಳ ಮಾಹಿತಿ ಪಡೆಯಲು “ಗ್ರಾ.ಪಂ. ಡೆಸ್ಕ್’ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರ ಜವಾಬ್ದಾರಿ ಆಶಾ ಕಾರ್ಯಕರ್ತೆಯರದು.
ಗ್ರಾ.ಪಂ.ಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮಹಿಳಾ ವಾರ್ಡ್ ಸಭೆ ನಡೆಯಲಿದೆ. ಸಿದ್ಧಗೊಳ್ಳುವಂತೆ ಗ್ರಾ.ಪಂ.ಗಳಿಗೆ ತಿಳಿಸಿದೆ.
– ಡಾ| ಕುಮಾರ್, ಡಾ| ನವೀನ್ ಭಟ್, ದ.ಕ. ಮತ್ತು ಉಡುಪಿ ಜಿ.ಪಂ. ಸಿಇಒಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ