ಅಮಿತ್ ಶಾ ಹೇಳೋದೆಲ್ಲ ಸುಳ್ಳು, ಅತ್ಯಂತ ಕೆಟ್ಟವರ ಕೈಯಲ್ಲಿ ಅಧಿಕಾರ ಸಿಕ್ಕಿದೆ: ಸಿದ್ದರಾಮಯ್ಯ
Team Udayavani, Feb 27, 2020, 4:00 PM IST
ಬೆಂಗಳೂರು: ಗೃಹ ಸಚಿವ ಅಮಿತ್ ಶಾ ಹೇಳುವುದೆಲ್ಲಾ ಸುಳ್ಳು. ಮೋದಿ ಪ್ರಧಾನಿಯಾಗಿ ಸುಳ್ಳು ಹೇಳ್ತಿದ್ದಾರೆ. ಅತ್ಯಂತ ಕೆಟ್ಟವರ ಕೈಯಲ್ಲಿ ಅಧಿಕಾರ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಸಿಎಎ ವಿರುದ್ಧದ ಮಹಿಳಾ ಕಾಂಗ್ರೆಸ್ ಕಾರ್ಯಾಗಾರದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಮನುಷ್ಯತ್ವ ಇಲ್ಲದವರ ಕೈಯಲ್ಲಿ ಅಧಿಕಾರವಿದೆ. ದೆಹಲಿಯಲ್ಲಿ 35 ಮಂದಿ ಸತ್ತಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕೇಸ್ ಹಾಕಿದ್ರಾ ಎಂದು ಕೇಳಿದ ಜಡ್ಜ್ ರನ್ನು ವರ್ಗಾವಣೆ ಮಾಡಿದ್ದಾರೆ. ದೆಹಲಿ ವಿವಿಗೆ ಬಿಜೆಪಿ ಅವರೇ ಒಳ ಹೋಗಿ ನುಗ್ಗಿ ಹೊಡೆದರು. ಅವರ ಮೇಲೆ ಕೇಸ್ ದಾಖಲಾಗಿಲ್ಲ. ಇವರು ಅತ್ಯಂತ ಕ್ರೂರಿಗಳು, ಸಂವಿಧಾನ ವಿರೋಧಿಗಳು ಎಂದು ಆರೋಪಿಸಿದ್ದಾರೆ.
ನನ್ನ ಜನ್ಮ ದಿನಾಂಕ ಇಲ್ಲ. ಶಾಲೆಯ ಮಾಸ್ತರ್ ಬರೆದುಕೊಂಡಿದ್ದೇ ಜನ್ಮ ದಿನಾಂಕ. ಇವರ ಪ್ರಕಾರ ನಾನು ಡೌಟ್ ಫುಲ್ ಪ್ರಜೆ. ನನ್ನನ್ನ ಜೈಲಿಗೆ ಹಾಕ್ತರಾ. ನನ್ನ ವೋಟು ಕಿತ್ತುಕೊಳ್ತಾರಾ ಎಂದು ಪ್ರಶ್ನಿಸಿದರು.
ಇದು ಸಂವಿಧಾನ ಮತ್ತು ಮನುಸ್ಮೃತಿ ನಡುವೆ ನಡೆಯುತ್ತಿರುವ ಯುದ್ಧ. ಪ್ರಜಾಪ್ರಭುತ್ವ ಉಳಿಸುವುದು ನಮ್ಮ ಜವಾಬ್ದಾರಿ. ಸಂವಿಧಾನ ವಿರೋಧಿ ಮತ್ತು ಕಾನೂನು ವಿರುದ್ಧ ಇದ್ದರೆ ಪ್ರಶ್ನೆ ಮಾಡಲು ಅವಕಾಶ ಬಿಡಬೇಕು. ಆದರೆ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದ ಸಿದ್ದರಾಮಯ್ಯ ಮೋದಿ ಮತ್ತು ಅಮಿತ್ ಶಾ ವಿನಾಶಕಾರಿಗಳು. ವಿನಾಶಕಾರಿ ವಿಪರೀತ ಬುದ್ಧಿ ಅನ್ನೋ ಗಾದೆ ಇವರಿಗೆ ಅನ್ವಯಿಸುತ್ತೆ ಎಂದು ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ