ನಾವಾಗಿ ಸುಮಲತಾರನ್ನು ಬಿಜೆಪಿಗೆ ಕರೆಯಲು ಹೋಗುವುದಿಲ್ಲ : ಬಿಎಸ್ವೈ
Team Udayavani, May 24, 2019, 9:46 AM IST
ಬೆಂಗಳೂರು: ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರನ್ನು ನಾವಾಗಿಯೇ ಬಿಜೆಪಿಗೆ ಕರೆಯಲು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸುಮಲತಾ ಅವರು ಅವರಾಗಿಯೇ ಬಂದರೆ ಸ್ವಾಗತಿಸುತ್ತೇವೆ ಎಂದರು.
ನಾನು ಹೇಳಿದ್ದೆಲ್ಲಾ ನಿಜವಾಗಿದೆ. 40 ವರ್ಷದ ರಾಜಕೀಯದ ಅನುಭವದ ಮೇಲೆ ಹೇಳಿದ್ದೆ ಎಂದರು.
ಮೇ 29 ರಂದು ಸಂಸದರೊಂದಿಗೆ ದೆಹಲಿಗೆ ತೆರಳುತ್ತಿದ್ದೇನೆ. ವರಿಷ್ಠರ ಸೂಚನೆಯಂತೆ ತೀರ್ಮಾನ ಕೈಗೊಳ್ಳುತ್ತೇವೆ. ಈಗಿನ ಮೈತ್ರಿ ಸರ್ಕಾರದ ಬಗ್ಗೆ ಏನನ್ನೂ ಹೇಳಲು ಹೋಗುವುದಿಲ್ಲ ಎಂದರು.
ಜನರ ತೀರ್ಮಾನವೇನಿದೆ ಅದರಂತೆ ನಡೆದುಕೊಳ್ಳುವ ತೀರ್ಮಾನನಮ್ಮದು ಎಂದರು.