1 ಕೋಟಿ ಲೀ ನೀರು ಸಂಗ್ರಹಿಸುವ ಟ್ಯಾಂಕ್‌: ನಲ್ಕ ಸರಳಾಯ ಸಹೋದರರ ಸಾಧನೆ


Team Udayavani, Apr 18, 2017, 3:19 PM IST

18-KASRGOD-3.jpg

ಪೆರಡಾಲ: ಏರಿಳಿತವಿರುವ ಗುಡ್ಡಗಳನ್ನು ಹೊಂದಿರುವ ಮಲೆನಾಡಿನ ಹಲವು ಪ್ರದೇಶಗಳಲ್ಲಿ ಎತ್ತರದ ಸ್ಥಳಗಳಲ್ಲಿ ನಮ್ಮ ಪೂರ್ವಜರು ನಿರ್ಮಿಸಿದ  ಮಣ್ಣಿನಿಂದ ರಚಿಸಲ್ಪಟ್ಟ ನೀರಿನ ಅನೇಕ ಟ್ಯಾಂಕ್‌ಗಳಿವೆ. ಸುರಂಗಗಳ ಮೂಲಕ ನೀರಿನ ಒಳ ಹರಿವು. ಹಲವು ಮಂದಿ ಕೃಷಿಕರು ಇದನ್ನು ರಕ್ಷಿಸಿಕೊಂಡು ಬಂದು ತಮ್ಮ ನೀರಿನ ಆವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ನಲ್ಕದ ಸನಿಹದ ಸರಳಾಯ ಸಹೋದರರು ಇಂತಹ ಒಂದು ಟ್ಯಾಂಕಿಯ ಗಾತ್ರವನ್ನು ಹೆಚ್ಚಿಸಿ ಮುಂದಿನ ಮಳೆಗಾಲದಲ್ಲಿ 1 ಕೋಟಿ ಲೀ.ಗೂ ಹೆಚ್ಚು ನೀರು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಸರಳಾಯ ಸಹೋದರರು: ಲಕ್ಷಿಪ್ರಿಯ ಸರಳಾಯ, ಅರುಣ್‌ಕುಮಾರ್‌ ಸರಳಾಯ ಮತ್ತು ಶಾಂತ ಕುಮಾರ್‌ ಸರಳಾಯ ನಲ್ಕದ ಸನಿಹದ ಕೇರಿಮೂಲೆ ಈ ಸಾಧನೆ ಮಾಡ ಹೊರಟ ಸಹೋದರರು. ತಮ್ಮ ಕೃಷಿ ಭೂಮಿಯ ಎತ್ತರದ ಭಾಗದಲ್ಲಿದ್ದ  ಈ ಟ್ಯಾಂಕ್‌ನಲ್ಲಿ ಶೇಖರಣೆಗೊಂಡ ನೀರಿನ ಮೂಲಕ ತಮ್ಮ ಅಡಿಕೆ ತೆಂಗು ಬಾಳೆ ಇತ್ಯಾದಿ ಬೆಳೆಗಳಿಗೆ ನೀರುಣಿಸುತ್ತಿದ್ದರು. ಇತ್ತೀಚೆಗೆ ಸಹೋದರರ ನಡುವೆ ಆಸ್ತಿಯ ವಿಭಾಗವಾಯಿತು. ಅರುಣ್‌ ಕುಮಾರ್‌ ತನ್ನಭಾಗಕ್ಕೆ ಬಂದ ಈ ಟ್ಯಾಂಕಿಯ ಗಾತ್ರವನ್ನು ಹಿಗ್ಗಿಸಿ ಮಳೆಗಾಲದಲ್ಲಿ ಹರಿದು ಹೋಗುತ್ತಿದ್ದ ನೀರನ್ನೂ ಕೂಡ ಹಿಡಿದಿಡುವ ಕುರಿತು ಯೋಚಿಸಿದರು. ಸಹೋದರರೂ ಬೆಂಬಲ ವ್ಯಕ್ತ ಪಡಿಸಿದರು.

1 ಕೋಟಿ ಲೀ. ಗೂ ಅಧಿಕ ನೀರು: ಹಿತಾಚಿ ಮತ್ತು ಟಿಪ್ಪರ್‌ನ ಮೂಲಕ ಕೆಲಸ ಆರಂಭಿಸಿದರು.  ಒಟ್ಟು 60 ಮೀ. ಉದ್ದ 40 ಮೀ. ಅಗಲ ಮತ್ತು 5 ಮೀ. ಆಳದ ಕೆರೆ ಸಿದ್ಧ ಪಡಿಸಿದರು. ಇದರಲ್ಲಿ ಅರ್ಧ ಭಾಗದ ಆಳ 4 ಮೀ. ಗೆ ಸೀಮಿತಗೊಳಿಸಿ ಬೇಸಿಗೆ ಗಾಲದಲ್ಲಿ ನೀರು ಕಡಿಮೆ ಯಾದಾಗ ಅರ್ಧ ಭಾಗದಲ್ಲಿ ಮಾತ್ರ ನೀರು ನಿಂತು ಹೊರತೆಗೆಯಲು ಸಾಧ್ಯವಾಗುವಂತೆ ಅಣಿಗೊಳಿಸಿದರು. ಟ್ಯಾಂಕ್‌ ಮಧ್ಯ ಭಾಗದಿಂದ 4 ಇಂಚು ವ್ಯಾಸದ ಪಿವಿಸಿ ಪೈಪ್‌ ನೀರು ಹೊರತೆಗೆಯಲು ಅಳವಡಿಸಿದ್ದಾರೆ. ಒಟ್ಟು ವೆ‌ಚ್ಚ ರೂ. 90 ಸಾವಿರ. ಅರ್ಧ ಎಕ್ರೆಗೂ ಅಧಿಕ ಸ್ಥಳದಲ್ಲಿ ಈ ಟ್ಯಾಂಕ್‌ ಆವರಿಸಿಕೊಂಡಿದೆ. ನಮ್ಮ ಗಣಿತ ಮೇಷ್ಟ್ರ ಲೆಕ್ಕದಂತೆ 10,800 ಘನ ಮೀಟರ್‌ ನೀರು ಅಂದರೆ ಒಂದು ಕೋಟಿಯ 8 ಲಕ್ಷ ಲೀಟರ್‌ ನೀರು ಹಿಡಿಸಬಲ್ಲದು.

ಸುರಂಗದಿಂದ ನೀರು :  ಈ ಟ್ಯಾಂಕ್‌ ಒಳಗಡೆ ಎರಡು ಸುರಂಗಗ ಳಿಂದ ನೀರು ಹರಿದು ಬರುತ್ತಿದೆ. ಮಳೆಗಾಲದಲ್ಲಿ ಬಲವಾದ ಒರತೆ ಇದೆ. ಈ ನೀರು ಸಂಗ್ರಹಿಸಿಡುವುದು ಇವರ ಉದ್ದೇಶ. ಇವರ ಸ್ನೇಹಿತ ಯುವ ಮುಂದಾಳು ಸುಮಿತ್‌ ರಾಜ್‌ ಈ ಸ್ಥಳಕ್ಕೆ ಭೇಟಿ  ನೀಡಿದರು. ಸ್ನೇಹಿತನ ಈ ಸಾಹಸವನ್ನು ತನ್ನ ಫೇಸ್‌ ಬುಕ್‌ಗೆ ಲೋಡ್‌ ಮಾಡಿದರು. ಸ್ನೇಹಿತನ ಈ ಸಾಧನೆಯನ್ನು ಅರುಣ ಕಲ್ಯಾಣಿ ಎಂದು ನಾಮಕರಣ ಮಾಡಿ  ಇ – ಮಾಧ್ಯಮದ ಮೂಲಕ ಪ್ರಚಾರ ಮಾಡಿದರು. ಇದು ಈ ಲೇಖಕರ ಕಣ್ಣಿಗೆ ಬಿದ್ದು ಸ್ಥಳ ಭೇಟಿಯ ಮೂಲಕ  ಈ ಲೇಖನ ರೂಪುಗೊಂಡಿತು.

ಮಣ್ಣ ಟ್ಯಾಂಕ್‌ಗಳು ಪುನರ್ಜನ್ಮ ಪಡೆಯಲಿ: ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಮಣ್ಣಿನ ನೀರಿನ ಟ್ಯಾಂಕ್‌ಗಳಿವೆ. ಹಲವಾರು ಮಂದಿ ಪ್ರತಿವರ್ಷ ಉಸ್ತುವಾರಿ ನೋಡಿಕೊಳ್ಳುತ್ತಾ  ಕೃಷಿ ಭೂಮಿಗೆ ನೀರು ಪಡೆಯುತ್ತಿದ್ದಾರೆ. ಈ ಟ್ಯಾಂಕ್‌ಗಳ ಕೆಳಭಾಗದಲ್ಲಿ  ಕೃಷಿ ಭೂಮಿ ಇರುವುದರಿಂದ  ಮಣ್ಣಿನ ಮೂಲಕ ನೀರು ಕೆಳ ಭಾಗಕ್ಕೆ ಇಂಗಿ ತೋಟಗಳೆಲ್ಲ ತಂಪಾಗಿರುತ್ತವೆ. ಆದರೆ ಇಂದಿನ ಕೊಳವೆ ಬಾವಿ ಯುಗದಲ್ಲಿ ಹಲವರು ಇಂತಹ ಟ್ಯಾಂಕ್‌ಗಳನ್ನು ಮುಚ್ಚಿ ಕೃಷಿ ಮಾಡಿ ಇಂದು ನೀರಿನ ಬರವನ್ನು ಎದುರಿಸುತ್ತಿದ್ದಾರೆ. ಇಂತಹ  ಟ್ಯಾಂಕ್‌ಗಳು ಇಂದು ಪುನರ್ಜನ್ಮ ಪಡೆದು ನೀರಿನ ಬರವನ್ನು ದೂರ ಮಾಡಬೇಕಾಗಿದೆ. ಹಲವೆಡೆ ಮತ್ತೆ ಇಂತಹ ಟ್ಯಾಂಕ್‌ಗಳ ನಿರ್ಮಾಣದ ಪ್ರಯತ್ನ ಹಲವು ರೀತಿಯಲ್ಲಿ ಆಗುತ್ತಲಿವೆ. ಮಳೆಗಾಲದಲ್ಲಿ ಪೋಲಾಗಿ ಹೋಗುವ ನೀರನ್ನು ತಡೆದು ನಿಲ್ಲಿಸಿ ಜಲಕ್ಷಾಮವನ್ನು ಎದುರಿಸಲು ಇಂತಹ ಕಾಮಗಾರಿಗಳು ಇಂದಿನ ಅಗತ್ಯವಾಗಿದೆ.  ಈ ನಿಟ್ಟಿನಲ್ಲಿ  ನಮ್ಮ ಮಕ್ಕಳಿಗೆ ನೀರಿನ ಪಾಠವಾಗಬೇಕಿದೆ. ಸರಳಾಯ ಸಹೋದರರ ಈ ಪ್ರಯತ್ನಕ್ಕೆ ಅಭಿನಂದನೆ ಹೇಳ್ಳೋಣ

ಶಂಕರ್‌ ಸಾರಡ್ಕ

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.