ಕಾಸರಗೋಡು: ವಿಮಾನ ನಿಲ್ದಾಣದಲ್ಲಿ 75 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ
Team Udayavani, Dec 15, 2022, 4:38 PM IST
ಕಾಸರಗೋಡು: ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದ ಇಬ್ಬರು ವಿಮಾನ ಪ್ರಯಾಣಿಕರಿಂದ 75 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಲಾಗಿದೆ.
ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದ ಕಾಸರಗೋಡು ನಿವಾಸಿ ಶರ್ಫುದ್ದೀನ್ನಿಂದ 25 ಲಕ್ಷ ರೂ. ಮೌಲ್ಯದ 466 ಗ್ರಾಂ ಚಿನ್ನ ಹಾಗು ದುಬೈಯಿಂದ ಗೋ ಫಸ್ಟ್ ವಿಮಾನದಲ್ಲಿ ತಲುಪಿದ ಕಾಂಞಂಗಾಡ್ ನಿವಾಸಿ ಜೋಮೋನ್ ಜೇಮ್ಸ್ನಿಂದ 50 ಲಕ್ಷ ರೂ. ಮೌಲ್ಯದ 938 ಗ್ರಾಂ ಚಿನ್ನವನ್ನು ಕಸ್ಟಂಸ್ ಮತ್ತು ಪ್ರಿವೆಂಟಿವ್ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿದೆ.
ಮಲಿನ ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು:
ಉಪ್ಪಳ: ಮನೆಯ ಹಿಂಬದಿಯ ಮಲಿನ ನೀರಿನ ಹೊಂಡಕ್ಕೆ ಬಿದ್ದು ಉಪ್ಪಳ ಪೇಟೆಯ ಅಬ್ದುಲ್ ಸಮಾದ್ ಅವರ ಪುತ್ರ ಶಹಝಾದ್(2) ಸಾವಿಗೀಡಾದ ಘಟನೆ ನಡೆದಿದೆ.
ಮಲಿನ ನೀರಿನ ಹೊಂಡವನ್ನು ಶುಚೀಕರಣಕ್ಕಾಗಿ ತೆರೆದಿಟ್ಟಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ಮಗು ಬಿದ್ದು ಸಾವು ಸಂಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್