ಗೋಡಂಬಿ ಕೃಷಿ ವಿಪುಲಗೊಳಿಸಲು ಕ್ರಮ: ಸಚಿವೆ ಜೆ. ಮೆರ್ಸಿಕುಟ್ಟಯಮ್ಮ
Team Udayavani, Apr 7, 2017, 2:16 PM IST
ಕಾಸರಗೋಡು: ಜಿಲ್ಲೆಯಲ್ಲಿ ಗೋಡಂಬಿ ಕೃಷಿಯನ್ನು ವಿಪುಲಗೊಳಿಸಲು ಮತ್ತು ಗೋಡಂಬಿ ಕಾರ್ಮಿಕರ ಉದ್ಯೋಗ ಸಂರಕ್ಷಣೆಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೀನುಗಾರಿಕೆ ಮತ್ತು ಗೋಡಂಬಿ ಉದ್ದಿಮೆ ಸಚಿವೆ ಜೆ. ಮೆರ್ಸಿಕುಟ್ಟಯಮ್ಮ ಅವರು ಹೇಳಿದರು.
ಜಿಲ್ಲೆಯ ತೋಟಗಾರಿಕಾ ನಿಗಮದ ತೋಟಗಳಿಂದ ಗೋಡಂಬಿ ಸಂಗ್ರಹಿಸುವ ಕುರಿತಾಗಿ ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ನಡೆದ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತೋಟಗಾರಿಕಾ ನಿಗಮದ ಗೋಡಂಬಿ ಕೃಷಿ ರಂಗದಲ್ಲಿ ಆಧುನಿಕ ತಾಂತ್ರಿಕತೆಯನ್ನು ಬಳಸಿ ಗೋಡಂಬಿ ಸಸಿಗಳನ್ನು ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ. ತೋಟಗಾರಿಕಾ ಎಸ್ಟೇಟ್ಗಳಲ್ಲಿ ಅಕ್ರಮವಾಗಿ ವಾಹನ ಸಾಗುವುದು ಹಾಗೂ ಗೇರುಬೀಜ ಕಳವು ಮಾಡಿ ಸಾಗಿಸುವುದನ್ನು ತಡೆಯಲು ಪೊಲೀಸರನ್ನು ನೇಮಿಸಲಾಗುವುದು. ತೋಟಗಳ ನಿರ್ವಹಣೆಗೆ ಕೋ-ಆರ್ಡಿನೇಶನ್ ಸಮಿತಿ ರಚಿಸಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಗೋಡಂಬಿ ಅಭಿವೃದ್ಧಿ ನಿಗಮದ ಚೇರ್ಮನ್ ಎಸ್. ಜಯಮೋಹನ್, ಕಾಫೆಕ್ಸ್ ಚೇರ್ಮನ್ ಎಸ್.ಸುಧೇಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ಸೈಮನ್, ಕೆಎಸ್ಸಿಡಿಸಿ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎಫ್. ಸೇವ್ಯರ್, ಮಾಜಿ ಶಾಸಕರಾದ ಪಿ. ರಾಘವನ್, ಕೆ.ಪಿ. ಸತೀಶ್ಚಂದ್ರನ್, ನ್ಯಾಯವಾದಿ ಸಿ.ಎಚ್. ಕುಂಞಂಬು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಗೋಡಂಬಿ ಕಾರ್ಮಿಕರು, ಸಿಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ