ಆಸ್ಪತ್ರೆಗಳ ಸಿಬಂದಿಗೆ ಕೋವಿಡ್ ತಡೆ ತರಬೇತಿ
Team Udayavani, Sep 23, 2020, 10:44 PM IST
ಖಾಸಗಿ ಆಸ್ಪತ್ರೆ ಸಿಬಂದಿಗೆ ಕುಂಬಳೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮ
ಕಾಸರಗೋಡು: ಖಾಸಗಿ ಆಸ್ಪತ್ರೆಗಳ ಸಿಬಂದಿಗೆ ಆರೋಗ್ಯ ಇಲಾಖೆಯ ಕೋವಿಡ್ ಪ್ರತಿರೋಧ ತರಬೇತಿ ನೀಡಲಾಯಿತು.
ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ತರಬೇತಿ ವಿಭಾಗ, ಕುಂಬಳೆ ಸಿ.ಎಚ್.ಸಿ. ಜಂಟಿ ವತಿಯಿಂದ ಕುಂಬಳೆಯ ಖಾಸಗಿ ಆಸ್ಪತ್ರೆ ಸಿಬಂದಿಗಾಗಿ ಈ ತರಬೇತಿ ನೀಡಲಾಯಿತು. ಆಸ್ಪತ್ರೆಯಲ್ಲಿ ರೋಗಾಣು ನಾಶ, ರೋಗ ಚಿಕಿತ್ಸೆ, ಪಿ.ಪಿ.ಇ. ಕಿಟ್ ಧರಿಸುವಿಕೆ, ರೋಗ ತಡೆ, ಕ್ವಾರಂಟೈನ್ ನಿಬಂಧನೆ ಇತ್ಯಾದಿ ವಿಷಯಗಳಲ್ಲಿ ತರಬೇತಿ ನಡೆಯಿತು.
ಕೋವಿಡ್ ಸಂಪರ್ಕದಿಂದ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ರೋಗಿಗಳ ಜತೆಗೆ ಇತರರೂ ಬರುವುದನ್ನು ತಡೆಯಬೇಕು ಎಂಬುದು ಇಲ್ಲಿನ ಪ್ರಧಾನ ವಿಷಯವಾಗಿತ್ತು. ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣಗೊಳಿಸುವ ಕ್ರಮಗಳು, ಸೋಂಕು ಗಣನೆಗೂ ಮೀರಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳುವ ಮುಂಜಾಗರೂಕ ಕ್ರಮಗಳ ಸಂಬಂಧ ಆದೇಶಗಳನ್ನು ನೀಡಲಾಗಿದೆ.
ಕುಂಬಳೆಯ ಸಂತ ಮೋನಿಕಾ ಶಾಲೆಯ ಸಭಂಗಣದಲ್ಲಿ ನಡೆದ ಸಮಾರಂಭವನ್ನು ಕುಂಬಳೆ ಸಿ.ಎಚ್.ಸಿ.ಯ ವೈದ್ಯಾಧಿಕಾರಿ ಡಾ| ಕೆ. ದಿವಾಕರ ರೈ ಉದ್ಘಾಟಿಸಿದರು. ಡಾ| ಬಿ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಡಾ| ಬಿ. ಅಪರ್ಣ, ನರ್ಸಿಂಗ್ ಟ್ಯೂಟರ್ ಶೆಲ್ಜಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್