ಸವಾಕ್ ಕಲಾವಿದರ ಭಕ್ತಿ ಸಂಗೀತ ಸಿಡಿ ಬಿಡುಗಡೆ
Team Udayavani, Mar 20, 2018, 11:20 AM IST
ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ಸ್ ಆ್ಯಂಡ್ ವರ್ಕರ್ಸ್ ಅಸೋಸಿಯೇಶನ್ (ಸವಾಕ್)ನ ಜಿಲ್ಲಾ ಸಮಿತಿಯ ಸಭೆ ಕಾಸರಗೋಡು ಜಿಲ್ಲಾ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸವಾಕ್ ಜಿಲ್ಲಾಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದ ಸಭೆ ಯಲ್ಲಿ ಸಂಘಟನೆಯ ಈವರೆಗಿನ ಕಾರ್ಯಚಟುವಟಿಕೆಗಳ ವಿಸ್ತೃತ ಪುನರವಲೋಕನ ಮತ್ತು ಚರ್ಚೆ ನಡೆಯಿತು.
ಮಾ. 27ರಂದು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಸವಾಕ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅಂದು ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ವಿನೂತನ ಶೈಲಿಯ ಕನ್ನಡ ಹಾಗೂ ಮಲಯಾಳ ಬೀದಿ ನಾಟಕಗಳನ್ನು ಪ್ರದರ್ಶಿಸಲಾಗುವುದು. ಸಭೆಯಲ್ಲಿ ಸವಾಕ್ ಸದಸ್ಯ, ಕಲಾವಿದ ಬಾಲ್ರಾಜ್ ರಚಿಸಿ ನಿರ್ದೇಶಿಸಿರುವ ಪೆರ್ಲಡ್ಕ ಶ್ರೀಕೃಷ್ಣ ಕ್ಷೇತ್ರದ ಭಕ್ತಿ ಸಂಗೀತ ಸಿಡಿಯನ್ನು ಸವಾಕ್ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಬಿಡುಗಡೆಗೊಳಿಸಿದರು.
ಈ ಭಕ್ತಿ ಸಂಗೀತ ಸಿಡಿಯಲ್ಲಿ ಯದು ಮುರಳೀಧರ, ಸ್ವಾತಿ ವಿಜಯನ್ ಮೊದಲಾದವರು ಹಾಡುಗಾರಿಕೆ ನಡೆಸಿದ್ದಾರೆ.
ಸಭೆಯಲ್ಲಿ ಸವಾಕ್ ಜಿಲ್ಲಾ ಕಾರ್ಯದರ್ಶಿ ವಿ.ಜಿ.ಕಾಸರಗೋಡು, ವಿವಿಧ ವಲಯಗಳ ಮುಖಂಡರಾದ ವಿನು ಬೋವಿಕ್ಕಾನ, ಭಾರತೀ ಬಾಬು, ಜಯಶ್ರೀ ಸುವರ್ಣ, ಸುರೇಶ ಬೇಕಲ್, ಭಾಸ್ಕರ ಮಂಜೇಶ್ವರ, ದಯಾ ಪಿಲಿಕುಂಜೆ, ಶಶಿಧರ ಎದುರ್ತೋಡು, ಕಿರಣ್ ಕಲಾಂಜಲಿ, ಬಾಲರಾಜ್, ಸುಶ್ಮಿತಾ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಸವಾಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಳಸೀಧರನ್ ಸ್ವಾಗತಿಸಿ, ಉದಯ ಸಾರಂಗ್ ವಂದಿಸಿದರು. ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ