ಸಿರಿಬಾಗಿಲು ಪ್ರಶಸ್ತಿಗೆ ಆಯ್ಕೆಗೊಂಡ ಡಾ| ಡಿ. ಸದಾಶಿವ ಭಟ್‌


Team Udayavani, Aug 11, 2017, 7:50 AM IST

KAS-PAGE.jpg

ಸಿರಿಬಾಗಿಲು: ಡಾ| ಡಿ. ಸದಾಶಿವ ಭಟ್‌ ಅವರು 2016-17ನೇ ಸಾಲಿನ ಹಾಗೂ ಪ್ರಕೃತ 11ನೇ ವರ್ಷದ ಪ್ರತಿಷ್ಠಿತ  ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಆ. 12ರಂದು ಶನಿವಾರ ಅಪರಾಹ್ನ 2ರಿಂದ ಸದ್ರಿ ಪ್ರತಿಷ್ಠಾನದ ವತಿಯಿಂದ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ  ಜರಗುವ “ಅರ್ಥಾಂತರಂಗ -2′ ಕಾರ್ಯಕ್ರಮದ ಸಭಾ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ  ಗ್ರಾಮದ ಪಳ್ಳುಮನೆಯಲ್ಲಿ ವಾಸಿಸುತ್ತಿರುವ ಅವರ ಜನನ 1933ರ ಮೇ 15. ತಂದೆ ಡಿ.ನಾರಾಯಣ ಭಟ್‌, ತಾಯಿ ಗೋದಾವರಿ ಅಮ್ಮ. 1964ರಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ನವೋದಯ ಹೈಸ್ಕೂಲ್‌ನಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗ ಜೀವನ ಆರಂಭಿಸಿ 1992ರಲ್ಲಿ ವೃತ್ತಿ ಯಿಂದ ನಿವೃತ್ತಿ. ಬಹು ಭಾಷಾ ವಿದ್ವಾಂಸ ರಾದ ಅವರು ಬಹು ವಿಶ್ವವಿದ್ಯಾನಿಲಯ ಗಳಿಂದ ಪದವಿಗಳನ್ನು ಗಳಿಸಿದವರು. 

ಮದ್ರಾಸ್‌ ವಿ.ವಿ.ಯಿಂದ ವಿದ್ವಾನ್‌, ದಕ್ಷಿಣ  ಭಾರತ ಹಿಂದಿ ಪ್ರಚಾರ ಸಭಾ ದಿಂದ ರಾಷ್ಟ್ರ ಭಾಷಾ ವಿಶಾರದ, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾ ನಿಲಯ ದಿಂದ ಬಿ.ಎಡ್‌., ಧಾರವಾಡ ಕರ್ನಾಟಕ ವಿಶ್ವವಿದ್ಯಾ ಲಯದಿಂದ ಎಂ.ಎ., 1986 ರಲ್ಲಿ ಡಾ| ಜಿ.ಸಿ. ಐತಾಳರ ಮಾರ್ಗ ದರ್ಶನದಲ್ಲಿ “ಪಂಜೆಯವರ ಸಾಹಿತ್ಯ ಕೃತಿಗಳು ಒಂದು ಅಧ್ಯಯನ’ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್‌.ಡಿ. ಪದವಿ. ಕನ್ನಡ, ತುಳು, ಸಂಸ್ಕೃತ, ಹಿಂದಿ, ಇಂಗ್ಲಿಷ್‌, ಹವ್ಯಕ ಕನ್ನಡ, ಕೊಂಕಣಿ, ಮರಾಠಿ, ಕರ್ಹಾಡ ಹೀಗೆ ಒಂಬತ್ತು ಭಾಷೆಗಳಲ್ಲಿ ಅರ್ಥಸಹಿತ ಯಕ್ಷಗಾನ ಪ್ರಸಂಗವನ್ನು ಬರೆದ ಯಕ್ಷಗಾನ ರಂಗದ ಏಕೈಕ ವಿದ್ವಾಂಸ.

ಸಂಸ್ಕೃತ, ಹಿಂದಿ, ಇಂಗ್ಲಿಷ್‌, ಕರ್ಹಾಡ ಭಾಷೆಗಳ ಯಕ್ಷಗಾನ ಧ್ವನಿಸುರುಳಿಗಳೂ ಬೆಳಕು ಕಂಡಿವೆ. ಅವರು  ಬರೆದ 10 ಯಕ್ಷಗಾನ ಪ್ರಸಂಗಗಳೂ ಸೇರಿ ಒಟ್ಟು 174 ಪ್ರಸಂಗಗಳು ಇದುವರೆಗೆ ಪ್ರಕಟಗೊಂಡಿದ್ದು ಇನ್ನೂ ಹಲವು ಪ್ರಸಂಗಗಳು ಪ್ರಕಟನೆಯ ಬೆಳಕು ಕಾಣ ಬೇಕಾಗಿದೆ.ಅವರು 40 ಪ್ರಸಂಗಗಳ ಸುಮಾರು ಮೂರು ಸಾವಿರದಷ್ಟು ಪುಟಗಳ ಕನ್ನಡ ತುಳು ಪ್ರಸಂಗಾರ್ಥಗಳು, ಗೀತರೂಪಕ, ಕನ್ನಡ, ತುಳು, ಸಾಮಾಜಿಕ ನಾಟಕ, ಪೌರಾಣಿಕ ನಾಟಕಗಳು, ಮಕ್ಕಳ ಕವನ ಯಕ್ಷಗಾನ ಸೇರಿ ಸುಮಾರು 80 ಅಪ್ರಕಟಿತ ಕೃತಿಗಳು. 

ಮಾತೃ ಭಾಷೆ ಕರ್ಹಾಡದಲ್ಲಿ ರಚಿಸಿದ ಕರ್ಹಾಡಿ ರಾಮಾಯಣ ಹಾಗೂ ಶ್ರೀಕೃಷ್ಣ ಚರಿತ ಮಹಾಕಾವ್ಯಗಳು, 5,600 ಪದ್ಯಗಳನ್ನೊಳಗೊಂಡ ಶ್ರೀಕೃಷ್ಣ ಚರಿತೆ ಯಕ್ಷಗಾನ ಮಹಾಕಾವ್ಯ, ವಿವಿಧ ದೇವರುಗಳ ಸಂಸ್ಕೃತ ಸ್ತೋತ್ರಗಳು, ಸುಪ್ರಭಾತಗಳು, ಕನ್ನಡ ಕವನ ಸಂಕಲನಗಳು, ಕನ್ನಡ ಗೀತ ರೂಪಕಗಳು, ಕನ್ನಡ ಹರಿಕತೆ, ವ್ಯಕ್ತಿ ಚಿತ್ರಗಳು, ಬದುಕುಬರಹಗಳು ಹೀಗೆ ಸಾಹಿತ್ಯದ ಅನನ್ಯ ಕೊಡುಗೆಗಳೇ ಅಸಂಖ್ಯ.

ಅವರಿಗೆ ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಸ್ಮಾರಕ ಪ್ರಶಸ್ತಿ, ಬೊಳ್ಳಂಬಳ ಪ್ರಶಸ್ತಿ, ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ ಗೌರವಾರ್ಪಣೆ, ಅವರ 30 ಪ್ರಸಂಗಗಳ ಯಕ್ಷಗಾನ ಪ್ರಸಂಗ ಸಂಪುಟ “ತ್ರಿಂಶತಿ’ಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ ಹೀಗೆ ಹತ್ತು ಹಲವು ಗೌರವಾದರಗಳು ಲಭಿಸಿವೆ.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.