ವಿದ್ಯುತ್‌ ಪ್ರಸರಣ ಜಾಲ: ಹೈಟೆಕ್‌ ಯೋಜನೆ


Team Udayavani, Feb 10, 2018, 9:05 AM IST

Electricity-Distribution-900.jpg

ಕಾಸರಗೋಡು: ವಿದ್ಯುತ್‌ ಉತ್ಪಾದನೆ, ಪೂರೈಕೆ, ವಿತರಣೆ ಜಾಲವನ್ನು 2022ರ ಹೊತ್ತಿಗೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೇರಿಸಲು ವಿದ್ಯುತ್‌ ಮಂಡಳಿಯು ತೀರ್ಮಾನಿಸಿದ ಹಿನ್ನೆಲೆಯಲ್ಲಿ  ಕಾಸರಗೋಡು ಜಿಲ್ಲೆಯಲ್ಲೂ  ಅದರ ಕಾರ್ಯಚಟುವಟಿಕೆ ಆರಂಭಗೊಂಡಿದೆ. ಕಾಸರಗೋಡು ಎಲೆಕ್ಟ್ರಿಕಲ್‌ ಸರ್ಕಲ್‌ ಡೆಪ್ಯೂಟಿ ಚೀಫ್‌ ಎಂಜಿನಿಯರ್‌ ಅವರ ನೇತೃತ್ವದಲ್ಲಿ ಹೊಸದಾಗಿ ರಚಿಸಲಾದ ಪ್ರಾಜೆಕ್ಟ್  ಮೆನೇಜ್‌ಮೆಂಟ್‌ ಘಟಕದ ಆಶ್ರಯದಲ್ಲಿ  ಈ ಸಂಬಂಧ ಯೋಜನೆ ತಯಾರಿಸಲಾಗುತ್ತಿದೆ. ಎಲೆಕ್ಟ್ರಿಕಲ್‌ ಸರ್ಕಲ್‌ನ ಓರ್ವ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಹಾಗೂ ಕಾಸರಗೋಡು, ಕಾಂಞಂಗಾಡು ಡಿವಿಶನ್‌ಗಳ ತಲಾ ಒಬ್ಬ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ರನ್ನು ಮತ್ತು ಸದಸ್ಯರನ್ನು ಒಳಗೊಂಡ ಪ್ರಾಜೆಕ್ಟ್  ಮೆನೇಜ್‌ಮೆಂಟ್‌ ಘಟಕ ರಚಿಸಲಾಗಿದೆ.

ವಿವಿಧ ಸಬ್‌ಸ್ಟೇಶನ್‌ಗಳಿಂದ ಬರುವ ಫೀಡರ್‌ಗಳನ್ನು  ಪರಸ್ಪರ ಜೋಡಿಸಿ ರಿಂಗ್‌ಮೈನ್‌ ವ್ಯವಸ್ಥೆಯನ್ನು  ಕಲ್ಪಿಸಿ ವಿದ್ಯುತ್‌ ಮೊಟಕು ಹೆಚ್ಚಾಗಿ ಅನುಭವಕ್ಕೆ ಬರುವ ಸ್ಥಳಗಳ ಲೈನ್‌ಗಳನ್ನು ಅಗತ್ಯವಿದ್ದರೆ ಬದಲಿಸಿ ಸ್ಥಾಪಿಸಲಾಗುವುದು. ಅಗತ್ಯದ ಸ್ಥಳಗಳಲ್ಲಿ  ಎಬಿಸಿ ಕವರ್ಡ್‌ ಕಂಡಕ್ಟರ್‌, ಭೂಗರ್ಭ ಕೇಬಲ್‌ ಮೊದಲಾದ ನೂತನ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಸಬ್‌ ಸ್ಟೇಶನ್‌ಗಳ ಮೂಲಕ ಹೆಚ್ಚಿನ 11 ಕೆವಿ ಫೀಡರ್‌ಗಳನ್ನು ಸ್ಥಾಪಿಸಲಾಗುವುದು. ಹಳೆಯದಾದ ಹಾಗೂ ಸಾಮರ್ಥ್ಯ ಕಡಿಮೆಯಾದ ವಿದ್ಯುತ್‌ ತಂತಿಗಳನ್ನು  ಬದಲಿಸಿ ಸ್ಥಾಪಿಸಲಾಗುವುದು. ಫೀಡರ್‌ಗಳ ಲೋಡ್‌ಗಳನ್ನು  ನಿಯಂತ್ರಿಸುವುದರ ಮೂಲಕ ವಿದ್ಯುತ್‌ ವಿತರಣೆಯ ಅಡೆತಡೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ.

ಟ್ರಾನ್ಸ್‌ಫಾರ್ಮರ್‌ ಸ್ಟೇಶನ್‌ಗಳನ್ನು ನವೀಕರಿಸಿ ಸ್ಟಾಂಡಡೈìಸ್‌ ಮಾಡುವುದು, ಲೋಡ್‌ ಬ್ಯಾಲನ್ಸ್‌  ಮಾಡುವುದು ಇದರ ಅಂಗವಾಗಿ ನಡೆಯಲಿದೆ. ಎಲ್‌ಟಿ ನೆಟ್‌ವರ್ಕ್‌ ಚುರುಕು ಗೊಳಿಸುವುದರ ಅಂಗವಾಗಿ ಈಗಿರುವ ಸಿಂಗಲ್‌ ಫೇಸ್‌ಲೈನ್‌ಗಳನ್ನು ತ್ರೀ ಫೇಸ್‌ ಲೈನ್‌ಗಳಾಗಿ ಮಾರ್ಪಾಡುಗೊಳಿಸಲಾಗುವುದು. ಯೋಜನೆಯ ಅಂಗವಾಗಿ ಹಳೆಯದಾದ ಹಾಗೂ ಸಾಮರ್ಥ್ಯ ಕಡಿಮೆಯಾದ ತಂತಿಗಳನ್ನು  ಬದಲಾಯಿಸಲು ನಿರ್ಧರಿಸಲಾಗಿದೆ.
ಈ ಎಲ್ಲ  ಕಾಮಗಾರಿಗಳನ್ನು  ಸಾಕಾರಗೊಳಿಸುವುದೊಂದಿಗೆ ವಿದ್ಯುತ್‌ ಪೂರೈಕೆ ವಲಯದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಲು, ವಿದ್ಯುತ್‌ ವಿತರಣೆ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ. 

ಈ ಯೋಜನೆಯನ್ನು ತಯಾರಿಸಲು ಕಡಿಮೆ ವೋಲ್ಟೇಜ್‌ ಇರುವ ಹಾಗೂ ಹೆಚ್ಚಿನ ವಿದ್ಯುತ್‌ ಮೊಟಕು ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳ ಕುರಿತಾದ ಮಾಹಿತಿಗಳನ್ನು  ಆಯಾ ಸೆಕ್ಷನ್‌ ಕಚೇರಿಗಳಲ್ಲಿ  ಸ್ವೀಕರಿಸಲಾಗುವುದು. ವಿದ್ಯುತ್‌ ಮೊಟಕು, ವೋಲ್ಟೇಜ್‌ ಕೊರತೆ ಇತ್ಯಾದಿ ವಾಣಿಜ್ಯ ಕ್ಷೇತ್ರದಲ್ಲಿ  ಮಾತ್ರವಲ್ಲದೆ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೂ ಬಾಧಕವಾಗುತ್ತಿದೆ. ಇದನ್ನೆಲ್ಲಾ  ಮನಗಂಡು ವಿದ್ಯುತ್‌ ವಲಯವನ್ನು ಜಾಗತಿಕ ಶ್ರೇಣಿಗೇರಿಸಲು ಹಾಗೂ ಈ ಮೂಲಕ ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿದ್ಯುತ್‌ ಇಲಾಖೆಯು ಯೋಜನೆ ಹಾಕಿಕೊಂಡಿದೆ.

2022ರ ಬಳಿಕ ನಿರಂತರ ವಿದ್ಯುತ್‌ : ಮಳೆಗಾಲ, ಚಳಿಗಾಲ ಮತ್ತು  ಬೇಸಿಗೆಕಾಲ ಎನ್ನದೆ ವರ್ಷಪೂರ್ತಿ ನಿರಂತರ ವಿದ್ಯುತ್‌ ಮೊಟಕು, ವೋಲ್ಟೇಜ್‌ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡಿನ ಜನತೆಗೆ ಇನ್ನು ನೆಮ್ಮದಿಯಿಂದ ಉಸಿರಾಡಬಹುದು. 2022ರಲ್ಲಿ ವಿದ್ಯುತ್‌ ವಲಯವು ಜಾಗತಿಕ ಗುಣಮಟ್ಟಕ್ಕೇರಲಿದೆ. ಜಿಲ್ಲೆಯ ನಗರ ಪ್ರದೇಶಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಕೈಕೊಡುವುದು ಸಾಮಾನ್ಯವಾಗಿದೆ. ಬೇಸಿಗೆಕಾಲದಲ್ಲಿ  ಉಷ್ಣಾಂಶ ಹೆಚ್ಚಿರುವ ಈ ಜಿಲ್ಲೆಯಲ್ಲಿ  ವಿದ್ಯುತ್‌ ಮೊಟಕುಗೊಳ್ಳುವುದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಗಾಳಿಯಿಂದಾಗಿ ವಿದ್ಯುತ್‌ ಸಮಸ್ಯೆ ಎದುರಾಗುತ್ತಿದ್ದು, ಐದಾರು ದಿನಗಳ ಕಾಲ ವಿದ್ಯುತ್‌ ಸ್ಥಗಿತಗೊಳ್ಳುವುದು ಸಾಮಾನ್ಯ ಎನಿಸಿಬಿಟ್ಟಿದೆ. ಇದಕ್ಕೆಲ್ಲಾ 2022ರ ವೇಳೆಗೆ ಪರಿಹಾರ ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ವಿತರಣಾ ಕ್ಷೇತ್ರವನ್ನು ಚುರುಕುಗೊಳಿಸಿ ಯಾವುದೇ ಅಡೆತಡೆಗಳಿಲ್ಲದೆ, ಗುಣಮಟ್ಟದ, ಸುರಕ್ಷಿತವಾದ ವಿದ್ಯುತ್ತನ್ನು ಸಾಧ್ಯವಾದಷ್ಟು ಮಿತದರದಲ್ಲಿ ಬಳಕೆದಾರರಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಈಗಿರುವ ಎಚ್‌ಟಿ ಲೈನ್‌ಗಳ ಭೂಶಾಸ್ತ್ರ  ಪರವಾದ ಮ್ಯಾಪಿಂಗ್‌ ಪ್ರಕ್ರಿಯೆ ಆರಂಭಗೊಂಡಿದೆ. ವೋಲ್ಟೇಜ್‌ ಕಡಿಮೆಯಾದ, ವಿದ್ಯುತ್‌ ಅಡೆತಡೆಗಳು ಹೆಚ್ಚಿರುವ ಪ್ರದೇಶಗಳನ್ನು ಪತ್ತೆಹಚ್ಚುವ ಸಮೀಕ್ಷೆ ನಡೆಯುತ್ತಿದೆ.

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.