ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ


Team Udayavani, Feb 10, 2018, 9:20 AM IST

Highway-9-2.jpg

ಕಾಸರಗೋಡು: ಕಾಸರಗೋಡು ಹಾಗೂ ಆಸುಪಾಸಿನ ಜನರು ನೀರು ಕುಡಿಯಬೇಕಾದರೆ ಜಲ ಪ್ರಾಧಿಕಾರ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಮುತುವರ್ಜಿ ವಹಿಸಬೇಕಾಗಿದೆ. ಯಾಕೆಂದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ನಿಟ್ಟಿನಲ್ಲಿ  ಭೂಸ್ವಾಧೀನ ಪ್ರಕ್ರಿಯೆ ವಿಳಂಬಗೊಳ್ಳುತ್ತಿರುವುದರಿಂದ ಜಲ ಪ್ರಾಧಿಕಾರದ ನೂತನ ಪೈಪ್‌ಲೈನ್‌ ಅಳವಡಿಕೆಯೂ ವಿಳಂಬಗೊಂಡಿದೆ. ಚೆರ್ಕಳದಿಂದ ವಿದ್ಯಾನಗರ ಶುದ್ಧೀಕರಣ ನಿಲಯದವರೆಗೆ ಐದು ಕಿಲೋ ಮೀಟರ್‌ ಭಾಗದ ಈಗಿರುವ ಪೈಪ್‌ಗ್ಳನ್ನು  ಬದಲಿಸಿ ಹೊಸದಾಗಿ ಸ್ಥಾಪಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. 2018ರ ಮಾರ್ಚ್‌ನಲ್ಲಿ ಪೈಪ್‌ಲೈನ್‌ ಅಳವಡಿಸುವ ಗುತ್ತಿಗೆ ಕಾಲಾವಧಿ ಕೊನೆಗೊಳ್ಳಲಿದೆ. ಆದರೆ ಇದುವರೆಗೆ ಯೋಜನೆಗೆ ಚಾಲನೆ ನೀಡಲು ಕೂಡ ಸಾಧ್ಯವಾಗಿಲ್ಲ. 

ಭೂಸ್ವಾಧೀನಪಡಿಸುವಿಕೆ ಪೂರ್ಣವಾಗದ ಹಿನ್ನೆಲೆಯಲ್ಲಿ  ಈಗಿರುವ ಸ್ಥಳದ ಗರಿಷ್ಠ  ದೂರದಲ್ಲಿ  ಪೈಪ್‌ಲೈನ್‌ ಅಳವಡಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಲಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದರೂ ಅದಕ್ಕೆ ಕೂಡ ಇದುವರೆಗೆ ಅನುಕೂಲಕರ ಉತ್ತರ ಬಂದಿಲ್ಲ.

ಪ್ರಥಮ ಹಂತದಲ್ಲಿ  ಮುಳಿಯಾರಿನ ಬಾವಿಕ್ಕೆರೆಯಿಂದ ಚೆರ್ಕಳದ ವರೆಗಿನ ಭಾಗದಲ್ಲಿ  ಕಳೆದ ವರ್ಷ ನೂತನ ಪೈಪ್‌ಗ್ಳನ್ನು ಅಳವಡಿಸಲಾಗಿದೆ. ದ್ವಿತೀಯ ಹಂತದಲ್ಲಿ  ಚೆರ್ಕಳದಿಂದ ವಿದ್ಯಾನಗರ ತನಕದ ಪೈಪ್‌ ಬದಲಿಸಿ ನೂತನವಾಗಿ ಸ್ಥಾಪಿಸಲು ಐದು ಕೋಟಿ ರೂ. ಗಳನ್ನು  ಮಂಜೂರುಗೊಳಿಸಲಾಗಿತ್ತು. ಈ ಭಾಗದಲ್ಲಿ  ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಪೈಪ್‌ಲೈನ್‌ ಹಾದುಹೋಗುತ್ತಿದೆ. ಹೆದ್ದಾರಿಯನ್ನು  ಚತುಷ್ಪಥಗೊಳಿಸುವ ಜಾಗದ ಸಮೀಪವಿರುವ ಒಂದೂವರೆ ಮೀಟರ್‌ ಭಾಗದ ಯುಟಿಲಿಟಿ ಕಾರಿಡಾರ್‌ನಲ್ಲಿ  ಪೈಪ್‌ ಅಳವಡಿಸಲು ತೀರ್ಮಾನಿಸಲಾಗಿದೆ. ಅಗತ್ಯವಿರುವ ಪೈಪ್‌ಗ್ಳನ್ನು ಈಗಾಗಲೇ ತಲುಪಿಸಲಾಗಿದೆ. ಆದರೆ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಖಾಸಗಿ ಸ್ಥಳದಲ್ಲೇ ಹಾದುಹೋಗುತ್ತಿದೆ. ಇದನ್ನು  ಪೂರ್ಣಗೊಳಿಸಲು ಕನಿಷ್ಠ  ಎರಡು ವರ್ಷಗಳಾದರೂ ಬೇಕಾಗಲಿದೆ. ಅದಕ್ಕಿಂತ ಮೊದಲೇ ಜಲಪ್ರಾಧಿಕಾರ ಪೈಪ್‌ ಸ್ಥಾಪಿಸಲು ನೀಡಿದ ಗುತ್ತಿಗೆ ಕಾಲಾವಧಿ ಕೊನೆಗೊಳ್ಳಲಿದೆ. 

ಮಾತ್ರವಲ್ಲದೆ ಈ ಭಾಗದಲ್ಲಿ  ಹಳೆಯ ಪೈಪ್‌ಲೈನ್‌ ಸಂಪೂರ್ಣವಾಗಿ ಹಾನಿಗೀಡಾಗಿದ್ದು, 40 ವರ್ಷಗಳ ಹಿಂದೆ ಅಳವಡಿಸಿದ ಕಬ್ಬಿಣದ ಪೈಪ್‌ ಇದಾಗಿದೆ. ಕಾಲಾವಧಿ ಕಳೆದಿರುವುದರಿಂದ ಹಲವೆಡೆ ಪೈಪ್‌ ಒಡೆದು ನೀರು ಪೋಲಾಗುತ್ತಿದೆ. ಸಾವಿರಾರು ಲೀಟರ್‌ ನೀರು ಪ್ರತಿದಿನ ರಸ್ತೆಯಲ್ಲಿ  ಹರಿದು ಹೋಗುತ್ತಿದೆ.

ಒಂದೆಡೆ ಒಡೆದ ಪೈಪ್‌ಗ್ಳನ್ನು ದುರಸ್ತಿ ಮಾಡಿದಾಗ ಇನ್ನೊಂದೆಡೆ ಹಾನಿಯಾಗಿರುವುದು ಕಂಡುಬರುತ್ತಿದೆ. ರಸ್ತೆಯ ಬದಿ ಮಣ್ಣಿನಡಿಯಲ್ಲಿ  ಪೈಪ್‌ ಅಳವಡಿಸಲಾಗಿದೆ. ಪೈಪ್‌ ಸೋರಿಕೆ ಪತ್ತೆಹಚ್ಚಬೇಕಾದರೆ ಒಂದು ಮೀಟರ್‌ನಷ್ಟು  ಅಗೆದು ನೋಡಬೇಕಾಗುತ್ತದೆ. ಇದರಿಂದಾಗಿ ಜಲಪ್ರಾಧಿಕಾರದ ಸಿಬ್ಬಂದಿಗಳಿಗೆ ನೀರು ಪೋಲಾಗುತ್ತಿರುವುದನ್ನು  ತಡೆಗಟ್ಟುವುದು ಬಹುದೊಡ್ಡ  ಸಮಸ್ಯೆಯಾಗುತ್ತಿದೆ.

ಬಾವಿಕ್ಕೆರೆಯಿಂದ ಚೆರ್ಕಳ ತನಕ ಹೊಸ ಪೈಪ್‌ಲೈನ್‌ ಅಳವಡಿಸಿರುವುದಿಂದ ನೀರಿನ ಹರಿಯುವಿಕೆ ಸಾಮರ್ಥ್ಯ ಹೆಚ್ಚಿದೆ. ಆದ್ದರಿಂದ ಚೆರ್ಕಳದಿಂದ ವಿದ್ಯಾನಗರ ತನಕದ ಹಳೆಯ ಪೈಪ್‌ ನಿರಂತರವಾಗಿ ಒಡೆಯುತ್ತಿದೆ. ನೀರಿನ ಕೊರತೆ ಇರುವಾಗ ರಸ್ತೆ  ಬದಿ ನೀರು ಪೋಲಾಗುತ್ತಿರುವುದು ನಾಗರಿಕರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಪೈಪ್‌ ಬದಲಿಸಿ ಸ್ಥಾಪಿಸದೆ ಇದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ  ಎಂದು ಜಲ ಪ್ರಾಧಿಕಾರ ಹೇಳುತ್ತಿದೆ.

ಪ್ರತಿಭಟನೆಯತ್ತ  ಸಾರ್ವಜನಿಕರು 
ಬೇಸಗೆ ಕಾಲ ಸಮೀಪಿಸುವುದರಿಂದ ಕಾಸರಗೋಡು ನಗರ ಮತ್ತು  ಸಮೀಪದ ಪಂಚಾಯತ್‌ಗಳಲ್ಲಿ  ನೀರಿನ ಬಳಕೆ ಹೆಚ್ಚಾಗಲಿದೆ. 24 ಗಂಟೆಗಳ ಕಾಲ ಪಂಪ್‌ ಮಾಡಿದರೂ ಅಗತ್ಯದ ನೀರು ವಿತರಿಸಲು ಸಾಧ್ಯವಾಗದೆ ಜಲ ಪ್ರಾಧಿಕಾರ ಸಮಸ್ಯೆ ಎದುರಿಸುತ್ತಿರುವಾಗ ಸಂಗ್ರಹದಲ್ಲಿರುವ ನೀರು ಕೂಡ ರಸ್ತೆ  ಬದಿ ಹರಿದು ಪೋಲಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ  ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರನ್ನು ರೋಷಕ್ಕೀಡು ಮಾಡಿದೆ. ಅಲ್ಲದೆ ಈ ನಿಟ್ಟಿನಲ್ಲಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.