ಕಾಸರಗೋಡು ಪೆರ್ಲ: ಎಂಡೋಸಲ್ಫಾನ್ ಸಂತ್ರಸ್ತ ನಿಧನ
Team Udayavani, Apr 2, 2019, 4:44 PM IST
ಶಿವಪ್ರಸಾದ್ ಅವರ ಹಳೆಯ ಫೋಟೋ
ಬದಿಯಡ್ಕ: ಎಂಡೋಸಲ್ಫಾನ್ ಪೀಡಿತರಾಗಿ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ಸೋಮವಾರ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ನಡೆದಿದೆ.
ಪೆರ್ಲ ಬಳಿಯ ಬಾಕಿಲಪದವು ನಿವಾಸಿ ಕೃಷ್ಣ ನಾಯ್ಕರ ಪುತ್ರ ಶಿವಪ್ರಸಾದ್ (19) ಮೃತಪಟ್ಟ ದುರ್ದೈವಿ. ಜನ್ಮತಾ ಇವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಶರೀರ ಬೆಳವಣಿಗೆಯಿಲ್ಲದೆ ಸಪೂರವಾಗುವ ರೋಗ ಇವರಿಗೆ ಬಾಧಿಸಿತ್ತು. ಇದರಿಂದ ಕೆಲವು ವರ್ಷಗಳಿಂದ ನಡೆದಾಡಲಾಗದೆ ಹಾಸಿಗೆ ಹಿಡಿದಿದ್ದರು.
ಮಂಗಳೂರು, ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ ಅನಾರೋಗ್ಯ ಉಲ್ಬಣಿಸಿ ತಮ್ಮ ನಿವಾಸದಲ್ಲಿ ಮೃತರಾಗಿದ್ದಾರೆ.
ಶಿವಪ್ರಸಾದ್ ರ ಹೆಸರು ಎಣ್ಮಕಜೆ ಪಂಚಾಯತ್ ಒಂದನೇ ವಾರ್ಡ್ನ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿದ್ದು, ಸೌಲಭ್ಯಗಳು ಲಭಿಸುತ್ತಿತ್ತು. ಮೃತರು ತಂದೆ, ತಾಯಿ ಅದಿತಿ, ಸಹೋದರ ದೇವರಾಜ್, ಸಹೋದರಿ ಶ್ರೀ ಲಕ್ಷ್ಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್