Kasaragod: ದೇವಸ್ಥಾನಗಳ ಹುಂಡಿಯಿಂದ ಕಳವು
Team Udayavani, Feb 20, 2024, 12:19 AM IST
ಕುಂಬಳೆ: ಆರಿಕ್ಕಾಡಿ ಕೋಟೆ ಶ್ರೀ ಹನುಮಾನ್ ದೇವ ಸ್ಥಾನಕ್ಕೆ ನುಗ್ಗಿದ ಕಳ್ಳರು ಗರ್ಭಗುಡಿಯ ಹೊರಗಿರುವ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ದೋಚಿದ್ದಾರೆ. ಸುಮಾರು 30 ಸಾವಿರ ರೂ.ಗಿಂತ ಹೆಚ್ಚು ಮೊತ್ತ ಇದ್ದಿರ ಬಹು ದೆಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದೇ ದೇವಸ್ಥಾನದ ಬಳಿಯಿರುವ ಶ್ರೀ ಮಹಾಮಾಯಿ ದೇವಿಯ ಗುಡಿಯ ಕಾಣಿಕೆ ಹುಂಡಿಯಿಂದಲೂ ಸುಮಾರು 3 ಸಾವಿರ ರೂ. ಹಣ ದೋಚಿದ್ದಾರೆ. ಶನಿವಾರ ರಾತ್ರಿ ಕಳವು ನಡೆದಿರಬೇಕೆಂದು ಶಂಕಿಸಲಾಗಿದ್ದು, ರವಿವಾರ ಬೆಳಗ್ಗೆ ಅರ್ಚಕ ದೇವಸ್ಥಾನಕ್ಕೆ ಬಂದಾಗಲೇ ವಿಷಯ ತಿಳಿದು ಬಂತು.
ಮಲ್ಲಿಕಾರ್ಜುನ ದೇವಸ್ಥಾನ
ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಉಪದೇವ ರಾದ ಶ್ರೀ ಅಯ್ಯಪ್ಪ ಕ್ಷೇತ್ರದ ಕಾಣಿಕೆ ಹುಂಡಿಯನ್ನು ರವಿವಾರ ರಾತ್ರಿ ಕಳವು ಮಾಡ ಲಾಗಿದೆ. ರಾತ್ರಿ 12 ಗಂಟೆಯ ವರೆಗೆ ಕಾವಲುಗಾರ ಈ ಭಾಗದಲ್ಲಿ ಪರಿಶೋಧನೆ ನಡೆಸಿದ್ದರು. ಬಳಿಕ ಅಸೌಖ್ಯದ ಕಾರಣ ಔಷಧ ಸೇವಿಸಿದ್ದರಿಂದ ನಿದ್ದೆ ಹೋಗಿದ್ದರು.
ದೇವಸ್ಥಾನದ ಸಿಸಿ ಟಿವಿಯಲ್ಲಿ ಇಬ್ಬರು ವ್ಯಕ್ತಿಗಳ ದೃಶ್ಯ ಕಂಡು ಬಂದಿದೆ. ಓರ್ವ ಧೋತಿ ಹಾಗೂ ಇನ್ನೋರ್ವ ಫ್ಯಾಂಟ್ ಧರಿಸಿದ್ದ.
ಪ್ರತೀ ತಿಂಗಳು 20ನೇ ತಾರೀಕಿ ನಂದು ಹುಂಡಿಯಿಂದ ಹಣ ಲೆಕ್ಕ ಮಾಡಲಾಗುತ್ತದೆ. ಸುಮಾರು 1 ಲಕ್ಷ ರೂ.ಗೂ ಅಧಿಕ ಹಣ ಇರು ತ್ತದೆ. ದೇವಸ್ಥಾನದ ಅಧಿಕೃತರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಕಾಸರ ಗೋಡು ಕರಂದಕ್ಕಾಡಿನ ಪೆಟ್ರೋಲ್ ಬಂಕ್ನಿಂದಲೂ ಕಳವು ಯತ್ನ ನಡೆದಿದೆ.