Kasaragod ಸಾಕ್ಷಿದಾರನಿಗೆ ಬೆದರಿಕೆ: ಆರೋಪಿ ಬಂಧನ
Team Udayavani, Jan 23, 2024, 11:13 PM IST
ಕಾಸರಗೋಡು: ಸಾಕ್ಷಿದಾರನಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಳಿಯತ್ತಡ್ಕ ಪಳ್ಳ ರಸ್ತೆ ಬಳಿಯ ಉಸ್ಮಾನ್ ಕೆ. ಆಲಿಯಾಸ್ ಚಾರ್ಲಿ ಉಸ್ಮಾನ್ (42)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಬಸ್ ಸಿಬಂದಿಯಾಗಿರುವ ಪಾಡಿ ಎದುರ್ತೋಡು ನಿವಾಸಿ ನವೀನ್ ಕುಮಾರ್ (24) ಅವರಿಗೆ ಡಿ. 24ರಂದು ಬೆದರಿಕೆಯೊಡ್ಡಲಾಗಿತ್ತೆಂದು ಪೊಲೀಸರಿಗೆ ದೂರು ನೀಡಲಾಗಿತ್ತು. 2019ರಲ್ಲಿ ನವೀನ್ ಕುಮಾರ್ ಅವರ 5000 ರೂ. ಇದ್ದ ಪರ್ಸ್ ಅನ್ನು ಕಿತ್ತುಕೊಂಡು ಎಸೆದು ಹಲ್ಲೆ ಮಾಡಲಾಗಿತ್ತು. ನವೀನ್ ಕುಮಾರ್ ನೀಡಿದ ದೂರಿನಂತೆ ಪೊಲೀಸರು ಉಳಿಯತ್ತಡ್ಕದ ಚಾರ್ಲಿ ಸತ್ತಾರ್ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಚಾರ್ಲಿ ಸತ್ತಾರ್ ಚಾರ್ಲಿ ಉಸ್ಮಾನ್ನ ಸಹೋದರನಾಗಿದ್ದಾನೆ. ಈ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(2)ದಲ್ಲಿ ನಡೆಯುತ್ತಿದೆ. ಡಿ. 24ರಂದು ತನ್ನ ಸಹೋದರನ ವಿರುದ್ಧ ನ್ಯಾಯಾಲಯದಲ್ಲಿ ಹೇಳಿಕೆ ನೀಡಬಾರದೆಂದು ಹೇಳಿ ನವೀನ್ ಕುಮಾರ್ಗೆ ಚಾರ್ಲಿ ಉಸ್ಮಾನ್ ಬೆದರಿಕೆಯೊಡ್ಡಿರುವುದಾಗಿ ದೂರು ನೀಡಲಾಗಿತ್ತು. ನ್ಯಾಯಾಲಯದ ನಿರ್ದೇಶದಂತೆ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು