Chandrayaan- 3 ಯಶಸ್ಸಿನಲ್ಲಿ ಕಾಸರಗೋಡಿನ ಕೆ. ಅಶೋಕ್
Team Udayavani, Aug 29, 2023, 11:00 AM IST
ಕಾಸರಗೋಡು: ಚಂದ್ರಯಾನ – 3 ಯಶಸ್ಸಿನ ಹಿಂದೆ ನೂರಾರು ವಿಜ್ಞಾನಿಗಳು ತಮ್ಮದೇ ಕೊಡುಗೆ ನೀಡಿದ್ದು, ಕಾಸರಗೋಡು ಸೂರ್ಲು ನೀವಾಸಿ ಅಶೋಕ್ ಕೆ. ಕೂಡ ಭಾಗಿಯಾಗಿದ್ದಾರೆ.
ಚಂದ್ರಯಾನ – 2ರಲ್ಲಿ ಓರ್ಬಿಟ್ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಅವರು ಚಂದ್ರಯಾನ – 3ರಲ್ಲಿ ಪ್ರೊಪಲ್ಶನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇಸ್ರೋದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಲು ಆರಂಭಿಸಿದ ಅವರು ಉನ್ನತ ಅಧ್ಯಯನಕ್ಕಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಭೇಟಿ ಕೊಟ್ಟಿದ್ದರು. ಜಿಸ್ಯಾಟ್ 11 ಸ್ಯಾಟಲೈಟ್ ನ ಉನ್ನತ ಸಾಧನೆಗಾಗಿ ಟೀಮ್ ಎಕ್ಸೆಲೆನ್ಸಿ ಅವಾರ್ಡ್ ಅವರಿಗೆ ಲಭಿಸಿತ್ತು.
ಸೂರ್ಲು ನಿವಾಸಿಗಳಾದ ಕೆ. ಪುಟ್ಟ-ನಾಗವೇಣಿ ದಂಪತಿಯ ಪುತ್ರರಾಗಿರಾಗಿರುವ ಅವರು ಪ್ರಾಥಮಿಕ ಶಿಕ್ಷಣವನ್ನು ಕೂಡ್ಲು ಶ್ರೀ ಗೋಪಾಲ ಕೃಷ್ಣ ಪ್ರೌಢ ಶಾಲೆಯಲ್ಲಿ, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು ಪೆರಿಯಾದ ಪಾಲಿಟೆಕ್ನಿಕ್ ಕಾಲೇಜಿ ನಲ್ಲಿ ತೃತೀಯ ರ್ಯಾಂಕ್ನೊಂದಿಗೆ ಪೂರೈಸಿದ್ದರು. ವಿಶ್ವೇಶ್ವರಯ್ಯ ವಿ.ವಿ. ಯಲ್ಲಿ ಬಿ.ಇ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.