ಮಾದಕ ವಸ್ತು ಸಾಗಾಟ: ಉಪ್ಪಳ ನಿವಾಸಿ ಶಾಮೀಲು ಶಂಕೆ
Team Udayavani, Jun 2, 2022, 6:14 PM IST
ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಾಟ ಪ್ರಕರಣದಲ್ಲಿ ಉಪ್ಪಳ ನಿವಾಸಿ ಶಾಮೀಲಾದ ಬಗ್ಗೆ ಮಾಹಿತಿ ಲಭಿಸಿದೆ. ಇದರಂತೆ ಡಿಆರ್ಐ ಉಪ್ಪಳ ನಿವಾಸಿ ಆದಿಲ್ನನ್ನು ವಶಕ್ಕೆ ತೆಗೆದುಕೊಂಡಿದೆ.
ಗುಜರಾತ್ನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತುವನ್ನು ಇತ್ತೀಚೆಗೆ ವಶಪಡಿಸಲಾಗಿತ್ತು. ಪಾಕಿಸ್ತಾನದಿಂದ ಬಂದ ಬೋಟ್ನಲ್ಲಿ ಮಾದಕ ವಸ್ತುವಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರು ಕಾರ್ಯಾಚರಣೆ ನಡೆಸಿ ಬೋಟ್ ವಶಪಡಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಉಪ್ಪಳ ನಿವಾಸಿಯೂ ಮಾದಕ ವಸ್ತು ಸಾಗಾಟದಲ್ಲಿ ಶಾಮೀಲಾದ ಬಗ್ಗೆ ಸೂಚನೆ ಲಭಿಸಿತ್ತು.
ಇದರಂತೆ ಆದಿಲ್ನನ್ನು ಡಿಆರ್ಐ ಕಸ್ಟಡಿಗೆ ತೆಗೆದುಕೊಂಡಿತ್ತು. ಇದೇ ವೇಳೆ ಜೂ.1 ರಂದು ರಾತ್ರಿ 10.30 ಕ್ಕೆ ಡಿಆರ್ಐ ಕಸ್ಟಡಿಯಿಂದ ಈತ ಪರಾರಿಯಾಗಿದ್ದ. ಬಚ್ಚಲು ಕೊಠಡಿಗೆ ತೆರಳುವುದಾಗಿ ತಿಳಿಸಿ ಹೋದ ಆದಿಲ್ ಪರಾರಿಯಾಗಿದ್ದ. ಡಿಆರ್ಐ ತನಿಖೆ ನಡೆಸಿದರು ಆತ ಪತ್ತೆಯಾಗಲಿಲ್ಲ. ಕೂಡಲೇ ಅಧಿಕಾರಿಗಳು ಕಾಸರಗೋಡು, ಚಂದೇರ ಸಹಿತ ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು.
ಇದರಂತೆ ಚಂದೇರ ಎಸ್.ಐ. ಲಕ್ಷ್ಮನ್ ನೇತೃತ್ವದಲ್ಲಿ ಪೊಲೀಸರು ಈತನನ್ನು ಗುರುವಾರ ಮುಂಜಾನೆ 2 ಗಂಟೆಗೆ ಚೆರ್ವತ್ತೂರು ಜಂಕ್ಷನ್ನಿಂದ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಯಿತು.
ಈತನನ್ನು ಪೊಲೀಸರು ಡಿಆರ್ಐ ಗೆ ಹಸ್ತಾಂತರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…