ಕಾಸರಗೋಡು: 6 ಮಂದಿಗೆ ಸೋಂಕು
Team Udayavani, Jun 22, 2020, 7:23 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 6 ಮಂದಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ ಇಬ್ಬರು ಗುಣಮುಖರಾಗಿದ್ದಾರೆ. ಬಾಧಿತರಲ್ಲಿ ಮೂವರು ವಿದೇಶದಿಂದ, ಮೂವರು ಮಹಾರಾಷ್ಟ್ರದಿಂದ ಬಂದವರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್ ತಿಳಿಸಿದ್ದಾರೆ. ಬಾಧಿತರಲ್ಲಿ ಮಹಾರಾಷ್ಟ್ರದಿಂದ ಬಂದ ಮಂಗಲ್ಪಾಡಿಯ ಮೂವರು, ವಿದೇಶದಿಂದ ಬಂದ ಪಳ್ಳಿಕೆರೆ, ಚೆಂಗಳ ಮತ್ತು ಮಂಗಲ್ಪಾಡಿಯ ತಲಾ ಒಬ್ಬರು ಇದ್ದಾರೆ. ಉದಯಗಿರಿ ಸಿಎಫ್ಎಲ್ಟಿಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಮ್ನಾಡ್ ನಿವಾಸಿ, ಪುತ್ತಿಗೆ ನಿವಾಸಿ ಗುಣಮುಖರಾಗಿದ್ದಾರೆ. ಅವರಿಬ್ಬರೂ ಮಹಾರಾಷ್ಟ್ರದಿಂದ ಬಂದಿದ್ದರು.
ಕೇರಳದಲ್ಲಿ 133 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ರವಿವಾರ 133 ಮಂದಿಗೆ ಸೋಂಕು ದೃಢವಾಗಿದೆ. ತೃಶ್ಶೂರು-16, ಪಾಲ್ಗಟ್-15, ಕೊಲ್ಲಂ-13, ಇಡುಕ್ಕಿ-11, ಆಲಪ್ಪುಳ-10, ಕೋಟ್ಟಯಂ-10,ಮಲಪ್ಪುರಂ - 10, ಕಲ್ಲಿಕೋಟೆ-10, ಕಣ್ಣೂರು-10, ತಿರುವನಂತ ಪುರ-9, ಪತ್ತನಂ ತಿಟ್ಟ-8, ಕಾಸರಗೋಡು-6, ಎರ್ನಾಕುಳಂ-5 ಮಂದಿಯನ್ನು ಬಾಧಿಸಿದೆ. ಬಾಧಿತರಲ್ಲಿ 80 ಮಂದಿ ವಿದೇಶದಿಂದ ಬಂದವರು. 43 ಮಂದಿ ಇತರ ರಾಜ್ಯಗಳಿಂದ ಬಂದವರು. 9 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇಡುಕ್ಕಿ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರನ್ನು ಸೋಂಕು ಬಾಧಿಸಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 93 ಮಂದಿ ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್