ಕಾಸರಗೋಡು – ಕಯ್ಯಾರ ಕಿಂಞಣ್ಣ ರೈ ವಾಚನಾಲಯಕ್ಕೆ ಬೀಗ..!

ಕನ್ನಡಿಗರು ಎಚ್ಚೆತ್ತುಕೊಳ್ಳವುದೆಂದು....?

Team Udayavani, Apr 4, 2019, 7:53 PM IST

kayyara

ಬದಿಯಡ್ಕ : ಕವಿ, ಕನ್ನಡ ಹೋರಾಟಗಾರ, ನಾಡೋಜ ಕಯ್ಯಾರ ಕಿಂಞಣ್ಣ ರೈಯವರ ಹೆಸರಲ್ಲಿ ಅವರು ವಾಸವಾಗಿದ್ದ ಊರಲ್ಲಿ ಸ್ಥಾಪಿತವಾಗಿದ್ದ ವಾಚನಾಲಯ ಇಂದು ಅನಾಥವಾಗಿದೆ. ಉಪಯೋಗಶೂನ್ಯವಾಗಿ ಮೂಲೆ ಗುಂಪಾಗಿದೆ. ಪ್ರಸಿದ್ಧ ಕವಿ, ಶ್ರೇಷ್ಠ ಅಧ್ಯಾಪಕನ ಹೆಸರಲ್ಲಿ ಸ್ಥಾಪಿತವಾದ ವಾಚನಾಲಯವು ಈಗ ಪೊದೆಯಿಂದ ಆವೃತವಾಗಿದ್ದು ಅಸ್ತಿತ್ವವೇ ಮರೆಯಾಗಿರುವುದು ಕಂಡುಬರುತ್ತದೆ. ಸಾರ್ವಜನಿಕರಿಗೆ ಸಹಾಯಕವಾಗುವಂತೆ ಆರಂಭಿಸಿದ ವಾಚನಾಲಯವು ಓದುಗರಿಗೆ ಪ್ರಯೋಜನವಿಲ್ಲದಂತಾಗಿರುವುದು ಕಯ್ನಾರರಿಗೆ ಮಾಡಿದ ಅವಮಾನ.

ಈ ಹಿಂದಿನ ಪಂಚಾಯತು ಆಡಳಿತದ ಅವಧಿಯಲ್ಲಿ ಬದಿಯಡ್ಕ ಕೃಷಿ ಭವನದ ಬಳಿ ಪಂಚಾಯತು ವತಿಯಿಂದ ವ್ಯವಸ್ಥಿತವಾದ ವಾಚನಾಲಯವನ್ನು ಸ್ಥಾಪಿಸಲಾಗಿತ್ತು. ಹತ್ತು ಹಲವು ಜನಪ್ರತಿನಿಧಿಗಳ, ಸಾಹಿತಿಗಳ, ಕನ್ನಡ ಹೋರಾಟಗಾರರ ಉಪಸ್ಥಿತಿಯಲ್ಲಿ ಈ ವಾಚನಾಲಯವು ಅಂದಿನ ಶಿಕ್ಷಣ ಸಚಿವ ಅಬ್ದು ರಬ್‌ ಅವರಿಂದ ಉದ್ಘಾಟನೆಗೊಂಡಾಗ ಕಯ್ನಾರರ ಮೇಲೆ ಇದ್ದ ಪ್ರೀತಿ ಗೌರವ ಈಗ ಮಾಯವಾಗಿರುವುದು ವಿಪರ್ಯಾಸ. ಅಂದು ವಾಚನಾಲಯಕ್ಕೆ ಓರ್ವ ನೌಕರನನ್ನು ಕೂಡಾ ನೇಮಕ ಮಾಡಲಾಗಿತ್ತು. ಆದರೆ ಆರೇ ತಿಂಗಳಲ್ಲಿ ಈ ನೌಕರನನ್ನು ಹಿಂದಕ್ಕೆ ಕರೆಯಲಾಗಿತ್ತು. ಆ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಲಾಗಿದೆ.

ಇದೀಗ ಕಾಡು ಪೊದೆಯಿಂದ ಆವೃತವಾಗಿರುವ ವಾಚನಾಲಯವು ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದು ವಾಚಕರಿಗೆ ಇದು ಇದ್ದೂ ಇಲ್ಲದಂತಾಗಿದೆ.
ವಿಶ್ವ ತುಳು ಸಮ್ಮೇಳನದಂತಹ ಮಹತ್ವದ ಚಟುವಟಿಕೆಗಳಿಗೆ ವೇದಿಕೆಯಾಗಿರುವ, ಕನ್ನಡಿಗರೇ ಹೆಚ್ಚಾಗಿ ವಾಸವಾಗಿರುವ ಕನ್ನಡ ಪ್ರದೇಶದಲ್ಲಿ ಕನ್ನಡದ ಕವಿಗೆ ಮಾಡಿದ ಅವಮಾನ ಇಡೀ ಕನ್ನಡಿಗರಿಗೆ ಆದ ಅವಮಾನವೇ ಸರಿ. ಕಯ್ನಾರರ ಊರಲ್ಲಿ ಅವರದೇ ಹೆಸರಲ್ಲಿ ನಿರ್ಮಿಸಿದ ವಾಚನಾಲಯದ ಪಕ್ಕದಿಂದ ಹಾದುಹೋಗುವ ಕಯ್ಯಾರ ಕಿಂಞಣ್ಣ ರೈ ರಸ್ತೆಯ ಅವಸ್ಥೆಯೂ ಇದಕಿಂತ ಹೊರತಲ್ಲ. ನಡೆದುಹೋಗುವುದೇ ಕಷ್ಟವಾಗಿರುವ ರಸ್ತೆಯಲ್ಲಿ ಸಂಚಾರವೂ ದುಸ್ತರವೆನಿಸಿದೆ. ಇದಕ್ಕೆ ಯಾರು ಹೊಣೆ? ಕಾಸರಗೋಡಿನ ಕನ್ನಡ ಸಂಘಟನೆಗಳೂ , ಹೋರಾಟಗಾರರೂ ಯಾಕೆ ಮೌನವಾಗಿದ್ದಾರೆ. ಮಾತ್ರವಲ್ಲದೆ ಕನ್ನಡ ಪ್ರದೇಶದ ಕನ್ನಡಿಗರ ಪಂಚಾಯತು ಕೂಡಾ ಇತ್ತ ಗಮನ ಹರಿಸದಿರಲು ಕಾರಣವೇನು?

ಅಂದು ಕನ್ನಡಾಭಿಮಾನಿಗಳು ಹಲವಾರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ಮಾತ್ರವಲ್ಲದೆ ಓದುಗರು ದಿನನಿತ್ಯ ಆಗಮಿಸಿ ದಿನಪತ್ರಿಕೆ, ವಾರಪತ್ರಿಕೆಗಳೊಂದಿಗೆ ಲಭ್ಯವಿರುವ ಪುಸ್ತಕಗಳನ್ನೂ ಓದಿ ತಮ್ಮ ಅರಿವಿನ ದಾಹವನ್ನು ನೀಗಿಸುತ್ತಿದ್ದರು. ಆದರೆ ಕ್ರಮೇಣ ಸಮಯಕ್ಕೆ ಸರಿಯಾಗಿ ತೆರೆಯದ ವಾಚನಾಲಯ ಸಾರ್ವಜನಿಕರ ಪಾಲಿಗೆ ಮರೀಚಿಕೆಯಾಯಿತು.

ಇಂದು ಕಯ್ಯಾರರ ಸ್ಮರಣೆಯ ತಾಣವಾದ ಈ ವಾಚನಾಲಯದ ತುಕ್ಕು ಹಿಡಿದ ಬೀಗ ಜನರನ್ನು ನೋಡಿ ಅಣಕಿಸುವಂತೆ ಭಾಸವಾಗುತ್ತದೆ. ಮಾತ್ರವಲ್ಲದೆ ಒಡೆದ ಕಿಟಿಕಿಯ ಗಾಜಿನ ಮೂಲಕ ಒಳಗೆಲ್ಲ ಧೂಳು ಆವರಿಸಿದೆ. ಪ್ರತಿದಿನ ದಿನಪತ್ರಿಕೆಯನ್ನು ತಂದು ಹಾಕಲಾಗುತ್ತದೆಯಾದರೂ ಅದರ ಕಟ್ಟುಬಿಚ್ಚುವವರೂ ಕೂಡ ಅಲ್ಲಿಲ್ಲ. ಹಾಗಾಗಿ ಪತ್ರಿಕೆಗಳ ಕಟ್ಟುಗಳ ರಾಶಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬರುತ್ತದೆ.

ಕಯ್ಯಾರರ ಹೆಸರಿಗೆ ಆಗುವ ಅನ್ಯಾಯದ ಕುರಿತು ಯಾರೂ ದನಿ ಎತ್ತುವುದಿಲ್ಲ. ಭಾಷಾ ಸಂರಕ್ಷಣೆ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಎದುರು ಹೋರಾಡುವ (ಕಾಸರಗೋಡಿನ )ಕನ್ನಡಿಗರು ಕನ್ನಡದ ನಾಡೋಜ ಕವಿಗೆ ಆಗುತ್ತಿರುವ ಅವಮಾನವನ್ನು ಕಾಣುವುದಿಲ್ಲ. ನಮ್ಮ ಕಣ್ಣಿಗೆ ಅಂಟಿದ ಪರದೆಯ ಸರಿಸಿ ಒಳಗಣ್ಣು ತೆರೆದು ನೋಡದಿದ್ದರೆ ಕಾಲ ಮಿಂಚಿಹೋದಮೇಲೆ ದುಃಖೀಸಿ ಫಲವಿಲ್ಲ. ಕಯ್ಯಾರರೆ ಹೇಳಿದಂತೆ
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ… ಇನ್ನಾದರೂ ಕನ್ನಡದ ಕಣ್ಮಣಿಗಳ ಹೆಸರ ಉಳಿಸ ಬನ್ನಿ…
ಈ ವಾಚನಾಲಯವನ್ನು ದಿನಪೂರ್ತಿ ತೆರೆದಿಟ್ಟು ಜನರಿಗೆ ಫಲಪ್ರದವಾಗುವಂತೆ ಮಾಡಬೇಕು, ಓರ್ವ ಪೂರ್ಣಕಾಲಿಕ ನೌಕರನನ್ನು ನೇಮಕ ಮಾಡಬೇಕೆಂಬ ಸಾರ್ವಜನಿಕರ ಆಗ್ರಹ ಇನ್ನಾದರೂ ಪೂರ್ಣಗೊಳ್ಳುವುದೇ ? ಕಾದು ನೋಡೋಣ.

  • ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.