ಕೊಡಗಿನ ಹಿರಿಯ ಪತ್ರಕರ್ತ ಮನುಶೆಣೈ ನಿಧನ
Team Udayavani, Jun 26, 2022, 12:05 PM IST
ಕೊಡಗು: ಕೊಡಗಿನ ಪತ್ರಿಕಾಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಬಿ.ಎನ್. ಮನುಶೆಣೈ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಪ್ರಗತಿಪರ ಚಿಂತಕ, ದಿವಂಗತ ಎ.ಕೆ ಸುಬ್ಬಯ್ಯನವರ ಆತ್ಮೀಯ ವಲಯದಲ್ಲಿದ್ದ ವಿರಾಜಪೇಟೆ ನಗರದ ನಿವಾಸಿ ಮನು ಶೆಣೈ ಅವರ ಅಗಲಿಕೆ ಕೊಡಗು ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ.
ಅರವತ್ತಾನಾಲ್ಕು ವರ್ಷದ ಮನುಶೆಣೈ ಅವರಿಗೆ ಕಳೆದ ಕೆಲದಿನಗಳಿಂದ ಅನಾರೋಗ್ಯ ಸಮಸ್ಯೆ ಕಾಡಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.