ಕುಂಬಳೆ ಪಂಚಾಯತ್ ಬಿ.ಜೆ.ಪಿ. ಸಮಿತಿ ಸಮಾವೇಶ
Team Udayavani, Jul 3, 2019, 5:51 AM IST
ಕುಂಬಳೆ: ಕುಂಬಳೆ ಪಂಚಾ ಯತ್ ಬಿಜೆಪಿ ಸಮಿತಿ ಸಮಾವೇಶವು ಕುಂಬಳೆಯಲ್ಲಿ ಜರಗಿತು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಪಿ. ಸುರೇಶ್ ಕುಮಾರ್ ಶೆಟ್ಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ದ್ವಿತೀಯ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರಕ್ಕೇರಿದ ಎನ್. ಡಿ.ಎ. ಸರಕಾರ ಮುಂದಿನ ದಿನಗಳಲ್ಲಿ ಕೃಷಿಕರ ಸಹಿತ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲಿರುವುದಾಗಿ ಹೇಳಿದರು. ಜು. 6ರಿಂದ ಆರಂಭವಾಗಲಿರುವ ಪಕ್ಷದ ಸದಸ್ಯತನ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಕುಂಬಳೆ ಪಂಚಾಯತ್ ಬಿಜೆಪಿ ಸಮಿತಿ ಅಧ್ಯಕ್ಷ ಕೆ. ಶಂಕರ ಆಳ್ವ ಅಧ್ಯಕ್ಷತೆ ವಹಿಸಿದರು. ಮಂಡಲ ಉಪಾಧ್ಯಕ್ಷ ಕೆ. ವಿನೋದನ್, ಯುವಮೋರ್ಚಾ ಮಂಡಲಾಧ್ಯಕ್ಷ ಚಂದ್ರಕಾಂತ ಶೆಟ್ಟಿ, ನಾಯಕ ರಾದ ರಾಧಾಕೃಷ್ಣ ರೈ ಮಡ್ವ,ಬಾಬು ಗಟ್ಟಿ, ಕಮಲಾಕ್ಷ ಆರಿಕ್ಕಾಡಿ, ಶಶಿ ಕುಂಬಳೆ, ಮಧುಸೂದನ್, ಕೆ. ರಮೇಶ್ ಭಟ್, ಮುರಳೀಧರ ಯಾದವ್, ಮಣಿಕಂಠ ರೈ, ರಾಮಚಂದ್ರ ಕೋಟೆಕ್ಕಾರು, ಹರೀಶ್ ಗಟ್ಟಿ, ಸುಜಿತ್ ರೈ, ಪುಷ್ಪಲತಾ ಭಾಗವಹಿಸಿ ಮಾತನಾಡಿದರು.
ಸಭೆಯಲ್ಲಿ ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನ ಸರಕಾರಿ ನೇಮಿತ ಆಡಳಿತ ಸಮಿತಿ ಸಹಕಾರಿ ಅಧಿಕಾರಿ ಮತ್ತು ಕೆಲವು ಎಡರಂಗ ಐಕ್ಯರಂಗಗಳ ನಾಯಕರು ಶಾಮೀಲಾಗಿ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಕಾನೂನು ಬಾಹಿರವಾಗಿ ಸದಸ್ಯತನ ಸ್ವೀಕರಿಸಿದ ಕೃತ್ಯವನ್ನು ಖಂಡಿಸಲಾಯಿತು. ಕೆ. ಸುಧಾಕರ ಕಾಮತ್ ಸ್ವಾಗತಿಸಿದರು.ಸರೇಶ್ ಶಾಂತಿಪ್ಪಳ್ಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ