ಕೆಸರಲ್ಲಿ ಮೈಮರೆತು ಆಡಿ, ಹಾಡಿ, ಕುಣಿದು ಸಂಭ್ರಮಿಸೋಣ:ಮಾಲತಿ ಸುರೇಶ್‌


Team Udayavani, Jul 25, 2019, 5:58 AM IST

23VNR-PIC01B

ವಿದ್ಯಾನಗರ: ಯುವ ಪೀಳಿಗೆಗೆ ಪರಂಪರಾಗತ ಕೃಷಿ ಪದ್ಧತಿಯ ಸಂದೇಶವನ್ನು ಹಾಗೂ ಕೃಷಿ ಸಂಸ್ಕೃತಿಯ ಮಹತ್ವ ತಿಳಿಸುವ ಪ್ರಯತ್ನವೇ ಮಳೆ ಸೊಬಗು. ಮರೆಯಾಗುವ ಗ್ರಾಮದ ಕಡೆಗಿನ ಆಸಕ್ತಿ, ಕೃಷಿಯ ಮೇಲಿನ ಪ್ರೀತಿಯನ್ನು ಮರಳಿ ತರುವ ಉದ್ಧೇಶದೊಂದಿಗೆ ಮುಂಗಾರು ಮಳೆಯ ಸ್ಪರ್ಶವನ್ನು, ನೀರಾಟದ ಸೊಬಗನ್ನು ಆಸ್ವಾದಿಸುತ್ತಾ ಶಾರೀರಿಕ ಮಾನಸಿಕ ಕ್ರಿಯಾಶೀಲತೆಯನ್ನು ಪರೀಕ್ಷಿಸುವ ಸ್ಪರ್ಧೆಗಳನ್ನೂ ಆಯೋಜಿಸಿ ಹೊಸತನವನ್ನು ತುಂಬುವ ಹಾಗೂ ಗದ್ದೆಯ ಕೆಸರಿನಲ್ಲಿರುವ ನಿಜವಾದ ಆನಂದವನ್ನು ನೀಡುವ ಉದ್ದೇಶದಿಂದ ಏರ್ಪಡಿಸಲಾದ ಮಳೆ ಸೊಬಗು ಹೊಸ ಅನುಭವ ಎಂದು ಮಧೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಲತಿ ಸುರೇಶ್‌ ತಿಳಿಸಿದರು.
ಮಧೂರು ಗ್ರಾಮ ಪಂಚಾಯತ್‌ ಕುಟುಂಬಶ್ರೀ ಸಿಡಿಎಸ್‌ ಸಂಯುಕ್ತಾಶ್ರಯದಲ್ಲಿ ಮಧೂರು ಚೇನಕ್ಕೋಡು ಪಾರಶೇಖರದಲ್ಲಿ ಜರುಗಿದ ಮಳೆ ಸೊಬಗು-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಕೆಸರೇ ನಮ್ಮ ಅನ್ನದ ಮೂಲ. ಕೆಸರಲ್ಲಿ ಬಿತ್ತಿದ ಬೀಜ ನಮ್ಮ ಹಸಿವನ್ನು ನೀಗಿಸುವಾಗ ಆ ಕೆಸರಲ್ಲಿ ಒಂದು ದಿನವಾದರೂ ಮೈಮರೆತು ಆಡಿ, ಹಾಡಿ, ಕುಣಿಯೋಣ ಎಂದು ಹೇಳಿದರು.

ಮಳೆ ಸೊಬಗಿನ ಅಧ್ಯಕ್ಷತೆ ವಹಿಸಿದ್ದ ಮಧೂರು ಗ್ರಾಮ ಪಂಚಾಯತ್‌ ಸಿಡಿಎಸ್‌ ಅಧ್ಯಕ್ಷೆ ರೇಣುಕಾ ಮಾತನಾಡಿ ಇಂತಹ ಕಾರ್ಯಕ್ರಮಗಳ ಮೂಲಕ ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ದೇಶದ ಹಸಿವನ್ನು ನೀಗಿಸಲು ಕೃಷಿಕರು ಪಡುವ ಕಷ್ಟವನ್ನು° ಮನಗಾಣುವಂತೆ ಮಾಡಬೇಕು. ನಮ್ಮ ಪೂರ್ವಜರು ಹೊಲ-ಗದ್ದೆಗಳಲ್ಲಿ ಕೆಸರಲ್ಲಿ ಬೆವರು ಸುರಿಸಿ ದುಡಿದು ಕುಟುಂಬವನ್ನು ಸಾಕುತ್ತಿದ್ದರು. ಮಣ್ಣಿನ ಮಹತ್ವವನ್ನು ಅರಿತು ಪರಿಸರವನ್ನು ನಾಶ ಮಾಡುವುದಲ್ಲ ಉಳಿಸಿ ಮುಂದಿನ ಜನಾಂಗಕ್ಕೆ ನೀಡಬೇಕು ಎಂಬ ಪ್ರಜ್ಞೆಯನ್ನು ಮೂಡಿಸಬೇಕು.ಎಂದರು.

ಕಾಸರಗೋಡು ಬ್ಲೋಕ್‌ ಪಂಚಾಯತ್‌ ಸದಸ್ಯ ಪ್ರಭಾಶಂಕರ ಮಾಸ್ಟರ್‌, ಬ್ಲೋಕ್‌ ಪಂಚಾಯತ್‌ ಸದಸ್ಯೆ ಯಶೋಧ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಆವಿನ್‌.ಎಸ್‌.ವಿ, ಆರೋಗ್ಯ-ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪ, ಪಂಚಾಯತ್‌ ಸದಸ್ಯ ಯೋಗೀಶ್‌.ಎಂ.ಆರ್‌, ಕುಟುಂಬಶ್ರೀ ಡಿಎಂಸಿ ಸುರೇಂದ್ರನ್‌.ಟಿ.ಟಿ, ಪಂಚಾಯತ್‌ ಉಪಾಧ್ಯಕ್ಷ ದಿವಾಕರ ಆಚಾರ್ಯ, ಮಧೂರು ಪಂಚಾಯತ್‌ ಕಾರ್ಯದರ್ಶಿ ಎ.ಆರ್‌.ಪ್ರಶಾಂತ್‌ ಕುಮಾರ್‌, ಕೃಷ್ಣ ಕುಮಾರ್‌ ಎಂ.ಎಸ್‌, ಕೃಷಿ ಅಧಿಕಾರಿ ಬಿಂದು ಶುಭ ಹಾರೈಸಿದರು.

ಓಟದ ಸ್ಪರ್ಧೆ, ಚೆಂಡಾಟ, ಹಗ್ಗ ಜಗ್ಗಾಟ, ಲಿಂಬೆ ಚಮಚ ಮುಂತಾದ ಸ್ಪರ್ಧೆಗಳಲ್ಲಿ ಪುಟ್ಟ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಭಾಗವಹಿಸಿದರು. ಮಧ್ಯಾಹ್ನದ ಬಿಸಿಯೂಟದ ಜತೆಗೆ ಪಾಯಸದ ಸವಿ ಹೊಟ್ಟೆಯ ಹಸಿವು ತಣಿಸಿತು. ಆಕರ್ಷಕ ಮೆರವಣಿಗೆ ಮಧೂರು ಕ್ಷೇತ್ರದ ಪರಿಸರದಿಂದ ಪ್ರಾರಂಭಗೊಂಡು ಪರಕ್ಕಿಲ ಪಾರಶೇಖರ ಕೆಸರುಗದ್ದೆ ಬಳಿ ಕೊನೆಗೊಂಡಿತು. ಸಮವಸ್ತ್ರ ಧರಿಸಿದ ಮಹಿಳೆಯರು, ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು. ಪಂಚಾಯತಿನ ಎಲ್ಲಾ ಕುಟುಂಬಶ್ರೀ ಬಾಲಸಭೆ, ಜೆ.ಎಲ್‌.ಜಿ ಸದಸ್ಯರು, ಶಾಲಾ ಮಕ್ಕಳು, ಕ್ಲಬ್‌ ಸದಸ್ಯರು , ಪಾರಶೇಖರ ಸಮಿತಿ ಸದಸ್ಯರು, ಊರಜನರು ಹಾಗೂ ಪಂಚಾಯತ್‌ ಉದ್ಯೋಗಸ್ಥರು ಪಾಲ್ಗೊಂಡರು. ಉಪಾಧ್ಯಕ್ಷೆ,ಶಾರದ ಎಂ.ಕೆ ಸ್ವಾಗತಿಸಿ, ವಂದಿಸಿದರು.

ಹೆಜ್ಜೆ ಮುಂದಿಡುವುದೇ ಕಷ್ಟ
ಕೆಸರುಗದ್ದೆಯಲ್ಲಿ ಹೆಜ್ಜೆ ಮುಂದಿಡುವುದೇ ಕಷ್ಟ ಹಾಗಿದ್ದರೂ ಅಂಜದೆ ಆಡುವ ಓಡುವ ಕಠಿನ ಕಾರ್ಯವನ್ನೂ ಪೊÅàತ್ಸಾಹ ಹಾಗೂ ಸ್ಪರ್ಧೆಯ ಪೈಪೋಟಿ ಸುಲಭವಾಗಿಸಿತು. ಪಾರಂಪರಿಕ ಕ್ರೇಡೆಯನ್ನು ನೆನಪಿಸಿದ ಉತ್ಸವವಿದು. ಕಾಲು ಹೂತು ಹೋಗುತ್ತಿದ್ದರೂ ಹೆಣಗಾಡಿ ಗೆಲ್ಲುವ ಆಟಗಳು ರೋಮಾಂಚಕ ಅನುಭವ ನೀಡಿದುವು. ನಮ್ಮ ಜೀವನಾಡಿಯಾಗಿದ್ದ ಸಂಸ್ಕೃತಿಯ ಉಳಿವಿಗೆ ಇಂತಹ ಉತ್ಸವಗಳ ಅಗತ್ಯವಿದೆ.
– ಶ್ರೀಧರ್‌ ಕೂಡ್ಲು
ಸದಸ್ಯರು, ಮಧೂರು ಗ್ರಾಮ ಪಂಚಾಯತ್‌

ಟಾಪ್ ನ್ಯೂಸ್

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.