ಪಾಣಾಜೆ ಅರ್ಧಮೂಲೆ – ಕಾಟುಕುಕ್ಕೆ – ಅಡ್ಕ ಸ್ಥಳ ರಸ್ತೆ ದುರಸ್ತಿ
Team Udayavani, Jul 6, 2017, 3:45 AM IST
ಮುಳ್ಳೇರಿಯ: ಪಾಣಾಜೆ – ಅರ್ಧಮೂಲೆ – ಕಾಟುಕುಕ್ಕೆ – ಅಡ್ಕಸ್ಥಳ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಹೊಂಡ, ರಸ್ತೆಗೆ ಬಾಗಿ ನಿಂತಿದ್ದ ಪೊದೆ ತೆರವು ಹಾಗು ಮಳೆ ನೀರು ಸುಗಮವಾಗಿ ಹರಿದು ಹೋಗಲು ಪೂರಕವಾದ ಅಡ್ಡ ಕಣಿವೆ ವ್ಯವಸ್ಥೆಗಳನ್ನು ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿ ಸುದರ್ಶನ ಹಾಗೂ ಅಶ್ವತ್ಥ ಕಟ್ಟೆ ಸೇವಾ ಸಮಿತಿ ಖಂಡೇರಿ ಸದಸ್ಯರು ಜಂಟಿಯಾಗಿ ನಿರ್ವಹಿಸಿದರು.
ಕಾಟುಕುಕ್ಕೆ ದೇವಸ್ಥಾನ ತಿರುವು ರಸ್ತೆ ಬಳಿ ಹಾಗೂ ಭಂಡಾರದ ಮನೆ ಸಮೀಪವಿದ್ದ ಹೊಂಡಗಳನ್ನು ಮುಚ್ಚಲಾಯಿತು. ಅಜಿತ್ ಸ್ವರ್ಗ, ಜಗದೀಶ್ ಕುತ್ತಾಜೆ, ಪದ್ಮನಾಭ ಭಟ್ ಖಂಡೇರಿ, ಕಾರ್ತಿಕ್ ಶಾಸ್ತಿ ಖಂಡೇರಿ, ಪ್ರದೀಪ್ ಕೆ.ಪಿ, ಸಾತ್ವಿಕ್ ಎಸ್, ಗೋವಿಂದ ಭಟ್ ಮೊಳಕ್ಕಾಲು, ಮಂಜುನಾಥ ದಂಬೆಕ್ಕಾನ, ಕರುಣಾಕರ ಕಯ್ಯಂಕೂಡ್ಲು, ನಾಯ್ಕ ಅರ್ಧಮೂಲೆ ಭಾಗವಹಿಸಿದರು. ವಾರ್ಡ್ ಸದಸ್ಯೆ ಮಲ್ಲಿಕಾ ರೈ ಉಪಸ್ಥಿತರಿದ್ದರು. ಪದ್ಮನಾಭ ಭಟ್ ಖಂಡೇರಿ ಅವರು ಪಿಕ್ ಅಪ್ ವಾಹನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಮಾಡಿದರು. ಇದೇ ವೇಳೆ ಇಳಂತೋಡಿ ಅಂಗನವಾಡಿ ಪರಿಸರವನ್ನು ಇಳಂತೋಡಿ ಭಾಗದ ಸುದರ್ಶನ ತಂಡದ ಸದಸ್ಯರಾದ ರಾಧಾಕೃಷ್ಣ ಇಳಂತೋಡಿ, ನಿತೇಶ್ ಇಳಂತೋಡಿ, ಹರಿಪ್ರಸಾದ್ ಹಾಗೂ ಗೋವಿಂದ ನಾಯ್ಕ ಶುಚಿಗೊಳಿಸಿದರು.