ಪೈವಳಿಕೆ ಚೇವಾರು: ಅಂಗಡಿಗೆ ನುಗ್ಗಿ ವ್ಯಾಪಾರಿಯ ಬರ್ಬರ ಕೊಲೆ
Team Udayavani, May 4, 2017, 6:18 PM IST
ಪೈವಳಿಕೆ ಚೇವಾರಿನಲ್ಲಿ ಓಮ್ನಿ ವ್ಯಾನಿನಲ್ಲಿ ಆಗಮಿಸಿದ ನಾಲ್ಕು ಮಂದಿಯ ತಂಡ ವ್ಯಾಪಾರಿಯೊಬ್ಬರನ್ನು ಅಂಗಡಿಗೆ ನುಗ್ಗಿ ಇರಿದು ಕೊಲೆಗೈದಿದೆ. ಚೇವಾರ್ ಮಂಡಕಾಪು ನಿವಾಸಿ ರಾಮಕೃಷ್ಣ (55) ಕೊಲೆಗೀಡಾದ ವ್ಯಾಪಾರಿ. ಗುರುವಾರ ಮದ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದೆ. ಓಮ್ನಿ ವ್ಯಾನಿನಲ್ಲಿ ಆಗಮಿಸಿದ ಒಬ್ಬ ಯುವಕ ರಾಮಕೃಷ್ಣರ ಅಂಗಡಿ ಬಂದಿ ಸಿಗರೇಟು ಕೇಳಿ ಪಡೆದುಕೊಂಡು ಹೊರ ಬಂದಿದ್ದಾನೆ. ಬಳಿಕ ಓಮ್ನಿಯಲ್ಲಿದ್ದ ಮೂರು ಮಂದಿ ನೇರವಾಗಿ ಅಂಗಡಿಗೆ ನುಗ್ಗಿ ವ್ಯಾಪಾರಿಯನ್ನು ಇರಿದಿದ್ದಾರೆ. ಬೊಬ್ಬೆ ಕೇಳಿ ಊರವರು ಆಗಮಿಸುವಷ್ಟರಲ್ಲಿ ಆರೋಪಿಗಳು ಓಮ್ನಿಯಲ್ಲಿ ಪರಾರಿಯಾಗಿದ್ದಾರೆ. ಶರೀರದಲ್ಲಿ ಹಲವು ಭಾಗಗಳಿಗೆ ಇರಿತಕ್ಕೊಳಗಾದ ರಾಮಕೃಷ್ಣರನ್ನು ಮಂಗಳೂರು ಆಸ್ಪತ್ರೆಗೆ ಕೊಂಡುಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಪೆರ್ಮುದೆ ರಾಮಕೃಷ್ಣ ಕೊಲೆ ಖಂಡನೀಯ ಉನ್ನತ ತನಿಖೆಗೆ ನ್ಯಾ ಶ್ರೀಕಾಂತ್ ಆಗ್ರಹ
ಮಂಗಲ್ಪಾಡಿ ಶವಾಗಾರ ದಲ್ಲಿ ಮೃತದೇಹ ನೋಡಿದ ಬಳಿಕ ಮಾಧ್ಯಮಗಳಿಗೆ ವಿವರ ನೀಡಿದ ಶ್ರೀಕಾಂತ್. ಬಿಜೆಪಿ ನೇತಾರರಾದ , ಸುರೇಶ ಕುಮಾರ್ ಶೆಟ್ಟಿ, ಆದರ್ಶ್ ಬಿಎಂ, ವೆಲಾಯುಧನ್, ಹರೀಶ್ ಎಪಿ, ವಿಜಯ್ ರೈ, ವಲ್ಸರಾಜ್, ಪ್ರಸಾದ್ ರೈ, ಪದ್ಮನಾಭ ಕಡಪ್ಪುರ,ಧನರಾಜ್ ಈ ಸಂದರ್ಭ ಉಪಸ್ಥಿತರಿದ್ದು ,2 ದಿನಗಳಲ್ಲಿ ಆರೋಪಿಗಳ ಬಂಧನವಾಗದಿದ್ದಲ್ಲಿ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ.ಮುಸ್ಲಿಂ ಲೀಗ್, ldf, ಆಡಳಿತದಲ್ಲಿ 1 ವರ್ಷದಲ್ಲಿ 10 ಕ್ಕೂ ಅಧಿಕ ಕೊಲೆ ಮಂಜೇಶ್ವರ ಮಂಡಲದಲ್ಲಿ ನಡೆದಿದ್ದು ಮರಳು ,ಗಾಂಜಾ ಮಾಫಿಯಾಕ್ಕೆ ಆಡಳಿತ ಪಕ್ಷಗಳ ಬೆಂಬಲವೇ ಇದಕ್ಕೆ ಕಾರಣ ಎಂದು ಬಿಜೆಪಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ